ಸಭೆ ಬಳಿಕ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಜೈಶಂಕರ್, ‘ಉಕ್ರೇನ್ ವಿದೇಶಾಂಗ ಸಚಿವರಾದ ಡೆಮೊಟ್ರಿ ಕುಲೇಬಾ ಅವರೊಂದಿಗೆ ಮುಕ್ತ ಮತ್ತು ವ್ಯಾಪಕವಾದ ಸಂಭಾಷಣೆ ನಡೆಯುತ್ತಿದೆ. ನಮ್ಮ ಚರ್ಚೆಗಳು ಸದ್ಯದ ಸಂಘರ್ಷ ಮತ್ತು ಅದರ ವ್ಯಾಪಕವಾದ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿವೆ. ಸಭೆಯಲ್ಲಿ ವಿವಿಧ ಉಪಕ್ರಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ನಮ್ಮಿಬ್ಬರ ಆಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಮಾತನಾಡಿದರು. ದ್ವಿಪಕ್ಷೀಯ ಸಹಕಾರ ಸೇರಿದಂತೆ ಒಟ್ಟಾರೆ ಸಂಬಂಧವನ್ನು ಬಲಪಡಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದಿದ್ದಾರೆ.