<p><strong>ಬ್ರಸೆಲ್ಸ್</strong>: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇತ್ತೀಚೆಗೆ ನಡೆದ ಸಂಘರ್ಷವು ಎರಡು ರಾಷ್ಟ್ರಗಳ ನಡುವಿನ ಕದನವಲ್ಲ; ಇದು ಭಯೋತ್ಪಾದನೆ ಮೂಲೋತ್ಪಾಟನೆಯ ಸಮರ ಎಂದು ಬೆಲ್ಜಿಯಂನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.</p>.<p>ಇದನ್ನು (ಭಯೋತ್ಪಾದನೆ) ಹೀಗೆಯೇ ಬಿಟ್ಟರೆ ಪಶ್ಚಿಮ ರಾಷ್ಟ್ರಗಳನ್ನೂ ಕಾಡಲು ಆರಂಭಿಸುತ್ತದೆ ಎಂದು ಜೈಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಐರೋಪ್ಯ ರಾಷ್ಟ್ರದ ಸುದ್ದಿ ಜಾಲ ‘ಯುರೈಕ್ಟೀವ್’ಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ ಜೈಶಂಕರ್, ಪಹಲ್ಗಾಮ್ ದಾಳಿಗೆ ಭಾರತ ನೀಡಿದ ‘ಆಪರೇಷನ್ ಸಿಂಧೂರ’ ಪ್ರತ್ಯುತ್ತರದ ಬಗ್ಗೆ ಮಾಹಿತಿ ನೀಡಿದ್ದಾರೆ.</p>.<p>‘ಒಸಾಮ ಬಿನ್ ಲಾಡೆನ್ ಎಂಬಾತನಿದ್ದ. ಆತ ಏಕೆ ಪಶ್ಚಿಮ ತುದಿಗೆ ಸಮಾನಾಂತರವಾಗಿರುವ ಪಾಕಿಸ್ತಾನ ಸೇನಾ ನಗರ ತನಗೆ ಸುರಕ್ಷಿತ ಎಂದು ಭಾವಿಸಿ ಸುಮಾರು ವರ್ಷಗಳ ಕಾಲ ಅಲ್ಲಿ ನೆಲಸಿದ್ದ’ ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ.</p>.<p>‘ಆಪರೇಷನ್ ಸಿಂಧೂರ’ಕ್ಕೆ ಎರಡು ಪರಮಾಣು ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಚೌಕಟ್ಟು ಹಾಕುತ್ತಿರುವುದನ್ನು ಜೈಶಂಕರ್ ಟೀಕಿಸಿದ್ದಾರೆ.</p>.<p>ರಷ್ಯಾ ವಿರುದ್ಧ ಪ್ರತಿಬಂಧ ಹಾಕಿದ್ದನ್ನು ಭಾರತ ಏಕೆ ಬೆಂಬಲಿಸಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಉಕ್ರೇನ್ ಮತ್ತು ರಷ್ಯಾ ಜತೆ ಭಾರತ ಗಟ್ಟಿಯಾದ ಸಂಬಂಧ ಹೊಂದಿದೆ. ಯುದ್ಧದ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಸೆಲ್ಸ್</strong>: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇತ್ತೀಚೆಗೆ ನಡೆದ ಸಂಘರ್ಷವು ಎರಡು ರಾಷ್ಟ್ರಗಳ ನಡುವಿನ ಕದನವಲ್ಲ; ಇದು ಭಯೋತ್ಪಾದನೆ ಮೂಲೋತ್ಪಾಟನೆಯ ಸಮರ ಎಂದು ಬೆಲ್ಜಿಯಂನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.</p>.<p>ಇದನ್ನು (ಭಯೋತ್ಪಾದನೆ) ಹೀಗೆಯೇ ಬಿಟ್ಟರೆ ಪಶ್ಚಿಮ ರಾಷ್ಟ್ರಗಳನ್ನೂ ಕಾಡಲು ಆರಂಭಿಸುತ್ತದೆ ಎಂದು ಜೈಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಐರೋಪ್ಯ ರಾಷ್ಟ್ರದ ಸುದ್ದಿ ಜಾಲ ‘ಯುರೈಕ್ಟೀವ್’ಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ ಜೈಶಂಕರ್, ಪಹಲ್ಗಾಮ್ ದಾಳಿಗೆ ಭಾರತ ನೀಡಿದ ‘ಆಪರೇಷನ್ ಸಿಂಧೂರ’ ಪ್ರತ್ಯುತ್ತರದ ಬಗ್ಗೆ ಮಾಹಿತಿ ನೀಡಿದ್ದಾರೆ.</p>.<p>‘ಒಸಾಮ ಬಿನ್ ಲಾಡೆನ್ ಎಂಬಾತನಿದ್ದ. ಆತ ಏಕೆ ಪಶ್ಚಿಮ ತುದಿಗೆ ಸಮಾನಾಂತರವಾಗಿರುವ ಪಾಕಿಸ್ತಾನ ಸೇನಾ ನಗರ ತನಗೆ ಸುರಕ್ಷಿತ ಎಂದು ಭಾವಿಸಿ ಸುಮಾರು ವರ್ಷಗಳ ಕಾಲ ಅಲ್ಲಿ ನೆಲಸಿದ್ದ’ ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ.</p>.<p>‘ಆಪರೇಷನ್ ಸಿಂಧೂರ’ಕ್ಕೆ ಎರಡು ಪರಮಾಣು ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಚೌಕಟ್ಟು ಹಾಕುತ್ತಿರುವುದನ್ನು ಜೈಶಂಕರ್ ಟೀಕಿಸಿದ್ದಾರೆ.</p>.<p>ರಷ್ಯಾ ವಿರುದ್ಧ ಪ್ರತಿಬಂಧ ಹಾಕಿದ್ದನ್ನು ಭಾರತ ಏಕೆ ಬೆಂಬಲಿಸಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಉಕ್ರೇನ್ ಮತ್ತು ರಷ್ಯಾ ಜತೆ ಭಾರತ ಗಟ್ಟಿಯಾದ ಸಂಬಂಧ ಹೊಂದಿದೆ. ಯುದ್ಧದ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>