<p><strong>ಶರ್ಮ್ ಎಲ್ ಶೇಖ್, ಈಜಿಪ್ಟ್</strong>: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ 27ನೇ ಶೃಂಗಸಭೆಯಲ್ಲಿ (ಸಿಒಪಿ27) ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಹೆಚ್ಚು ದುರ್ಬಲವಾಗಿರುವ ಬಡರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಪರಿಹಾರ ನೀಡುವ ಸಂಬಂಧ ಚರ್ಚಿಸಲು ಎಲ್ಲ ಪ್ರತಿನಿಧಿಗಳು ಸಮ್ಮತಿಸಿದ್ದಾರೆ.</p>.<p>ಇಲ್ಲಿನ ಕಡಲ ತೀರದ ರೆಸಾರ್ಟ್ನಲ್ಲಿಭಾನುವಾರ ಆರಂಭವಾದ ಶೃಂಗಸಭೆ ಇದೇ 18ರವರೆಗೆ ನಡೆಯಲಿದೆ.ಉಕ್ರೇನ್ ಯುದ್ಧ, ಹಣದುಬ್ಬರ ಏರಿಕೆ, ಆಹಾರ ಕೊರತೆ ಮತ್ತು ಇಂಧನ ಬಿಕ್ಕಟ್ಟು ಸೇರಿ ಹಲವು ಜಾಗತಿಕ ಸವಾಲುಗಳ ನಡುವೆಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ಮಾತುಕತೆಗಾಗಿ ವಿಶ್ವದ ರಾಜತಾಂತ್ರಿಕರು ಒಟ್ಟಿಗೆ ಸೇರಿದ್ದಾರೆ.</p>.<p>ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳೆದ ವಾರವಷ್ಟೇಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ನಿಭಾಯಿಸಲು ದಾರಿ ಕಂಡುಕೊಳ್ಳದಿದ್ದರೆ ಮತ್ತು ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಬಡರಾಷ್ಟ್ರಗಳಿಗೆ ಸಹಾಯ ಮಾಡಲು ಪರಿಹಾರ ಮಾರ್ಗ ಕಂಡುಕೊಳ್ಳದ ಹೊರತು ಈ ಗ್ರಹವು ಸರಿಪಡಿಸಲಾಗದಷ್ಟು ಹವಾಮಾನ ಅವ್ಯವಸ್ಥೆ ಕಡೆಗೆ ಸಾಗುತ್ತದೆ ಎಂದು ಎಚ್ಚರಿಸಿದ್ದರು.</p>.<p>ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದಾದ ನಷ್ಟ, ಇದನ್ನು ಸರಿಪಡಿಸುವತ್ತ ಗಮನ ಹರಿಸುವುದು, ಇದಕ್ಕೆ ಬೇಕಾದ ಹಣಕಾಸು ನೆರವು ವ್ಯವಸ್ಥೆ ಮಾಡಿಕೊಳ್ಳುವ ಸಂಬಂಧದ ಪ್ರಸ್ತಾವನೆ ಕುರಿತು ಚರ್ಚಿಸುವ ಪ್ರಮುಖ ಕಾರ್ಯಸೂಚಿಗೆ ರಾಜತಾಂತ್ರಿಕರು ಅನುಮೋದನೆ ನೀಡಿದರು.</p>.<p>ಶ್ರೀಮಂತ ರಾಷ್ಟ್ರಗಳ ಮಾಲಿನ್ಯ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ಬದಲಾವಣೆಯಿಂದಾಗುವ ನಷ್ಟಗಳಿಗೆ ಪರಿಹಾರದ ಜತೆಗೆ ಬಡ ದೇಶಗಳ ಒಗ್ಗಟ್ಟನ್ನು ತೋರಿಸಲು ಜರ್ಮನಿ ಸಿದ್ಧ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ತಿಳಿಸಿದರು.</p>.<p>ಸಿಒಪಿ27ರಲ್ಲಿ ಭಾಗವಹಿಸಲು 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿದ್ದಾರೆ.120ಕ್ಕೂ ಹೆಚ್ಚು ವಿಶ್ವ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಹಲವರು ನವೆಂಬರ್ 7 ಮತ್ತು 8ರಂದು ನಡೆಯುವ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರದ ನಂತರ ಬರುವ ನಿರೀಕ್ಷೆ ಇದೆ ಎಂದು ಈಜಿಪ್ಟ್ ಹೇಳಿದೆ.</p>.<p>ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತುಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಸೇರಿ ಅನೇಕ ಉನ್ನತ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲುಯೋಜಿಸಿಲ್ಲ.ಈ ಎರಡು ದೇಶಗಳ ಪಾಲ್ಗೊಳ್ಳುವಿಕೆ ಇಲ್ಲದೇ ಮಾಲಿನ್ಯ ಹೊರಸೂಸುವಿಕೆ ತಗ್ಗಿಸಲುಈಜಿಪ್ಟ್ನಲ್ಲಿ ನಡೆಯಲಿರುವ ಮಾತುಕತೆಗಳಿಂದ ಯಾವುದೇ ದೊಡ್ಡ ಒಪ್ಪಂದಗಳು ಏರ್ಪಡುವ ಕುರಿತು ಅನುಮಾನ ವ್ಯಕ್ತವಾಗಿದೆ.</p>.<p><strong>ಶೃಂಗಸಭೆಯಲ್ಲಿ ಪ್ರತಿಭಟನೆ ಹತ್ತಿಕ್ಕಿದ ಈಜಿಪ್ಟ್</strong><br />ಸಿಒಪಿ27ರ ವೇಳೆ ಪ್ರತಿಭಟನೆ ಹತ್ತಿಕ್ಕಲು ಹಲವು ಸಂಘಟನೆಗಳ ಪ್ರಮುಖರನ್ನು ಈಜಿಪ್ಟ್ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದೆ. ಪ್ರತಿಭಟನೆ ನಿರ್ಬಂಧಿಸಿ, ಕಣ್ಗಾವಲು ಹೆಚ್ಚಿಸಿರುವುದಕ್ಕೆ ಹಲವು ರಾಷ್ಟ್ರಗಳ ಮಾನವ ಹಕ್ಕುಗಳ ಸಂಘಟನೆಗಳು ಈಜಿಪ್ಟ್ ವಿರುದ್ಧ ಟೀಕಾ ಪ್ರಹಾರ ನಡೆಸಿವೆ.</p>.<p>ಅಮೆರಿಕದಹ್ಯೂಮನ್ ರೈಟ್ಸ್ ವಾಚ್ ಸಂಘಟನೆ ಬಂಧಿತ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ನಾಗರಿಕ ಸಮಾಜದ ಗುಂಪುಗಳ ಪ್ರತಿಭಟನೆ ಹಕ್ಕು ಕಸಿದುಕೊಳ್ಳಬಾರದೆಂದು ಆಗ್ರಹಿಸಿದೆ.</p>.<p>ಪ್ರಜಾಪ್ರಭುತ್ವ ಪರ ಹೋರಾಟಗಾರ, ಬಂಧಿಸಲ್ಪಟ್ಟಿರುವ ಅಲಾ ಅಬ್ದೆಲ್-ಫತ್ತಾ ಸಿಒಪಿ 27ರ ಮೊದಲ ದಿನವೇ ಉಪವಾಸ ಸತ್ಯಾಗ್ರಹ ಆರಂಭಿಸಿ, ಹೋರಾಟಕ್ಕೆ ಕಾವು ನೀಡಿದ್ದಾರೆ.</p>.<p>ಅಬ್ದೆಲ್-ಫತ್ತಾ ಅವರ ಚಿಕ್ಕಮ್ಮ, ಪ್ರಶಸ್ತಿ ವಿಜೇತ ಕಾದಂಬರಿಕಾರ್ತಿ ಅಹ್ದಫ್ ಸೌಯೆಫ್, ಸತ್ಯಾಗ್ರಹದ ಮೊರೆ ಹೋಗಿದ್ದಾರೆ. ನೀರು ಸಹ ಇಲ್ಲದೇ ನನ್ನ ಮಗ ಸತ್ತುಹೋಗಬಹುದೆಂದು ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಅಬ್ದೆಲ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶರ್ಮ್ ಎಲ್ ಶೇಖ್, ಈಜಿಪ್ಟ್</strong>: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ 27ನೇ ಶೃಂಗಸಭೆಯಲ್ಲಿ (ಸಿಒಪಿ27) ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಹೆಚ್ಚು ದುರ್ಬಲವಾಗಿರುವ ಬಡರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಪರಿಹಾರ ನೀಡುವ ಸಂಬಂಧ ಚರ್ಚಿಸಲು ಎಲ್ಲ ಪ್ರತಿನಿಧಿಗಳು ಸಮ್ಮತಿಸಿದ್ದಾರೆ.</p>.<p>ಇಲ್ಲಿನ ಕಡಲ ತೀರದ ರೆಸಾರ್ಟ್ನಲ್ಲಿಭಾನುವಾರ ಆರಂಭವಾದ ಶೃಂಗಸಭೆ ಇದೇ 18ರವರೆಗೆ ನಡೆಯಲಿದೆ.ಉಕ್ರೇನ್ ಯುದ್ಧ, ಹಣದುಬ್ಬರ ಏರಿಕೆ, ಆಹಾರ ಕೊರತೆ ಮತ್ತು ಇಂಧನ ಬಿಕ್ಕಟ್ಟು ಸೇರಿ ಹಲವು ಜಾಗತಿಕ ಸವಾಲುಗಳ ನಡುವೆಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ಮಾತುಕತೆಗಾಗಿ ವಿಶ್ವದ ರಾಜತಾಂತ್ರಿಕರು ಒಟ್ಟಿಗೆ ಸೇರಿದ್ದಾರೆ.</p>.<p>ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳೆದ ವಾರವಷ್ಟೇಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ನಿಭಾಯಿಸಲು ದಾರಿ ಕಂಡುಕೊಳ್ಳದಿದ್ದರೆ ಮತ್ತು ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಬಡರಾಷ್ಟ್ರಗಳಿಗೆ ಸಹಾಯ ಮಾಡಲು ಪರಿಹಾರ ಮಾರ್ಗ ಕಂಡುಕೊಳ್ಳದ ಹೊರತು ಈ ಗ್ರಹವು ಸರಿಪಡಿಸಲಾಗದಷ್ಟು ಹವಾಮಾನ ಅವ್ಯವಸ್ಥೆ ಕಡೆಗೆ ಸಾಗುತ್ತದೆ ಎಂದು ಎಚ್ಚರಿಸಿದ್ದರು.</p>.<p>ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದಾದ ನಷ್ಟ, ಇದನ್ನು ಸರಿಪಡಿಸುವತ್ತ ಗಮನ ಹರಿಸುವುದು, ಇದಕ್ಕೆ ಬೇಕಾದ ಹಣಕಾಸು ನೆರವು ವ್ಯವಸ್ಥೆ ಮಾಡಿಕೊಳ್ಳುವ ಸಂಬಂಧದ ಪ್ರಸ್ತಾವನೆ ಕುರಿತು ಚರ್ಚಿಸುವ ಪ್ರಮುಖ ಕಾರ್ಯಸೂಚಿಗೆ ರಾಜತಾಂತ್ರಿಕರು ಅನುಮೋದನೆ ನೀಡಿದರು.</p>.<p>ಶ್ರೀಮಂತ ರಾಷ್ಟ್ರಗಳ ಮಾಲಿನ್ಯ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ಬದಲಾವಣೆಯಿಂದಾಗುವ ನಷ್ಟಗಳಿಗೆ ಪರಿಹಾರದ ಜತೆಗೆ ಬಡ ದೇಶಗಳ ಒಗ್ಗಟ್ಟನ್ನು ತೋರಿಸಲು ಜರ್ಮನಿ ಸಿದ್ಧ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ತಿಳಿಸಿದರು.</p>.<p>ಸಿಒಪಿ27ರಲ್ಲಿ ಭಾಗವಹಿಸಲು 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿದ್ದಾರೆ.120ಕ್ಕೂ ಹೆಚ್ಚು ವಿಶ್ವ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಹಲವರು ನವೆಂಬರ್ 7 ಮತ್ತು 8ರಂದು ನಡೆಯುವ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರದ ನಂತರ ಬರುವ ನಿರೀಕ್ಷೆ ಇದೆ ಎಂದು ಈಜಿಪ್ಟ್ ಹೇಳಿದೆ.</p>.<p>ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತುಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಸೇರಿ ಅನೇಕ ಉನ್ನತ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲುಯೋಜಿಸಿಲ್ಲ.ಈ ಎರಡು ದೇಶಗಳ ಪಾಲ್ಗೊಳ್ಳುವಿಕೆ ಇಲ್ಲದೇ ಮಾಲಿನ್ಯ ಹೊರಸೂಸುವಿಕೆ ತಗ್ಗಿಸಲುಈಜಿಪ್ಟ್ನಲ್ಲಿ ನಡೆಯಲಿರುವ ಮಾತುಕತೆಗಳಿಂದ ಯಾವುದೇ ದೊಡ್ಡ ಒಪ್ಪಂದಗಳು ಏರ್ಪಡುವ ಕುರಿತು ಅನುಮಾನ ವ್ಯಕ್ತವಾಗಿದೆ.</p>.<p><strong>ಶೃಂಗಸಭೆಯಲ್ಲಿ ಪ್ರತಿಭಟನೆ ಹತ್ತಿಕ್ಕಿದ ಈಜಿಪ್ಟ್</strong><br />ಸಿಒಪಿ27ರ ವೇಳೆ ಪ್ರತಿಭಟನೆ ಹತ್ತಿಕ್ಕಲು ಹಲವು ಸಂಘಟನೆಗಳ ಪ್ರಮುಖರನ್ನು ಈಜಿಪ್ಟ್ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದೆ. ಪ್ರತಿಭಟನೆ ನಿರ್ಬಂಧಿಸಿ, ಕಣ್ಗಾವಲು ಹೆಚ್ಚಿಸಿರುವುದಕ್ಕೆ ಹಲವು ರಾಷ್ಟ್ರಗಳ ಮಾನವ ಹಕ್ಕುಗಳ ಸಂಘಟನೆಗಳು ಈಜಿಪ್ಟ್ ವಿರುದ್ಧ ಟೀಕಾ ಪ್ರಹಾರ ನಡೆಸಿವೆ.</p>.<p>ಅಮೆರಿಕದಹ್ಯೂಮನ್ ರೈಟ್ಸ್ ವಾಚ್ ಸಂಘಟನೆ ಬಂಧಿತ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ನಾಗರಿಕ ಸಮಾಜದ ಗುಂಪುಗಳ ಪ್ರತಿಭಟನೆ ಹಕ್ಕು ಕಸಿದುಕೊಳ್ಳಬಾರದೆಂದು ಆಗ್ರಹಿಸಿದೆ.</p>.<p>ಪ್ರಜಾಪ್ರಭುತ್ವ ಪರ ಹೋರಾಟಗಾರ, ಬಂಧಿಸಲ್ಪಟ್ಟಿರುವ ಅಲಾ ಅಬ್ದೆಲ್-ಫತ್ತಾ ಸಿಒಪಿ 27ರ ಮೊದಲ ದಿನವೇ ಉಪವಾಸ ಸತ್ಯಾಗ್ರಹ ಆರಂಭಿಸಿ, ಹೋರಾಟಕ್ಕೆ ಕಾವು ನೀಡಿದ್ದಾರೆ.</p>.<p>ಅಬ್ದೆಲ್-ಫತ್ತಾ ಅವರ ಚಿಕ್ಕಮ್ಮ, ಪ್ರಶಸ್ತಿ ವಿಜೇತ ಕಾದಂಬರಿಕಾರ್ತಿ ಅಹ್ದಫ್ ಸೌಯೆಫ್, ಸತ್ಯಾಗ್ರಹದ ಮೊರೆ ಹೋಗಿದ್ದಾರೆ. ನೀರು ಸಹ ಇಲ್ಲದೇ ನನ್ನ ಮಗ ಸತ್ತುಹೋಗಬಹುದೆಂದು ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಅಬ್ದೆಲ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>