<p><strong>ಹೈಫಾ</strong>: ‘ಇಸ್ರೇಲ್ನ ಹೈಫಾ ನಗರವನ್ನು ಅಟೋಮನ್ ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ’ ಎಂದು ಹೈಫಾದ ಮೇಯರ್ ಯೋನಾ ಯಹಾವ್ ಹೇಳಿದ್ದಾರೆ.</p>.<p>ಹೈಫಾದ ವಿಮೋಚನೆಗಾಗಿ ಪ್ರಾಣತೆತ್ತ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ಇದೇ ನಗರದಲ್ಲಿ ನಾನು ಹುಟ್ಟಿ ಬೆಳೆದಿದ್ದೇನೆ. ಅಟೋಮನ್ ಪಾರುಪತ್ಯದಿಂದ ಈ ನಗರವನ್ನು ಮುಕ್ತಗೊಳಿಸಿದ್ದು ಬ್ರಿಟಿಷರು ಎಂದೇ ನಮಗೆಲ್ಲಾ ಹೇಳಲಾಗಿತ್ತು. ಸಂಶೋಧಕರು ನಗರದ ಇತಿಹಾಸ ಕುರಿತು ಅಧ್ಯಯನ ನಡೆಸಿ, ಈ ನಗರವನ್ನು ಅಟೋಮನ್ ಆಳ್ವಿಕೆಯಿಂದ ಮುಕ್ತಗೊಳಿಸಿದವರು ಬ್ರಿಟಿಷರಲ್ಲ, ಭಾರತೀಯ ಸೈನಿಕರು ಎಂದು ಹೇಳುವವರೆಗೂ ತಪ್ಪಾದ ಇತಿಹಾಸ ನಂಬಿದ್ದೆವು’ ಎಂದು ಹೇಳಿದ್ದಾರೆ. </p>.<p>ಅಲ್ಲದೇ, ಈ ತಪ್ಪನ್ನು ಸರಿ ಪಡಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ತಪ್ಪಾದ ವಿಚಾರಗಳನ್ನು ತೆಗೆದು, ಸತ್ಯಾಂಶವನ್ನು ಅಳವಡಿಸಲಾಗುತ್ತಿದೆ’ ಎಂದೂ ಯಹಾವ್ ತಿಳಿಸಿದ್ದಾರೆ.</p>.<p class="title">ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಆಟೋಮನ್ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆಯ ಅಶ್ವದಳ ಪಡೆ ಮಹತ್ತರ ಪಾತ್ರ ವಹಿಸಿದ ಕಾರಣ ಇಸ್ರೇಲ್ನ ಹಲವು ಕಡೆ ಭಾರತೀಯ ಸೈನಿಕರ ಸ್ಮಾರಕ ನಿರ್ಮಿಸಲಾಗಿದೆ. </p>.<p class="title">ಹೈಫಾ ನಗರವನ್ನು ದಾಸ್ಯದಿಂದ ಮುಕ್ತಗೊಳಿಸಿದ ಮೈಸೂರು, ಹೈದರಾಬಾದ್ ಹಾಗೂ ಜೋಧಪುರದ ಅಶ್ವದಳಗಳ ಸ್ಮರಣಾರ್ಥ ಭಾರತೀಯ ಸೇನೆ ಕೂಡ ಪ್ರತಿವರ್ಷ ಸೆಪ್ಟೆಂಬರ್ 23ರಂದು ಗೌರವ ನಮನ ಸಲ್ಲಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈಫಾ</strong>: ‘ಇಸ್ರೇಲ್ನ ಹೈಫಾ ನಗರವನ್ನು ಅಟೋಮನ್ ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ’ ಎಂದು ಹೈಫಾದ ಮೇಯರ್ ಯೋನಾ ಯಹಾವ್ ಹೇಳಿದ್ದಾರೆ.</p>.<p>ಹೈಫಾದ ವಿಮೋಚನೆಗಾಗಿ ಪ್ರಾಣತೆತ್ತ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ಇದೇ ನಗರದಲ್ಲಿ ನಾನು ಹುಟ್ಟಿ ಬೆಳೆದಿದ್ದೇನೆ. ಅಟೋಮನ್ ಪಾರುಪತ್ಯದಿಂದ ಈ ನಗರವನ್ನು ಮುಕ್ತಗೊಳಿಸಿದ್ದು ಬ್ರಿಟಿಷರು ಎಂದೇ ನಮಗೆಲ್ಲಾ ಹೇಳಲಾಗಿತ್ತು. ಸಂಶೋಧಕರು ನಗರದ ಇತಿಹಾಸ ಕುರಿತು ಅಧ್ಯಯನ ನಡೆಸಿ, ಈ ನಗರವನ್ನು ಅಟೋಮನ್ ಆಳ್ವಿಕೆಯಿಂದ ಮುಕ್ತಗೊಳಿಸಿದವರು ಬ್ರಿಟಿಷರಲ್ಲ, ಭಾರತೀಯ ಸೈನಿಕರು ಎಂದು ಹೇಳುವವರೆಗೂ ತಪ್ಪಾದ ಇತಿಹಾಸ ನಂಬಿದ್ದೆವು’ ಎಂದು ಹೇಳಿದ್ದಾರೆ. </p>.<p>ಅಲ್ಲದೇ, ಈ ತಪ್ಪನ್ನು ಸರಿ ಪಡಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ತಪ್ಪಾದ ವಿಚಾರಗಳನ್ನು ತೆಗೆದು, ಸತ್ಯಾಂಶವನ್ನು ಅಳವಡಿಸಲಾಗುತ್ತಿದೆ’ ಎಂದೂ ಯಹಾವ್ ತಿಳಿಸಿದ್ದಾರೆ.</p>.<p class="title">ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಆಟೋಮನ್ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆಯ ಅಶ್ವದಳ ಪಡೆ ಮಹತ್ತರ ಪಾತ್ರ ವಹಿಸಿದ ಕಾರಣ ಇಸ್ರೇಲ್ನ ಹಲವು ಕಡೆ ಭಾರತೀಯ ಸೈನಿಕರ ಸ್ಮಾರಕ ನಿರ್ಮಿಸಲಾಗಿದೆ. </p>.<p class="title">ಹೈಫಾ ನಗರವನ್ನು ದಾಸ್ಯದಿಂದ ಮುಕ್ತಗೊಳಿಸಿದ ಮೈಸೂರು, ಹೈದರಾಬಾದ್ ಹಾಗೂ ಜೋಧಪುರದ ಅಶ್ವದಳಗಳ ಸ್ಮರಣಾರ್ಥ ಭಾರತೀಯ ಸೇನೆ ಕೂಡ ಪ್ರತಿವರ್ಷ ಸೆಪ್ಟೆಂಬರ್ 23ರಂದು ಗೌರವ ನಮನ ಸಲ್ಲಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>