<p><strong>ಲಂಡನ್:</strong>ಮಧ್ಯಇಂಗ್ಲೆಂಡ್ನಲ್ಲಿ ಹಿಮಗಟ್ಟಿದ್ದ ಸರೋವರಕ್ಕೆ ಬಿದ್ದು ಮೂವರು ಬಾಲಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಮೃತರ ವಯಸ್ಸು 11,10 ಮತ್ತು 8 ವರ್ಷ. ಭಾನುವಾರ ಅವರ ಮೃತ ದೇಹವನ್ನು ಸೊಲಿಹಲ್ನ ಸರೋವರದಿಂದ ಹೊರತೆಗೆಯಲಾಗಿದೆ. 6 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮೃತರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಿದು. ದೇವರು ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ರಿಷಿ ಸುನಕ್ ಕಚೇರಿ ವಕ್ತಾರರು ಹೇಳಿದ್ದಾರೆ.</p>.<p>ಬಾಲಕರ ಸಾವು ವಿವರಿಸಲು ಸಾಧ್ಯವಿಲ್ಲದ ದುರಂತ. ಚಳಿಗಾಲದಲ್ಲಿ ತೆರೆದ ನೀರಿನ ಮೂಲಗಳ ಅಪಾಯಕ್ಕೆ ಈ ಘಟನೆ ಸಾಕ್ಷಿ. ಬೇರೆ ಮಕ್ಕಳು ಸಿಲುಕಿರುವ ಶಂಕೆಯಲ್ಲಿ ಸಂಪೂರ್ಣ ಸರೋವರದಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಸ್ಥಳೀಯ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.</p>.<p>ಬಾಲಕರನ್ನು ರಕ್ಷಿಸುವ ವೇಳೆ ಸಿಬ್ಬಂದಿಗೆ ಆರೋಗ್ಯ ಏರುಪೇರಾಗಿದ್ದು, ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳನ್ನು ರಕ್ಷಿಸಲು ಸಿಬ್ಬಂದಿ ನೇರವಾಗಿ ಹಿಮವನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತರೆಲ್ಲರು ಸಂಬಂಧಿಕರೇ ಎಂಬ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong>ಮಧ್ಯಇಂಗ್ಲೆಂಡ್ನಲ್ಲಿ ಹಿಮಗಟ್ಟಿದ್ದ ಸರೋವರಕ್ಕೆ ಬಿದ್ದು ಮೂವರು ಬಾಲಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಮೃತರ ವಯಸ್ಸು 11,10 ಮತ್ತು 8 ವರ್ಷ. ಭಾನುವಾರ ಅವರ ಮೃತ ದೇಹವನ್ನು ಸೊಲಿಹಲ್ನ ಸರೋವರದಿಂದ ಹೊರತೆಗೆಯಲಾಗಿದೆ. 6 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮೃತರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಿದು. ದೇವರು ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ರಿಷಿ ಸುನಕ್ ಕಚೇರಿ ವಕ್ತಾರರು ಹೇಳಿದ್ದಾರೆ.</p>.<p>ಬಾಲಕರ ಸಾವು ವಿವರಿಸಲು ಸಾಧ್ಯವಿಲ್ಲದ ದುರಂತ. ಚಳಿಗಾಲದಲ್ಲಿ ತೆರೆದ ನೀರಿನ ಮೂಲಗಳ ಅಪಾಯಕ್ಕೆ ಈ ಘಟನೆ ಸಾಕ್ಷಿ. ಬೇರೆ ಮಕ್ಕಳು ಸಿಲುಕಿರುವ ಶಂಕೆಯಲ್ಲಿ ಸಂಪೂರ್ಣ ಸರೋವರದಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಸ್ಥಳೀಯ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.</p>.<p>ಬಾಲಕರನ್ನು ರಕ್ಷಿಸುವ ವೇಳೆ ಸಿಬ್ಬಂದಿಗೆ ಆರೋಗ್ಯ ಏರುಪೇರಾಗಿದ್ದು, ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳನ್ನು ರಕ್ಷಿಸಲು ಸಿಬ್ಬಂದಿ ನೇರವಾಗಿ ಹಿಮವನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತರೆಲ್ಲರು ಸಂಬಂಧಿಕರೇ ಎಂಬ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>