‘ಜೊಹಾನ್ಸ್ಬರ್ಗ್ ಮತ್ತು ಕೇಪ್ಟೌನ್ನಲ್ಲಿ ಕಳೆದ ಐದು ತಿಂಗಳಿಂದ ಕರ್ನಾಟಕದ 15 ಮಂದಿ ಸೇರಿದಂತೆ ಹಕ್ಕಿಪಿಕ್ಕಿ ಜನಾಂಗದ ಒಟ್ಟು 40 ಮಂದಿ ಸಿಲುಕಿದ್ದರು. ಇವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಭಾರತೀಯ ಹೈಕಮಿಷನರ್ ಮತ್ತು ಡರ್ಬನ್, ಕೇಪ್ಟೌನ್ ಹಾಗೂ ಜೊಹಾನ್ಸ್ಬರ್ಗ್ನಲ್ಲಿರುವ ಕಾನ್ಸಲೇಟ್ ಜನರಲ್ಗಳು ಹಾಗೂ ಉದ್ದಿಮೆದಾರರ ನೆರವಿನೊಂದಿಗೆ 12 ಮಂದಿಗೆ ಟಿಕೆಟ್ ಖರೀದಿಸಿ ನೀಡಲಾಯಿತು’ ಎಂದು ಅಂಜು ರಂಜನ್ ವಿವರಿಸಿದ್ದಾರೆ.