<p><strong>ವಾಷಿಂಗ್ಟನ್</strong>: ಮಹಾರಾಷ್ಟ್ರದ ಹಿಂದುಳಿದ ಜಿಲ್ಲೆಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಅಂದಾಜು ₹ 1,592 ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಅನುಮೋದನೆ ನೀಡಿದೆ.</p><p>ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್, ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಯೋಜನೆ ಮತ್ತು ಬೆಳವಣಿಗೆ ಕಾರ್ಯತಂತ್ರಗಳಿಗೆ ಅನುವು ಮಾಡಿಕೊಡಲು, ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸಲು ನೆರವು ನೀಡಲಾಗುವುದು ಎಂದು ತಿಳಿಸಿದೆ.</p><p>ಕಾರ್ಯಾಚರಣೆಯ ಅಡಿಯಲ್ಲಿ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲಾಗುವುದು. ಅಲ್ಲಿನ ವ್ಯವಹಾರಗಳಲ್ಲಿ, ಮುಖ್ಯವಾಗಿ ಪ್ರವಾಸೋದ್ಯಮದಂತಹ ಚಟುವಟಿಕೆಗಳಲ್ಲಿ ಇ–ಸರ್ಕಾರ ಸೇವೆಗಳನ್ನು ಸುಧಾರಿಸಿ, ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಆರ್ಥಿಕ ಅಭಿವೃದ್ಧಿಯಲ್ಲಿ ಲಿಂಗ ಅಸಮಾನತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.</p><p>'ಜಿಲ್ಲಾ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯ ವೃದ್ಧಿ ಹಾಗೂ ಸಮನ್ವಯ ಸಾಧಿಸಲು ಬಂಡವಾಳ ಒದಗಿಸುವ ಮೂಲಕ, ಈ ಕಾರ್ಯಕ್ರಮವು ಯೋಜನೆ ಹಾಗೂ ಅದರ ನೀತಿ ನಿರೂಪಣೆ, ಖಾಸಗಿ ಸಹಭಾಗಿತ್ವದೊಂದಿಗೆ ಸಾರ್ವಜನಿಕ ವಲಯದಲ್ಲಿ ಸೇವೆಗಳನ್ನು ಸುಧಾರಿಸಲಿದೆ. ಇವೆಲ್ಲವೂ, ಮುಖ್ಯವಾಗಿ ಹಿಂದುಳಿದ ಜಿಲ್ಲೆಗಳ ಬೆಳವಣಿಗೆಗೆ ಆಧಾರವಾಗಲಿವೆ' ಎಂದು ವಿಶ್ವಬ್ಯಾಂಕ್ನ ಭಾರತದ ನಿರ್ದೇಶಕ ಅಗಸ್ಟೆ ತನೊ ಕೌಮೆ ಹೇಳಿದ್ದಾರೆ.</p>.ಬಾಂಗ್ಲಾ ದಂಗೆ | ಭಾರತ ವಾಸ್ತವ ಒಪ್ಪಿಕೊಳ್ಳಲಿ: ಮಹಫುಜ್ ಆಲಮ್ .ಬಾಂಗ್ಲಾ ಪರಿಸ್ಥಿತಿಗೆ ಯೂನುಸ್ ಕಾರಣ: ಹಸೀನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong>: ಮಹಾರಾಷ್ಟ್ರದ ಹಿಂದುಳಿದ ಜಿಲ್ಲೆಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಅಂದಾಜು ₹ 1,592 ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಅನುಮೋದನೆ ನೀಡಿದೆ.</p><p>ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್, ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಯೋಜನೆ ಮತ್ತು ಬೆಳವಣಿಗೆ ಕಾರ್ಯತಂತ್ರಗಳಿಗೆ ಅನುವು ಮಾಡಿಕೊಡಲು, ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸಲು ನೆರವು ನೀಡಲಾಗುವುದು ಎಂದು ತಿಳಿಸಿದೆ.</p><p>ಕಾರ್ಯಾಚರಣೆಯ ಅಡಿಯಲ್ಲಿ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲಾಗುವುದು. ಅಲ್ಲಿನ ವ್ಯವಹಾರಗಳಲ್ಲಿ, ಮುಖ್ಯವಾಗಿ ಪ್ರವಾಸೋದ್ಯಮದಂತಹ ಚಟುವಟಿಕೆಗಳಲ್ಲಿ ಇ–ಸರ್ಕಾರ ಸೇವೆಗಳನ್ನು ಸುಧಾರಿಸಿ, ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಆರ್ಥಿಕ ಅಭಿವೃದ್ಧಿಯಲ್ಲಿ ಲಿಂಗ ಅಸಮಾನತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.</p><p>'ಜಿಲ್ಲಾ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯ ವೃದ್ಧಿ ಹಾಗೂ ಸಮನ್ವಯ ಸಾಧಿಸಲು ಬಂಡವಾಳ ಒದಗಿಸುವ ಮೂಲಕ, ಈ ಕಾರ್ಯಕ್ರಮವು ಯೋಜನೆ ಹಾಗೂ ಅದರ ನೀತಿ ನಿರೂಪಣೆ, ಖಾಸಗಿ ಸಹಭಾಗಿತ್ವದೊಂದಿಗೆ ಸಾರ್ವಜನಿಕ ವಲಯದಲ್ಲಿ ಸೇವೆಗಳನ್ನು ಸುಧಾರಿಸಲಿದೆ. ಇವೆಲ್ಲವೂ, ಮುಖ್ಯವಾಗಿ ಹಿಂದುಳಿದ ಜಿಲ್ಲೆಗಳ ಬೆಳವಣಿಗೆಗೆ ಆಧಾರವಾಗಲಿವೆ' ಎಂದು ವಿಶ್ವಬ್ಯಾಂಕ್ನ ಭಾರತದ ನಿರ್ದೇಶಕ ಅಗಸ್ಟೆ ತನೊ ಕೌಮೆ ಹೇಳಿದ್ದಾರೆ.</p>.ಬಾಂಗ್ಲಾ ದಂಗೆ | ಭಾರತ ವಾಸ್ತವ ಒಪ್ಪಿಕೊಳ್ಳಲಿ: ಮಹಫುಜ್ ಆಲಮ್ .ಬಾಂಗ್ಲಾ ಪರಿಸ್ಥಿತಿಗೆ ಯೂನುಸ್ ಕಾರಣ: ಹಸೀನಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>