<p class="title"><strong>ಕಠ್ಮಂಡು:</strong> ನೇಪಾಳದ ಪೊಖರಾದಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಕಾಣೆಯಾಗಿರುವ ಕಡೇ ವ್ಯಕ್ತಿಗಾಗಿ ಶೋಧಕಾರ್ಯಾಚರಣೆಯನ್ನು ಬುಧವಾರ ಪುನರಾರಂಭಿಸಲಾಯಿತು.</p>.<p class="bodytext">ಮಂಗಳವಾರ ಮತ್ತೊಂದು ದೇಹವನ್ನು ದುರಂತ ಸಂಭವಿಸಿದ ಸೇಟಿ ನದಿಯ ಕೊರಕಲಿನಿಂದ ಹೊರತೆಗೆಯಲಾಗಿದೆ. ಈ ಮೂಲಕ ವಿಮಾನದಲ್ಲಿದ್ದ 72 ಜನರಲ್ಲಿ 71 ಜನರ ಮೃತದೇಹ ಪತ್ತೆಯಾದಂತಾಗಿದೆ. </p>.<p class="bodytext">ಕಾಣೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧಕಾರ್ಯವನ್ನು ಈಜುಗಾರರು ಮತ್ತು ನಾಲ್ಕು ಡ್ರೋನ್ಗಳ ಸಹಾಯದಿಂದ ಬುಧವಾರ ಬೆಳಿಗ್ಗೆ ಆರಂಭಿಸಲಾಯಿತು. ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವ ಭರವಸೆಯನ್ನು ರಕ್ಷಣಾ ತಂಡದವರು ನೀಡಿದ್ದಾರೆ ಎಂದು ಅಲ್ಲಿಯ ಸುದ್ದಿ ಪತ್ರಿಕೆ ‘ಮೈರಿಪಬ್ಲಿಕ್’ ವರದಿ ಮಾಡಿದೆ.</p>.<p class="bodytext">ಸುಮಾರು 48 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಠ್ಮಂಡುಗೆ ನೇಪಾಳ ಸೇನಾ ಹೆಲಿಕಾಪ್ಟರ್ಗಳ ಮೂಲಕ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ನೇಪಾಳದ ಯೇತಿ ಏರ್ಲೈನ್ಸ್ಗೆ ಸೇರಿದ್ದ ವಿಮಾನವು ಭಾನುವಾರ ಪೊಖರದಲ್ಲಿ ನಿಲುಗಡೆಯಾಗುವ ಕೆಲವೇ ಸೆಕೆಂಡುಗಳ ಮುನ್ನ ನೆಲಕ್ಕೆ ಅಪ್ಪಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕಠ್ಮಂಡು:</strong> ನೇಪಾಳದ ಪೊಖರಾದಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಕಾಣೆಯಾಗಿರುವ ಕಡೇ ವ್ಯಕ್ತಿಗಾಗಿ ಶೋಧಕಾರ್ಯಾಚರಣೆಯನ್ನು ಬುಧವಾರ ಪುನರಾರಂಭಿಸಲಾಯಿತು.</p>.<p class="bodytext">ಮಂಗಳವಾರ ಮತ್ತೊಂದು ದೇಹವನ್ನು ದುರಂತ ಸಂಭವಿಸಿದ ಸೇಟಿ ನದಿಯ ಕೊರಕಲಿನಿಂದ ಹೊರತೆಗೆಯಲಾಗಿದೆ. ಈ ಮೂಲಕ ವಿಮಾನದಲ್ಲಿದ್ದ 72 ಜನರಲ್ಲಿ 71 ಜನರ ಮೃತದೇಹ ಪತ್ತೆಯಾದಂತಾಗಿದೆ. </p>.<p class="bodytext">ಕಾಣೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧಕಾರ್ಯವನ್ನು ಈಜುಗಾರರು ಮತ್ತು ನಾಲ್ಕು ಡ್ರೋನ್ಗಳ ಸಹಾಯದಿಂದ ಬುಧವಾರ ಬೆಳಿಗ್ಗೆ ಆರಂಭಿಸಲಾಯಿತು. ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವ ಭರವಸೆಯನ್ನು ರಕ್ಷಣಾ ತಂಡದವರು ನೀಡಿದ್ದಾರೆ ಎಂದು ಅಲ್ಲಿಯ ಸುದ್ದಿ ಪತ್ರಿಕೆ ‘ಮೈರಿಪಬ್ಲಿಕ್’ ವರದಿ ಮಾಡಿದೆ.</p>.<p class="bodytext">ಸುಮಾರು 48 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಠ್ಮಂಡುಗೆ ನೇಪಾಳ ಸೇನಾ ಹೆಲಿಕಾಪ್ಟರ್ಗಳ ಮೂಲಕ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="bodytext">ನೇಪಾಳದ ಯೇತಿ ಏರ್ಲೈನ್ಸ್ಗೆ ಸೇರಿದ್ದ ವಿಮಾನವು ಭಾನುವಾರ ಪೊಖರದಲ್ಲಿ ನಿಲುಗಡೆಯಾಗುವ ಕೆಲವೇ ಸೆಕೆಂಡುಗಳ ಮುನ್ನ ನೆಲಕ್ಕೆ ಅಪ್ಪಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>