<p><strong>ಅಬುಧಾಬಿ</strong>: ಯುಎಇಯಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ನೆಲೆ ನಿಲ್ಲಲು ಉಕ್ರೇನ್ ನಾಗರಿಕರಿಗೆ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದುಬೈನಲ್ಲಿನ ಉಕ್ರೇನ್ ರಾಯಭಾರ ಕಚೇರಿ ಘೋಷಣೆ ಮಾಡಿದೆ.</p>.<p>ರಷ್ಯಾ–ಉಕ್ರೇನ್ ಯುದ್ದದಿಂದ ತೊಂದರೆಗೆ ಒಳಗಾದ ಉಕ್ರೇನ್ ನಾಗರಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇದು ಯುಎಇ ದೇಶದ ವಿದೇಶಾಂಗ ಇಲಾಖೆಯ ಸಹಕಾರದೊಡನೆ ಕಾರ್ಯಗತವಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.</p>.<p><a href="https://cms.prajavani.net/district/vijayapura/jds-leader-hd-kumaraswamy-on-builder-santhosh-patil-suicide-case-and-bjp-congress-politics-928900.html" itemprop="url">ಸಂತೋಷ್ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಒಣ ರಾಜಕಾರಣ: ಕುಮಾರಸ್ವಾಮಿ </a></p>.<p>ದುಬೈನಲ್ಲಿನ ತಾಸ್ಹೀಲ್ ಕೇಂದ್ರಗಳಲ್ಲಿ ಅರ್ಜಿಗಳು ದೊರೆಯಲಿದ್ದು, ಇಲ್ಲಿ ತಾತ್ಕಾಲಿಕವಾಗಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಯುಎಇಯಲ್ಲಿ ವೀಸಾ ಅವಧಿ ಮುಗಿದ ಉಕ್ರೇನ್ ನಾಗರಿಕರಿಗೆ ಒಂದು ವರ್ಷದ ಅವಧಿಗೆ ವೀಸಾ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.</p>.<p>ಯುಎಇ ದೇಶದ ಈ ಸಹಾಯಕ್ಕೆ ನಾವು ನಿಜಕ್ಕೂ ಚಿರಋಣಿಯಾಗಿರುತ್ತೇವೆ ಎಂದು ಉಕ್ರೇನ್ ರಾಯಭಾರ ಕಚೇರಿ ತಿಳಿಸಿದೆ.</p>.<p>ಏತನ್ಮಧ್ಯೆ ಯುಎಇ, ಉಕ್ರೇನ್ಗೆ ಸುಮಾರು 30 ಮೆಟ್ರಿಕ್ ಟನ್ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ ಎಂದು ಉಕ್ರೇನ್ ರಾಯಭಾರ ಕಚೇರಿ ಸ್ಮರಿಸಿದೆ.</p>.<p><a href="https://cms.prajavani.net/india-news/rss-worker-hacked-to-death-in-kerala-palakkad-928906.html" itemprop="url">ಪಾಲಕ್ಕಾಡ್: ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಬುಧಾಬಿ</strong>: ಯುಎಇಯಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ನೆಲೆ ನಿಲ್ಲಲು ಉಕ್ರೇನ್ ನಾಗರಿಕರಿಗೆ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ದುಬೈನಲ್ಲಿನ ಉಕ್ರೇನ್ ರಾಯಭಾರ ಕಚೇರಿ ಘೋಷಣೆ ಮಾಡಿದೆ.</p>.<p>ರಷ್ಯಾ–ಉಕ್ರೇನ್ ಯುದ್ದದಿಂದ ತೊಂದರೆಗೆ ಒಳಗಾದ ಉಕ್ರೇನ್ ನಾಗರಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇದು ಯುಎಇ ದೇಶದ ವಿದೇಶಾಂಗ ಇಲಾಖೆಯ ಸಹಕಾರದೊಡನೆ ಕಾರ್ಯಗತವಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.</p>.<p><a href="https://cms.prajavani.net/district/vijayapura/jds-leader-hd-kumaraswamy-on-builder-santhosh-patil-suicide-case-and-bjp-congress-politics-928900.html" itemprop="url">ಸಂತೋಷ್ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಒಣ ರಾಜಕಾರಣ: ಕುಮಾರಸ್ವಾಮಿ </a></p>.<p>ದುಬೈನಲ್ಲಿನ ತಾಸ್ಹೀಲ್ ಕೇಂದ್ರಗಳಲ್ಲಿ ಅರ್ಜಿಗಳು ದೊರೆಯಲಿದ್ದು, ಇಲ್ಲಿ ತಾತ್ಕಾಲಿಕವಾಗಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಯುಎಇಯಲ್ಲಿ ವೀಸಾ ಅವಧಿ ಮುಗಿದ ಉಕ್ರೇನ್ ನಾಗರಿಕರಿಗೆ ಒಂದು ವರ್ಷದ ಅವಧಿಗೆ ವೀಸಾ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.</p>.<p>ಯುಎಇ ದೇಶದ ಈ ಸಹಾಯಕ್ಕೆ ನಾವು ನಿಜಕ್ಕೂ ಚಿರಋಣಿಯಾಗಿರುತ್ತೇವೆ ಎಂದು ಉಕ್ರೇನ್ ರಾಯಭಾರ ಕಚೇರಿ ತಿಳಿಸಿದೆ.</p>.<p>ಏತನ್ಮಧ್ಯೆ ಯುಎಇ, ಉಕ್ರೇನ್ಗೆ ಸುಮಾರು 30 ಮೆಟ್ರಿಕ್ ಟನ್ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ ಎಂದು ಉಕ್ರೇನ್ ರಾಯಭಾರ ಕಚೇರಿ ಸ್ಮರಿಸಿದೆ.</p>.<p><a href="https://cms.prajavani.net/india-news/rss-worker-hacked-to-death-in-kerala-palakkad-928906.html" itemprop="url">ಪಾಲಕ್ಕಾಡ್: ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>