ತಾವು ಅಡಗಿಕೊಂಡಿರುವ ನೆಲಮಾಳಿಗೆಯ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಲಲಿತ್ ಕುಮಾರ್ ಎಂಬ ವಿದ್ಯಾರ್ಥಿ,'ನಾವು ಉಳಿದುಕೊಂಡಿರುವ ಕಟ್ಟಡದ / ವಿದ್ಯಾರ್ಥಿನಿಲಯದ ನೆಲಮಾಳಿಗೆಯಲ್ಲೇ ನಾವೆಲ್ಲ ಅಡಗಿಕೊಂಡಿದ್ದೇವೆ. ಇಲ್ಲೇ ಇದ್ದರೆ, ಬದುಕುಳಿಯುತ್ತೇವೆಯೇ ಎಂಬುದು ಗೊತ್ತಿಲ್ಲ. ಉಕ್ರೇನ್ನ ಪೂರ್ವಭಾಗದಿಂದ ಕೂಡಲೇ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಭಾರತ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ' ಎಂದು ಮನವಿ ಮಾಡಿದ್ದಾರೆ.