ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಉಪ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು ಅವರು, ‘ಕೋವಿಡ್– 19 ಕುರಿತು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪರ ಭಾರತ ಮತ ಚಲಾಯಿಸಿದೆ. ಇದೊಂದು ಜಾಗತಿಕ ಮಟ್ಟದ ಬಹುದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನ ಗುರುತಿಸಿದ್ದು, ಇದರ ವಿರುದ್ಧ ಹೋರಾಡಲು ಏಕತೆ, ಸಮಗ್ರತೆ ಮತ್ತು ಬಹು ಪಕ್ಷೀಯ ಸಹಕಾರ ಅಗತ್ಯ’ ಟ್ವೀಟ್ ಮಾಡಿದ್ದಾರೆ.