<p><strong>ಒಟ್ಟಾವ:</strong> ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರೆಟಿಕ್ ಪಾರ್ಟಿ (ಎನ್ಡಿಪಿ) ಘೋಷಿಸಿದೆ. </p><p>ಜಸ್ಟಿನ್ ಟ್ರುಡೊ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾರತ ಸಂಜಾತ ಕೆನಡಾ ಸಂಸದ, ಎನ್ಡಿಪಿ ನಾಯಕ ಜಗ್ಮೀತ್ ಸಿಂಗ್ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. </p><p>ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮತ ಚಲಾಯಿಸಬೇಕು. ಇದರಿಂದಾಗಿ ಒಂಬತ್ತು ವರ್ಷಗಳ ಬಳಿಕ ಟ್ರೂಡೊ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಬಳಿಕ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಜಗ್ಮೀತ್ ಸಿಂಗ್ ತಿಳಿಸಿದ್ದಾರೆ. </p><p>ಲಿಬರಲ್ ಪಕ್ಷದವರು ಮತ್ತೊಂದು ಅವಕಾಶಕ್ಕೆ ಅರ್ಹರಲ್ಲ. ಅದಕ್ಕಾಗಿಯೇ ಈ ಸರ್ಕಾರವನ್ನು ಉರುಳಿಸಲು ಹೌಸ್ ಆಫ್ ಕಾಮನ್ಸ್ನ ಮುಂದಿನ ಅಧಿವೇಶನದಲ್ಲಿ ಜಸ್ಟಿನ್ ಟ್ರುಡೊ ವಿರುದ್ಧ ನಾವು (ಎನ್ಡಿಪಿ) ಕಡ್ಡಾಯವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದರ ಜತೆಗೆ ಮತ ಚಲಾಯಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.</p><p>ಕೆನಡಾದ ಹಣಕಾಸು ಸಚಿವರ ಡಿಢೀರ್ ರಾಜೀನಾಮೆ ಹಿನ್ನೆಲೆಯಲ್ಲಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ಜತೆಗೆ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ ವರದಿಯಾಗಿದೆ. </p><p>2019ರ ಅಕ್ಟೋಬರ್ನಲ್ಲಿ ನಡೆದ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಜಗಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ‘ಕಿಂಗ್ ಮೇಕರ್‘ ಆಗಿ ಹೊರಹೊಮ್ಮಿತ್ತು. ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷ ಅಧಿಕಾರಕ್ಕೆ ಬರಲು ಎನ್ಡಿಪಿ ಬೆಂಬಲ ನೀಡಿತ್ತು.</p><p>ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ 157 ಸ್ಥಾನ ಪಡೆದರೆ, ವಿರೋಧಿ ಕನ್ಸರ್ವೇಟಿವ್ 121, ಬ್ಲಾಕ್ ಕ್ಯುಬೇಸಿಸ್ 32, ಎನ್ಡಿಪಿ 24, ಗ್ರೀನ್ ಪಾರ್ಟಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದರು. </p><p>ಟ್ರುಡೊ ಅವರು ಎನ್ಡಿಪಿ ಸಂಸದರ ಬೆಂಬಲದೊಂದಿಗೆ 338 ಸ್ಥಾನದ ಹೌಸ್ ಆಫ್ ಕಾಮನ್ಸ್ನಲ್ಲಿ ಲಿಬರಲ್ ಪಾರ್ಟಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.</p>.Fact check: ಭಾರತ 'ಭಯೋತ್ಪಾದನೆಗೆ ಪ್ರೋತ್ಸಾಹಿಸುವ ದೇಶ' ಎಂದು ಕೆನಡಾ ಘೋಷಿಸಿಲ್ಲ.ಭಾರತದ ವಿರುದ್ಧ ಆರೋಪ: ಕೆನಡಾ ಸಾಕ್ಷ್ಯ ಒದಗಿಸಿಲ್ಲ ಎಂದ ಕೇಂದ್ರ.ಸಿಖ್ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯ ಕೆನಡಾ ಸಂಸತ್ತಿನಲ್ಲಿ ವಜಾ.ಬಿಕ್ಕಟ್ಟು ಶಮನಕ್ಕೆ ಭಾರತ–ಕೆನಡಾ ಪ್ರಯತ್ನ: ವಿದೇಶಾಂಗ ವ್ಯವಹಾರಗಳ ಸಚಿವಾಲಯ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಟ್ಟಾವ:</strong> ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಿತ್ರ ಪಕ್ಷವಾದ ನ್ಯೂ ಡೆಮಾಕ್ರೆಟಿಕ್ ಪಾರ್ಟಿ (ಎನ್ಡಿಪಿ) ಘೋಷಿಸಿದೆ. </p><p>ಜಸ್ಟಿನ್ ಟ್ರುಡೊ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾರತ ಸಂಜಾತ ಕೆನಡಾ ಸಂಸದ, ಎನ್ಡಿಪಿ ನಾಯಕ ಜಗ್ಮೀತ್ ಸಿಂಗ್ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. </p><p>ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮತ ಚಲಾಯಿಸಬೇಕು. ಇದರಿಂದಾಗಿ ಒಂಬತ್ತು ವರ್ಷಗಳ ಬಳಿಕ ಟ್ರೂಡೊ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಬಳಿಕ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಜಗ್ಮೀತ್ ಸಿಂಗ್ ತಿಳಿಸಿದ್ದಾರೆ. </p><p>ಲಿಬರಲ್ ಪಕ್ಷದವರು ಮತ್ತೊಂದು ಅವಕಾಶಕ್ಕೆ ಅರ್ಹರಲ್ಲ. ಅದಕ್ಕಾಗಿಯೇ ಈ ಸರ್ಕಾರವನ್ನು ಉರುಳಿಸಲು ಹೌಸ್ ಆಫ್ ಕಾಮನ್ಸ್ನ ಮುಂದಿನ ಅಧಿವೇಶನದಲ್ಲಿ ಜಸ್ಟಿನ್ ಟ್ರುಡೊ ವಿರುದ್ಧ ನಾವು (ಎನ್ಡಿಪಿ) ಕಡ್ಡಾಯವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದರ ಜತೆಗೆ ಮತ ಚಲಾಯಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.</p><p>ಕೆನಡಾದ ಹಣಕಾಸು ಸಚಿವರ ಡಿಢೀರ್ ರಾಜೀನಾಮೆ ಹಿನ್ನೆಲೆಯಲ್ಲಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿದೆ. ಜತೆಗೆ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ ವರದಿಯಾಗಿದೆ. </p><p>2019ರ ಅಕ್ಟೋಬರ್ನಲ್ಲಿ ನಡೆದ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಜಗಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ‘ಕಿಂಗ್ ಮೇಕರ್‘ ಆಗಿ ಹೊರಹೊಮ್ಮಿತ್ತು. ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷ ಅಧಿಕಾರಕ್ಕೆ ಬರಲು ಎನ್ಡಿಪಿ ಬೆಂಬಲ ನೀಡಿತ್ತು.</p><p>ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ 157 ಸ್ಥಾನ ಪಡೆದರೆ, ವಿರೋಧಿ ಕನ್ಸರ್ವೇಟಿವ್ 121, ಬ್ಲಾಕ್ ಕ್ಯುಬೇಸಿಸ್ 32, ಎನ್ಡಿಪಿ 24, ಗ್ರೀನ್ ಪಾರ್ಟಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದರು. </p><p>ಟ್ರುಡೊ ಅವರು ಎನ್ಡಿಪಿ ಸಂಸದರ ಬೆಂಬಲದೊಂದಿಗೆ 338 ಸ್ಥಾನದ ಹೌಸ್ ಆಫ್ ಕಾಮನ್ಸ್ನಲ್ಲಿ ಲಿಬರಲ್ ಪಾರ್ಟಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು.</p>.Fact check: ಭಾರತ 'ಭಯೋತ್ಪಾದನೆಗೆ ಪ್ರೋತ್ಸಾಹಿಸುವ ದೇಶ' ಎಂದು ಕೆನಡಾ ಘೋಷಿಸಿಲ್ಲ.ಭಾರತದ ವಿರುದ್ಧ ಆರೋಪ: ಕೆನಡಾ ಸಾಕ್ಷ್ಯ ಒದಗಿಸಿಲ್ಲ ಎಂದ ಕೇಂದ್ರ.ಸಿಖ್ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯ ಕೆನಡಾ ಸಂಸತ್ತಿನಲ್ಲಿ ವಜಾ.ಬಿಕ್ಕಟ್ಟು ಶಮನಕ್ಕೆ ಭಾರತ–ಕೆನಡಾ ಪ್ರಯತ್ನ: ವಿದೇಶಾಂಗ ವ್ಯವಹಾರಗಳ ಸಚಿವಾಲಯ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>