<p><strong>ಇಸ್ಲಾಮಾಬಾದ್</strong>: 2024ರ ಹೊಸ ವರ್ಷದ ಪ್ರಯುಕ್ತ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ.</p><p>ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಪ್ಯಾಲೆಸ್ಟೀನ್ ಜನರಿಗೆ ಬೆಂಬಲ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರುಲ್ಲಾ ಹಕ್ ಖಾಕರ್ ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡುವಾಗ ತಿಳಿಸಿದ್ದಾರೆ.</p><p>ಪ್ಯಾಲೆಸ್ಟೀನ್ನ ನಮ್ಮ ಸಹೋದರ–ಸಹೋದರಿಯರು ಅನುಭವಿಸುತ್ತಿರುವ ನೋವನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಂಭ್ರಮಾಚರಣೆಗಳನ್ನು ಮಾಡುವುದು ಸರಿಯಲ್ಲ. ನಾವು ಪ್ಯಾಲೆಸ್ಟೀನ್ ಜೊತೆ ಇದ್ದೇವೆ ಎಂಬುದನ್ನು ತೋರಿಸಲು ಹೊಸ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಇದುವರೆಗೆ 21 ಸಾವಿರ ಪ್ಯಾಲೆಸ್ಟೀನ್ ಜನ ಸತ್ತಿದ್ದಾರೆ. 9,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ಧಾರೆ. ಇಸ್ರೇಲ್ ಹಿಂಸೆಯ ಹಾಗೂ ಅನ್ಯಾಯದ ಪರಮಾವಧಿಯನ್ನು ಮೀರಿದೆ ಎಂದು ಅನ್ವರುಲ್ಲಾ ಕಿಡಿಕಾರಿದ್ದಾರೆ.</p><p>ಪಾಕಿಸ್ತಾನ ಹಾಗೂ ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೀನ್ ಬೆಂಬಲಕ್ಕೆ ಇರಲಿವೆ. ಪ್ಯಾಲೆಸ್ಟೀನ್ಗೆ ಎರಡು ಹಂತದಲ್ಲಿ ನೆರವು ಕಳುಹಿಸಿ ಕೊಡಲಾಗಿದೆ, ನೆರವು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.</p><p>ಅಂತರರಾಷ್ಟ್ರೀಯ ವಿವಿಧ ವೇದಿಕೆಗಳಲ್ಲಿ ಇಸ್ರೇಲ್ ನಡೆಸುತ್ತಿರುವ ರಕ್ತಪಾತವನ್ನು ಪಾಕಿಸ್ತಾನ ಎತ್ತಿ ತೋರಿಸಿದೆ ಎಂದು ಅನ್ವರುಲ್ಲಾ ಪ್ರತಿಪಾದಿಸಿದ್ದಾರೆ.</p><p>ಪಾಕಿಸ್ತಾನದ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಫೆಬ್ರುವರಿ 8 ರಂದು ಮತದಾನ ನಡೆಯಲಿದೆ.</p>.ಪಾಕಿಸ್ತಾನ: ಚಾವಣಿ ಕುಸಿತ; ಒಂದೇ ಕುಟುಂಬದ 9 ಮಂದಿ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>: 2024ರ ಹೊಸ ವರ್ಷದ ಪ್ರಯುಕ್ತ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ.</p><p>ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಪ್ಯಾಲೆಸ್ಟೀನ್ ಜನರಿಗೆ ಬೆಂಬಲ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರುಲ್ಲಾ ಹಕ್ ಖಾಕರ್ ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡುವಾಗ ತಿಳಿಸಿದ್ದಾರೆ.</p><p>ಪ್ಯಾಲೆಸ್ಟೀನ್ನ ನಮ್ಮ ಸಹೋದರ–ಸಹೋದರಿಯರು ಅನುಭವಿಸುತ್ತಿರುವ ನೋವನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಂಭ್ರಮಾಚರಣೆಗಳನ್ನು ಮಾಡುವುದು ಸರಿಯಲ್ಲ. ನಾವು ಪ್ಯಾಲೆಸ್ಟೀನ್ ಜೊತೆ ಇದ್ದೇವೆ ಎಂಬುದನ್ನು ತೋರಿಸಲು ಹೊಸ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಇದುವರೆಗೆ 21 ಸಾವಿರ ಪ್ಯಾಲೆಸ್ಟೀನ್ ಜನ ಸತ್ತಿದ್ದಾರೆ. 9,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ಧಾರೆ. ಇಸ್ರೇಲ್ ಹಿಂಸೆಯ ಹಾಗೂ ಅನ್ಯಾಯದ ಪರಮಾವಧಿಯನ್ನು ಮೀರಿದೆ ಎಂದು ಅನ್ವರುಲ್ಲಾ ಕಿಡಿಕಾರಿದ್ದಾರೆ.</p><p>ಪಾಕಿಸ್ತಾನ ಹಾಗೂ ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೀನ್ ಬೆಂಬಲಕ್ಕೆ ಇರಲಿವೆ. ಪ್ಯಾಲೆಸ್ಟೀನ್ಗೆ ಎರಡು ಹಂತದಲ್ಲಿ ನೆರವು ಕಳುಹಿಸಿ ಕೊಡಲಾಗಿದೆ, ನೆರವು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.</p><p>ಅಂತರರಾಷ್ಟ್ರೀಯ ವಿವಿಧ ವೇದಿಕೆಗಳಲ್ಲಿ ಇಸ್ರೇಲ್ ನಡೆಸುತ್ತಿರುವ ರಕ್ತಪಾತವನ್ನು ಪಾಕಿಸ್ತಾನ ಎತ್ತಿ ತೋರಿಸಿದೆ ಎಂದು ಅನ್ವರುಲ್ಲಾ ಪ್ರತಿಪಾದಿಸಿದ್ದಾರೆ.</p><p>ಪಾಕಿಸ್ತಾನದ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಫೆಬ್ರುವರಿ 8 ರಂದು ಮತದಾನ ನಡೆಯಲಿದೆ.</p>.ಪಾಕಿಸ್ತಾನ: ಚಾವಣಿ ಕುಸಿತ; ಒಂದೇ ಕುಟುಂಬದ 9 ಮಂದಿ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>