<p><strong>ಕೋಲಂಬೊ:</strong> ಇದೇ ಮೊದಲ ಬಾರಿಗೆ ಭಾರತ ಹಾಗೂ ಶ್ರೀಲಂಕಾ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.</p><p>ರಕ್ಷಣಾ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರೂಪಿಸಿರುವ ಚೌಕಟ್ಟಿಗೆ ಸಾಂಸ್ಥಿಕ ರೂಪ ನೀಡುವುದು ಸೇರಿದಂತೆ ಮಹತ್ವದ ಅಂಶಗಳನ್ನು ಒಪ್ಪಂದ ಒಳಗೊಂಡಿದೆ.</p><p>ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅನುತಾ ಕುಮಾರ ಡಿಸ್ಸನಾಯಕೆ ಅವರು ಸುದೀರ್ಘ ಮಾತುಕತೆ ನಡೆಸಿದ ಬಳಿಕ, ಉಭಯ ದೇಶಗಳು 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.</p><p>ಮೋದಿ ಹಾಗೂ ಡಿಸ್ಸನಾಯಕೆ ನಡುವಿನ ಮಾತುಕತೆ ನಂತರ ಒಟ್ಟು 10 ವಿಷಯಗಳ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದರೂ, ರಕ್ಷಣಾ ಕ್ಷೇತ್ರವೇ ಪ್ರಮುಖ ವಿಚಾರವಾಗಿ ಹೊರಹೊಮ್ಮಿದೆ.</p><p>35 ವರ್ಷಗಳ ಹಿಂದೆ, ಶ್ರೀಲಂಕಾದಲ್ಲಿ ನಿಯೋಜನೆಗೊಂಡಿದ್ದ ಶಾಂತಿಪಾಲನಾ ಪಡೆಗಳನ್ನು ಭಾರತ ಹಿಂಪಡೆದಿತ್ತು. ಈ ಬೆಳವಣಿಗೆ ನಂತರ ತಾನು ಎದುರಿಸಿದ್ದ ಕಹಿ ದಿನಗಳಿಂದ ಹೊರಬಂದಂತಿರುವ ಶ್ರೀಲಂಕಾ, ರಕ್ಷಣಾ ಸಂಬಂಧ ಕುರಿತಂತೆ ಭಾರತದೊಂದಿಗೆ ಹೊಸ ಹೆಜ್ಜೆ ಹಾಕುವ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ಮಾತುಕತೆ ವೇಳೆ, ಮೀನುಗಾರರ ವಿಚಾರ ಪ್ರಸ್ತಾಪಿಸಿದ ಮೋದಿ, ‘ಮೀನುಗಾರರ ಸಮಸ್ಯೆ ಬಗೆಹರಿಸಲು ಎರಡೂ ದೇಶಗಳು ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದರು.</p><p>‘ದೇಶದಲ್ಲಿನ ತಮಿಳು ಜನರ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸಲಿದೆ ಹಾಗೂ ಪ್ರಾಂತೀಯ ಪರಿಷತ್ತು ಚುನಾವಣೆಗಳನ್ನು ನಡೆಸಲಿದೆ ಎಂಬ ಭರವಸೆ ಹೊಂದಿರುವೆ’ ಎಂದು ಮೋದಿ ಹೇಳಿದರು.</p><p>‘ನನ್ನ ತವರು ರಾಜ್ಯ ಗುಜರಾತ್ನ ಅರಾವಳಿ ಪ್ರದೇಶದಲ್ಲಿ 1960ರಲ್ಲಿ ಬುದ್ಧನಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಹೆಚ್ಚಿನ ಅಧ್ಯಯನ ಉದ್ದೇಶದಿಂದ ಈ ಅವಶೇಷಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗುತ್ತದೆ’ ಎಂದೂ ಮೋದಿ ಘೋಷಿಸಿದರು.</p><p>ತಮಿಳು ಮುಖಂಡರ ಭೇಟಿ: ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳ ತಮಿಳು ನಾಯಕರು ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು.</p><p>‘ಸಮಾನತೆ, ಘನತೆ ಹಾಗೂ ನ್ಯಾಯದಿಂದ ಕೂಡಿದ ಬದುಕು ಕಟ್ಟಿಕೊಳ್ಳಲು ಶ್ರೀಲಂಕಾದಲ್ಲಿನ ತಮಿಳು ಜನರಿಗೆ ಬೆಂಬಲಿಸಲು ಭಾರತ ಬದ್ಧವಾಗಿದೆ’ ಎಂದು ನಂತರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<div><blockquote>ಭಾರತದ ‘ನೆರೆ ದೇಶ ಮೊದಲ ನೀತಿ’ಯಲ್ಲಿ ಶ್ರೀಲಂಕಾಕ್ಕೆ ವಿಶೇಷ ಸ್ಥಾನ ಇದೆ. ಅಧ್ಯಕ್ಷ ಡಿಸ್ಸನಾಯಕೆ ಭಾರತಕ್ಕೆ ಭೇಟಿ ನೀಡಿದ ನಂತರ ಉಭಯ ದೇಶಗಳ ನಡುವಿನ ಸಹಕಾರ ಮತ್ತಷ್ಟು ವೃದ್ಧಿಸಿದೆ</blockquote><span class="attribution">ನರೇಂದ್ರ ಮೋದಿ ಪ್ರಧಾನಿ</span></div>.<div><blockquote>ಭಾರತದ ಭದ್ರತೆ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂತಹ ಯಾವುದೆ ಚಟುವಟಿಕೆಗಳಿಗೆ ತನ್ನ ನೆಲವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಶ್ರೀಲಂಕಾ ಅನುಮತಿ ನೀಡುವುದಿಲ್ಲ</blockquote><span class="attribution">ಅನುರಾ ಕುಮಾರ ಡಿಸ್ಸನಾಯಕೆ ಶ್ರೀಲಂಕಾ ಅಧ್ಯಕ್ಷ</span></div>.<p><strong>ಹಲವು ಯೋಜನೆಗೆ ಸಹಾಯಹಸ್ತ</strong> </p><p>* ಟ್ರಿಂಕಾಮಲಿಯನ್ನು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸುವುದು. ಟ್ರಿಂಕಾಮಲಿಯಲ್ಲಿನ ತಿರುಕೋಣೇಶ್ವರಮ್ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು </p><p>* ಪವಿತ್ರ ನಗರ ಅನುರಾಧಾಪುರದಲ್ಲಿ ಮಹಾಬೋಧಿ ದೇಗುಲ ಸಂಕೀರ್ಣ ಹಾಗೂ ನುವಾರಾ ಎಳಿಯದಲ್ಲಿ ಸೀತಾ ಎಳಿಯ ದೇವಸ್ಥಾನ ನಿರ್ಮಾಣಕ್ಕೆ ನೆರವು </p><p>* ಪವರ್ ಗ್ರಿಡ್ ಸಂಪರ್ಕಕ್ಕೆ ಒತ್ತು. ಇದು ವಿದ್ಯುತ್ ರಫ್ತು ಕ್ಷೇತ್ರದಲ್ಲಿ ಶ್ರೀಲಂಕಾಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಆಶಯ </p><p>* ಸಾಲ ಮರುಹೊಂದಾಣಿಕೆಗೆ ಭಾರತ ಒಪ್ಪಿಗೆ. ಆರ್ಥಿಕ ನೆರವಿನ ಭಾಗವಾಗಿ ಶ್ರೀಲಂಕಾಕ್ಕೆ ನೀಡಿರುವ ಸಾಲದ ಬಡ್ಡಿ ದರ ಇಳಿಸಲು ನಿರ್ಧಾರ </p><p>* ಶ್ರೀಲಂಕಾದ ಪೂರ್ವಭಾಗದ ಪ್ರಾಂತ್ಯಗಳ ಆರ್ಥಿಕ ಅಭಿವೃದ್ಧಿಗೆ 2.4 ಶತಕೋಟಿ ಶ್ರೀಲಂಕಾ ರೂಪಾಯಿ ಒದಗಿಸುವುದಾಗಿ ಘೋಷಣೆ </p><p>* ಶ್ರೀಲಂಕಾದ ‘ಯುನಿಕ್ ಡಿಜಿಟಲ್ ಐಡೆಂಟಿಟಿ ಪ್ರಾಜೆಕ್ಟ್’ಗೆ ನೆರವು ಘೋಷಣೆ</p>.ಭಾರತ-ಥಾಯ್ಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಗಟ್ಟಿಗೊಳಿಸಲು ಮಾತುಕತೆ.ಥಾಯ್ಲೆಂಡ್ ಪ್ರಧಾನಿ ಪೀಟೊಂಗ್ಟಾರ್ನ್ ಶಿನವತ್ರಾಗೆ ಪ್ರಧಾನಿ ಮೋದಿ ಅಭಿನಂದನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಂಬೊ:</strong> ಇದೇ ಮೊದಲ ಬಾರಿಗೆ ಭಾರತ ಹಾಗೂ ಶ್ರೀಲಂಕಾ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.</p><p>ರಕ್ಷಣಾ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರೂಪಿಸಿರುವ ಚೌಕಟ್ಟಿಗೆ ಸಾಂಸ್ಥಿಕ ರೂಪ ನೀಡುವುದು ಸೇರಿದಂತೆ ಮಹತ್ವದ ಅಂಶಗಳನ್ನು ಒಪ್ಪಂದ ಒಳಗೊಂಡಿದೆ.</p><p>ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅನುತಾ ಕುಮಾರ ಡಿಸ್ಸನಾಯಕೆ ಅವರು ಸುದೀರ್ಘ ಮಾತುಕತೆ ನಡೆಸಿದ ಬಳಿಕ, ಉಭಯ ದೇಶಗಳು 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.</p><p>ಮೋದಿ ಹಾಗೂ ಡಿಸ್ಸನಾಯಕೆ ನಡುವಿನ ಮಾತುಕತೆ ನಂತರ ಒಟ್ಟು 10 ವಿಷಯಗಳ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದರೂ, ರಕ್ಷಣಾ ಕ್ಷೇತ್ರವೇ ಪ್ರಮುಖ ವಿಚಾರವಾಗಿ ಹೊರಹೊಮ್ಮಿದೆ.</p><p>35 ವರ್ಷಗಳ ಹಿಂದೆ, ಶ್ರೀಲಂಕಾದಲ್ಲಿ ನಿಯೋಜನೆಗೊಂಡಿದ್ದ ಶಾಂತಿಪಾಲನಾ ಪಡೆಗಳನ್ನು ಭಾರತ ಹಿಂಪಡೆದಿತ್ತು. ಈ ಬೆಳವಣಿಗೆ ನಂತರ ತಾನು ಎದುರಿಸಿದ್ದ ಕಹಿ ದಿನಗಳಿಂದ ಹೊರಬಂದಂತಿರುವ ಶ್ರೀಲಂಕಾ, ರಕ್ಷಣಾ ಸಂಬಂಧ ಕುರಿತಂತೆ ಭಾರತದೊಂದಿಗೆ ಹೊಸ ಹೆಜ್ಜೆ ಹಾಕುವ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ಮಾತುಕತೆ ವೇಳೆ, ಮೀನುಗಾರರ ವಿಚಾರ ಪ್ರಸ್ತಾಪಿಸಿದ ಮೋದಿ, ‘ಮೀನುಗಾರರ ಸಮಸ್ಯೆ ಬಗೆಹರಿಸಲು ಎರಡೂ ದೇಶಗಳು ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದರು.</p><p>‘ದೇಶದಲ್ಲಿನ ತಮಿಳು ಜನರ ಬೇಡಿಕೆಗಳನ್ನು ಶ್ರೀಲಂಕಾ ಸರ್ಕಾರ ಈಡೇರಿಸಲಿದೆ ಹಾಗೂ ಪ್ರಾಂತೀಯ ಪರಿಷತ್ತು ಚುನಾವಣೆಗಳನ್ನು ನಡೆಸಲಿದೆ ಎಂಬ ಭರವಸೆ ಹೊಂದಿರುವೆ’ ಎಂದು ಮೋದಿ ಹೇಳಿದರು.</p><p>‘ನನ್ನ ತವರು ರಾಜ್ಯ ಗುಜರಾತ್ನ ಅರಾವಳಿ ಪ್ರದೇಶದಲ್ಲಿ 1960ರಲ್ಲಿ ಬುದ್ಧನಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಹೆಚ್ಚಿನ ಅಧ್ಯಯನ ಉದ್ದೇಶದಿಂದ ಈ ಅವಶೇಷಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗುತ್ತದೆ’ ಎಂದೂ ಮೋದಿ ಘೋಷಿಸಿದರು.</p><p>ತಮಿಳು ಮುಖಂಡರ ಭೇಟಿ: ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳ ತಮಿಳು ನಾಯಕರು ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು.</p><p>‘ಸಮಾನತೆ, ಘನತೆ ಹಾಗೂ ನ್ಯಾಯದಿಂದ ಕೂಡಿದ ಬದುಕು ಕಟ್ಟಿಕೊಳ್ಳಲು ಶ್ರೀಲಂಕಾದಲ್ಲಿನ ತಮಿಳು ಜನರಿಗೆ ಬೆಂಬಲಿಸಲು ಭಾರತ ಬದ್ಧವಾಗಿದೆ’ ಎಂದು ನಂತರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<div><blockquote>ಭಾರತದ ‘ನೆರೆ ದೇಶ ಮೊದಲ ನೀತಿ’ಯಲ್ಲಿ ಶ್ರೀಲಂಕಾಕ್ಕೆ ವಿಶೇಷ ಸ್ಥಾನ ಇದೆ. ಅಧ್ಯಕ್ಷ ಡಿಸ್ಸನಾಯಕೆ ಭಾರತಕ್ಕೆ ಭೇಟಿ ನೀಡಿದ ನಂತರ ಉಭಯ ದೇಶಗಳ ನಡುವಿನ ಸಹಕಾರ ಮತ್ತಷ್ಟು ವೃದ್ಧಿಸಿದೆ</blockquote><span class="attribution">ನರೇಂದ್ರ ಮೋದಿ ಪ್ರಧಾನಿ</span></div>.<div><blockquote>ಭಾರತದ ಭದ್ರತೆ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂತಹ ಯಾವುದೆ ಚಟುವಟಿಕೆಗಳಿಗೆ ತನ್ನ ನೆಲವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಶ್ರೀಲಂಕಾ ಅನುಮತಿ ನೀಡುವುದಿಲ್ಲ</blockquote><span class="attribution">ಅನುರಾ ಕುಮಾರ ಡಿಸ್ಸನಾಯಕೆ ಶ್ರೀಲಂಕಾ ಅಧ್ಯಕ್ಷ</span></div>.<p><strong>ಹಲವು ಯೋಜನೆಗೆ ಸಹಾಯಹಸ್ತ</strong> </p><p>* ಟ್ರಿಂಕಾಮಲಿಯನ್ನು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸುವುದು. ಟ್ರಿಂಕಾಮಲಿಯಲ್ಲಿನ ತಿರುಕೋಣೇಶ್ವರಮ್ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು </p><p>* ಪವಿತ್ರ ನಗರ ಅನುರಾಧಾಪುರದಲ್ಲಿ ಮಹಾಬೋಧಿ ದೇಗುಲ ಸಂಕೀರ್ಣ ಹಾಗೂ ನುವಾರಾ ಎಳಿಯದಲ್ಲಿ ಸೀತಾ ಎಳಿಯ ದೇವಸ್ಥಾನ ನಿರ್ಮಾಣಕ್ಕೆ ನೆರವು </p><p>* ಪವರ್ ಗ್ರಿಡ್ ಸಂಪರ್ಕಕ್ಕೆ ಒತ್ತು. ಇದು ವಿದ್ಯುತ್ ರಫ್ತು ಕ್ಷೇತ್ರದಲ್ಲಿ ಶ್ರೀಲಂಕಾಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಆಶಯ </p><p>* ಸಾಲ ಮರುಹೊಂದಾಣಿಕೆಗೆ ಭಾರತ ಒಪ್ಪಿಗೆ. ಆರ್ಥಿಕ ನೆರವಿನ ಭಾಗವಾಗಿ ಶ್ರೀಲಂಕಾಕ್ಕೆ ನೀಡಿರುವ ಸಾಲದ ಬಡ್ಡಿ ದರ ಇಳಿಸಲು ನಿರ್ಧಾರ </p><p>* ಶ್ರೀಲಂಕಾದ ಪೂರ್ವಭಾಗದ ಪ್ರಾಂತ್ಯಗಳ ಆರ್ಥಿಕ ಅಭಿವೃದ್ಧಿಗೆ 2.4 ಶತಕೋಟಿ ಶ್ರೀಲಂಕಾ ರೂಪಾಯಿ ಒದಗಿಸುವುದಾಗಿ ಘೋಷಣೆ </p><p>* ಶ್ರೀಲಂಕಾದ ‘ಯುನಿಕ್ ಡಿಜಿಟಲ್ ಐಡೆಂಟಿಟಿ ಪ್ರಾಜೆಕ್ಟ್’ಗೆ ನೆರವು ಘೋಷಣೆ</p>.ಭಾರತ-ಥಾಯ್ಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಗಟ್ಟಿಗೊಳಿಸಲು ಮಾತುಕತೆ.ಥಾಯ್ಲೆಂಡ್ ಪ್ರಧಾನಿ ಪೀಟೊಂಗ್ಟಾರ್ನ್ ಶಿನವತ್ರಾಗೆ ಪ್ರಧಾನಿ ಮೋದಿ ಅಭಿನಂದನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>