<p><strong>ಕೊಲಂಬೊ: </strong>ರನಿಲ್ ವಿಕ್ರಮಸಿಂಘೆ ಅವರನ್ನೇ ಪ್ರಧಾನಿಯನ್ನಾಗಿ ಸ್ಪೀಕರ್ ಕರು ಜಯಸೂರ್ಯ ಭಾನುವಾರ ಮಾನ್ಯತೆ ನೀಡಿದ್ದಾರೆ.</p>.<p>ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತಮ್ಮನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಹೋರಾಟಕ್ಕೆ ಸಜ್ಜಾಗಿದ್ದ ವಿಕ್ರಮಸಿಂಘೆ ಅವರು ಸ್ಪೀಕರ್ ಅವರ ಈ ನಡೆಯಿಂದ ನಿರಾಳರಾಗಿದ್ದಾರೆ.</p>.<p>ಸಂಸತ್ತನ್ನು ನ. 16ರ ವರೆಗೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿರುವ ಅಧ್ಯಕ್ಷ ಸಿರಿಸೇನ ಅವರ ಕ್ರಮವನ್ನು ಸಹ ಪ್ರಶ್ನಿಸಿರುವ ಸ್ಪೀಕರ್ ಜಯಸೂರ್ಯ, ‘ಸಂಸತ್ತನ್ನು ಅಮಾನತಿನಲ್ಲಿಡುವ ನಿರ್ಧಾರ ದೇಶದಲ್ಲಿ ಗಂಭೀರ ಹಾಗೂ ಅನಪೇಕ್ಷಿತ ಪರಿಣಾಮವನ್ನುಂಟು ಮಾಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಸಂಬಂಧ ಸಿರಿಸೇನ ಅವರಿಗೆ ಪತ್ರ ಬರೆದಿರುವ ಜಯಸೂರ್ಯ, ‘ಸ್ಪೀಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರಷ್ಟೇ ಸಂಸತ್ ಅಧಿವೇಶವನ್ನು ಮುಂದೂಡಬೇಕು’ ಎಂದು ವಿವರಿಸಿದ್ದಾರೆ.</p>.<p>‘ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಅವರು ಹೊಂದಿರಬೇಕಾದ ಅಧಿಕಾರಗಳನ್ನು ಮರುಸ್ಥಾಪನೆ ಮಾಡಬೇಕು. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಆಡಳಿತ ನಡೆಸುವ ಸಲುವಾಗಿ ಅವರು ಸಂಪೂರ್ಣ ಬಹುಮತ ಹೊಂದಿದ್ದಾರೆ’ ಎಂದೂ ಪ್ರತಿಪಾದಿಸಿದ್ದಾರೆ.</p>.<p>ವಿಕ್ರಮಸಿಂಘೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿರುವ ಕ್ರಮವನ್ನೂ ಸಹ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ: </strong>ರನಿಲ್ ವಿಕ್ರಮಸಿಂಘೆ ಅವರನ್ನೇ ಪ್ರಧಾನಿಯನ್ನಾಗಿ ಸ್ಪೀಕರ್ ಕರು ಜಯಸೂರ್ಯ ಭಾನುವಾರ ಮಾನ್ಯತೆ ನೀಡಿದ್ದಾರೆ.</p>.<p>ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತಮ್ಮನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ನಂತರ ಹೋರಾಟಕ್ಕೆ ಸಜ್ಜಾಗಿದ್ದ ವಿಕ್ರಮಸಿಂಘೆ ಅವರು ಸ್ಪೀಕರ್ ಅವರ ಈ ನಡೆಯಿಂದ ನಿರಾಳರಾಗಿದ್ದಾರೆ.</p>.<p>ಸಂಸತ್ತನ್ನು ನ. 16ರ ವರೆಗೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಿರುವ ಅಧ್ಯಕ್ಷ ಸಿರಿಸೇನ ಅವರ ಕ್ರಮವನ್ನು ಸಹ ಪ್ರಶ್ನಿಸಿರುವ ಸ್ಪೀಕರ್ ಜಯಸೂರ್ಯ, ‘ಸಂಸತ್ತನ್ನು ಅಮಾನತಿನಲ್ಲಿಡುವ ನಿರ್ಧಾರ ದೇಶದಲ್ಲಿ ಗಂಭೀರ ಹಾಗೂ ಅನಪೇಕ್ಷಿತ ಪರಿಣಾಮವನ್ನುಂಟು ಮಾಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>ಈ ಸಂಬಂಧ ಸಿರಿಸೇನ ಅವರಿಗೆ ಪತ್ರ ಬರೆದಿರುವ ಜಯಸೂರ್ಯ, ‘ಸ್ಪೀಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರಷ್ಟೇ ಸಂಸತ್ ಅಧಿವೇಶವನ್ನು ಮುಂದೂಡಬೇಕು’ ಎಂದು ವಿವರಿಸಿದ್ದಾರೆ.</p>.<p>‘ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಅವರು ಹೊಂದಿರಬೇಕಾದ ಅಧಿಕಾರಗಳನ್ನು ಮರುಸ್ಥಾಪನೆ ಮಾಡಬೇಕು. ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಆಡಳಿತ ನಡೆಸುವ ಸಲುವಾಗಿ ಅವರು ಸಂಪೂರ್ಣ ಬಹುಮತ ಹೊಂದಿದ್ದಾರೆ’ ಎಂದೂ ಪ್ರತಿಪಾದಿಸಿದ್ದಾರೆ.</p>.<p>ವಿಕ್ರಮಸಿಂಘೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿರುವ ಕ್ರಮವನ್ನೂ ಸಹ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>