<p><strong>ನ್ಯೂಯಾರ್ಕ್: </strong>‘ಭಾರತವು ಧುವ್ರೀಕರಣಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೇತುವೆಯಾಗಿದೆ. ಭದ್ರತಾ ಮಂಡಳಿಯ ಭಿನ್ನಪ್ರಾಯಗಳನ್ನು ಶಮನಗೊಳಿಸುವಲ್ಲಿ ದೇಶವು ನೆರವಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ತಿಳಿಸಿದರು.</p>.<p>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ತಾತ್ಕಾಲಿಕ ಸದಸ್ಯನಾಗಿ ಭಾರತ ಮೂರು ತಿಂಗಳು ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಶ್ವಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ,‘ಮಂಡಳಿಯ ಚರ್ಚೆಗಳಿಗೆ ‘ವಿಶಿಷ್ಟ ದೃಷ್ಟಿಕೋನ’ ನೀಡುವಲ್ಲಿ ಭಾರತ ನೆರವಾಗಿದೆ. ಬೇಕಾದರೆ ಇದನ್ನು ಭಾರತದ ದೃಷ್ಟಿಕೋನ ಅಂತಲೂ ಕರೆಯಬಹುದು’ ಎಂದರು.</p>.<p>‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಧ್ರುವೀಕರಣಕೊಂಡಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮಂಡಳಿಯಲ್ಲಿರುವ ಭಿನ್ನಭಿಪ್ರಾಯಗಳನ್ನು ಸಂಕುಚಿತಗೊಳಿಸುವಲ್ಲಿ ಭಾರತ ಸೇತುವೆಯ ಪಾತ್ರ ನಿರ್ವಹಿಸುತ್ತಿದೆ. ಭಾರತವು ಮಂಡಳಿಯ ಸದಸ್ಯರೊಂದಿಗೆ ಸೇರಿ ರಚನಾತ್ಮಕ ಕೆಲಸವನ್ನು ಮಾಡುತ್ತದೆ. ಮಂಡಳಿಯು ಕೂಡ ನಮ್ಮ ಅಭಿಪ್ರಾಯಗಳನ್ನು ಗೌರವಿಸುತ್ತದೆ’ ಎಂದು ಅವರು ಹೇಳಿದರು.</p>.<p>‘ಮ್ಯಾನ್ಮಾರ್ನಲ್ಲಿ ಪ್ರಜಾಪ್ರಭುತ್ವತೆ ಮರುಸ್ಥಾಪನೆ, ಅಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಸಿರಿಯಾದಲ್ಲಿ ಭಯೋತ್ಪಾದನೆ ನಿಗ್ರಹದ ಕುರಿತಂತೆ ಭಧ್ರತಾ ಮಂಡಳಿಗೆ ವಿಭಿನ್ನ ದೃಷ್ಟಿಕೋನ ನೀಡಲು ಭಾರತ ನೆರವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಸಮಸ್ಯೆ ಬಗ್ಗೆ ಮೌನ ವಹಿಸುವುದಕ್ಕಿಂತ ಮಾತನಾಡುವುದೇ ಒಳಿತು. ಹಾಗಾಗಿ ಭದ್ರತಾ ಸಮಿತಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್: </strong>‘ಭಾರತವು ಧುವ್ರೀಕರಣಗೊಂಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೇತುವೆಯಾಗಿದೆ. ಭದ್ರತಾ ಮಂಡಳಿಯ ಭಿನ್ನಪ್ರಾಯಗಳನ್ನು ಶಮನಗೊಳಿಸುವಲ್ಲಿ ದೇಶವು ನೆರವಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ತಿಳಿಸಿದರು.</p>.<p>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ತಾತ್ಕಾಲಿಕ ಸದಸ್ಯನಾಗಿ ಭಾರತ ಮೂರು ತಿಂಗಳು ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಶ್ವಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ,‘ಮಂಡಳಿಯ ಚರ್ಚೆಗಳಿಗೆ ‘ವಿಶಿಷ್ಟ ದೃಷ್ಟಿಕೋನ’ ನೀಡುವಲ್ಲಿ ಭಾರತ ನೆರವಾಗಿದೆ. ಬೇಕಾದರೆ ಇದನ್ನು ಭಾರತದ ದೃಷ್ಟಿಕೋನ ಅಂತಲೂ ಕರೆಯಬಹುದು’ ಎಂದರು.</p>.<p>‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಧ್ರುವೀಕರಣಕೊಂಡಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮಂಡಳಿಯಲ್ಲಿರುವ ಭಿನ್ನಭಿಪ್ರಾಯಗಳನ್ನು ಸಂಕುಚಿತಗೊಳಿಸುವಲ್ಲಿ ಭಾರತ ಸೇತುವೆಯ ಪಾತ್ರ ನಿರ್ವಹಿಸುತ್ತಿದೆ. ಭಾರತವು ಮಂಡಳಿಯ ಸದಸ್ಯರೊಂದಿಗೆ ಸೇರಿ ರಚನಾತ್ಮಕ ಕೆಲಸವನ್ನು ಮಾಡುತ್ತದೆ. ಮಂಡಳಿಯು ಕೂಡ ನಮ್ಮ ಅಭಿಪ್ರಾಯಗಳನ್ನು ಗೌರವಿಸುತ್ತದೆ’ ಎಂದು ಅವರು ಹೇಳಿದರು.</p>.<p>‘ಮ್ಯಾನ್ಮಾರ್ನಲ್ಲಿ ಪ್ರಜಾಪ್ರಭುತ್ವತೆ ಮರುಸ್ಥಾಪನೆ, ಅಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಸಿರಿಯಾದಲ್ಲಿ ಭಯೋತ್ಪಾದನೆ ನಿಗ್ರಹದ ಕುರಿತಂತೆ ಭಧ್ರತಾ ಮಂಡಳಿಗೆ ವಿಭಿನ್ನ ದೃಷ್ಟಿಕೋನ ನೀಡಲು ಭಾರತ ನೆರವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಸಮಸ್ಯೆ ಬಗ್ಗೆ ಮೌನ ವಹಿಸುವುದಕ್ಕಿಂತ ಮಾತನಾಡುವುದೇ ಒಳಿತು. ಹಾಗಾಗಿ ಭದ್ರತಾ ಸಮಿತಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>