<p>ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಅಮೆರಿಕ ತಿಳಿಸಿದೆ.<br /> <br /> ತನ್ನ ರಾಜತಾಂತ್ರಿಕ ಅಧಿಕಾರಿಯ ಬಂಧನಕ್ಕೆ ಪ್ರತೀಕಾರವಾಗಿ ಭಾರತವು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಿದ್ದ ಕೆಲವು ವಿನಾಯ್ತಿ ಸೌಲಭ್ಯಗಳನ್ನು ರದ್ದುಪಡಿಸಿ ಹಾಗೂ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತ ಭದ್ರತೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ತಿರುಗೇಟು ನೀಡಿದ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ.<br /> <br /> ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್, ‘ಹೆಚ್ಚಿನ ಭಾರತೀಯರಿಗೆ ಇದೊಂದು ಸೂಕ್ಷ್ಮ ವಿಚಾರ ಎಂಬುದು ನಮಗೆ ಅರ್ಥವಾಗುತ್ತದೆ. ಈ ಬಂಧನ ಪ್ರಕರಣದಲ್ಲಿ ಅನುಸರಿಸಲಾದ ನಿಯಮಗಳ ಬಗ್ಗೆ ನಾವು ಪರಾಮರ್ಶೆ ನಡೆಸುತ್ತೇವೆ’ ಎಂದು ಹೇಳಿದರು.<br /> <br /> ‘ಇದೊಂದು ಕಾನೂನು ಜಾರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅಧಿಕೃತ ಕಾನೂನುಗಳ ಮೂಲಕ ಮತ್ತು ನಿರ್ದಿಷ್ಟ ಮಾನದಂಡಗಳ ಅನುಸಾರ ವಿಶ್ಲೇಷಿಸಬೇಕಾಗಿದೆ. ಭಾರತದೊಂದಿಗೆ ನಾವು ಹೊಂದಿರುವ ಉತ್ತಮ ಬಾಂಧವ್ಯದ ಅಡಿಯಲ್ಲಿ ಈ ವಿಚಾರವನ್ನು ಚರ್ಚಿಸುತ್ತೇವೆ’ ಎಂದು ಹಾರ್ಫ್ ಹೇಳಿದರು.<br /> <br /> <strong>‘ವಿವಸ್ತ್ರಗೊಳಿಸಿ ಶೋಧನೆ ನಡೆಸಿದ್ದು ನಿಜ’:</strong> ಈ ಮಧ್ಯೆ, ಬಂಧನದ ಅವಧಿಯಲ್ಲಿ ನಿಯಮಗಳಿಗೆ ಅನುಗುಣವಾಗಿ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಲಾಗಿದೆ ಎಂಬುದನ್ನು ಅಮೆರಿಕದ ಮಾರ್ಷಲ್ಗಳ ಸೇವಾ ಇಲಾಖೆ ಒಪ್ಪಿಕೊಂಡಿದೆ.<br /> <br /> <strong>ಸೇಡಿನ ಕ್ರಮ– ಮಾಧ್ಯಮಗಳ ಬಣ್ಣನೆ:</strong> ದೇವಯಾನಿ ಖೋಬ್ರಾಗಡೆ ಬಂಧನವನ್ನು ಪ್ರತಿಭಟಿಸಿ ಭಾರತವು ಅಮೆರಿಕ ರಾಜತಾಂತ್ರಿಕರಿಗೆ ನೀಡಿದ್ದ ವಿನಾಯ್ತಿ ಸೌಲಭ್ಯಗಳನ್ನು ರದ್ದುಗೊಳಿಸಿರುವುದು ಮತ್ತು ನವದೆಹಲಿಯ ರಾಯಭಾರಿ ಕಚೇರಿ ಸುತ್ತಮುತ್ತ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದು ‘ಪ್ರತೀಕಾರ’ ಹಾಗೂ ‘ಸೇಡಿನ’ ಕ್ರಮ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ಬಣ್ಣಿಸಿವೆ.<br /> <br /> ‘ಇದೊಂದು ಸೇಡಿನ ಕ್ರಮ’ ಎಂದು ದ ಹಿಲ್ ವರದಿ ಮಾಡಿದ್ದರೆ, ದ ನ್ಯೂಯಾರ್ಕ್ ಟೈಮ್ಸ್ ಮತ್ತು ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ‘ಪ್ರತೀಕಾರದ ಕ್ರಮಗಳು’ ಎಂದು ಬರೆದಿವೆ.<br /> <br /> ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ಇತರ ಪ್ರಮುಖ ಪತ್ರಿಕೆಗಳು, ಆನ್ಲೈನ್ ಮಾಧ್ಯಮಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿವೆ.<br /> <br /> ‘ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ನ್ಯೂಯಾರ್ಕ್ನಲ್ಲಿ ಭದ್ರತಾ ಅಧಿಕಾರಿಗಳು ನಡೆಸಿಕೊಂಡ ರೀತಿಗೆ ಆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಕ್ಷಭೇದ ಮರೆತು ಎಲ್ಲಾ ರಾಜಕಾರಣಿಗಳು ಅಮೆರಿಕದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕ ರಾಯಭಾರಿ ಕಚೇರಿಯ ರಕ್ಷಣೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ದೆಹಲಿ ಪೊಲೀಸರು ಪ್ರತೀಕಾರ ತೀರಿಸಿದ್ದಾರೆ’ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.<br /> <br /> ದೇವಯಾನಿ ಅವರ ಬಂಧನದಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ ಎಂದು ದ ಸ್ಲೇಟ್ ಆನ್ಲೈನ್ ನಿಯತಕಾಲಿಕ ಹೇಳಿದೆ.<br /> <br /> <strong>ಭಾರತೀಯ ಸಮುದಾಯದ ಖಂಡನೆ:</strong> ದೇವಯಾನಿ ಅವರ ಬಂಧನವನ್ನು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ತೀವ್ರವಾಗಿ ಖಂಡಿಸಿದ್ದಾರೆ.<br /> <br /> ದೇವಯಾನಿ ಬಂಧನ ಹಾಗೂ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಿರುವುದನ್ನು ಸಮರ್ಥಿಸಿ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್ ಅವರು ನೀಡಿರುವ ಹೇಳಿಕೆಯನ್ನು ಅಮೆರಿಕ –ಭಾರತ ರಾಜಕೀಯ ಕ್ರಿಯಾ ಸಮಿತಿ (ಯುಎಸ್ಐಎನ್ಪಿಎಸಿ) ಖಂಡಿಸಿದೆ.<br /> <br /> ‘ಹಾರ್ಫ್ ಅವರ ಹೇಳಿಕೆ ಮನನೋಯಿಸುವಂತಹದ್ದು’ ಎಂದು 30 ಲಕ್ಷ ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿಕೆಯಲ್ಲಿ ಹೇಳಿದೆ.<br /> <br /> ದೇವಯಾನಿ ಬಂಧನಕ್ಕೆ ಅನುಸರಿಸಲಾದ ನಿಯಮಗಳನ್ನು ಸಮಿತಿಯು ಪರಿಶೀಲಿಸುತ್ತಿದೆ. ಒಂದು ವೇಳೆ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆದರೆ ಅದು ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಹಾನಿ ಮಾಡಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.</p>.<p>ಇನ್ನಷ್ಟು ಸುದ್ದಿಗಳು:</p>.<p>* <a href="http://www.prajavani.net/article/%E2%80%98%E0%B2%A4%E0%B2%AA%E0%B2%BE%E0%B2%B8%E0%B2%A3%E0%B3%86-%E0%B2%B5%E0%B3%87%E0%B2%B3%E0%B3%86-%E0%B2%95%E0%B3%81%E0%B2%B8%E0%B2%BF%E0%B2%A6%E0%B2%BF%E0%B2%A6%E0%B3%8D%E0%B2%A6%E0%B3%86%E2%80%99#overlay-context=">‘ತಪಾಸಣೆ ವೇಳೆ ಕುಸಿದಿದ್ದೆ’</a><br /> * <a href="http://www.prajavani.net/article/%E2%80%98%E0%B2%B5%E0%B2%BF%E0%B2%A8%E0%B2%BE%E0%B2%AF%E0%B3%8D%E0%B2%A4%E0%B2%BF-%E0%B2%87%E0%B2%A6%E0%B3%86%E2%80%99#overlay-context=">‘ವಿನಾಯ್ತಿ ಇದೆ’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಅಮೆರಿಕ ತಿಳಿಸಿದೆ.<br /> <br /> ತನ್ನ ರಾಜತಾಂತ್ರಿಕ ಅಧಿಕಾರಿಯ ಬಂಧನಕ್ಕೆ ಪ್ರತೀಕಾರವಾಗಿ ಭಾರತವು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಿದ್ದ ಕೆಲವು ವಿನಾಯ್ತಿ ಸೌಲಭ್ಯಗಳನ್ನು ರದ್ದುಪಡಿಸಿ ಹಾಗೂ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತ ಭದ್ರತೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ತಿರುಗೇಟು ನೀಡಿದ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ.<br /> <br /> ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್, ‘ಹೆಚ್ಚಿನ ಭಾರತೀಯರಿಗೆ ಇದೊಂದು ಸೂಕ್ಷ್ಮ ವಿಚಾರ ಎಂಬುದು ನಮಗೆ ಅರ್ಥವಾಗುತ್ತದೆ. ಈ ಬಂಧನ ಪ್ರಕರಣದಲ್ಲಿ ಅನುಸರಿಸಲಾದ ನಿಯಮಗಳ ಬಗ್ಗೆ ನಾವು ಪರಾಮರ್ಶೆ ನಡೆಸುತ್ತೇವೆ’ ಎಂದು ಹೇಳಿದರು.<br /> <br /> ‘ಇದೊಂದು ಕಾನೂನು ಜಾರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅಧಿಕೃತ ಕಾನೂನುಗಳ ಮೂಲಕ ಮತ್ತು ನಿರ್ದಿಷ್ಟ ಮಾನದಂಡಗಳ ಅನುಸಾರ ವಿಶ್ಲೇಷಿಸಬೇಕಾಗಿದೆ. ಭಾರತದೊಂದಿಗೆ ನಾವು ಹೊಂದಿರುವ ಉತ್ತಮ ಬಾಂಧವ್ಯದ ಅಡಿಯಲ್ಲಿ ಈ ವಿಚಾರವನ್ನು ಚರ್ಚಿಸುತ್ತೇವೆ’ ಎಂದು ಹಾರ್ಫ್ ಹೇಳಿದರು.<br /> <br /> <strong>‘ವಿವಸ್ತ್ರಗೊಳಿಸಿ ಶೋಧನೆ ನಡೆಸಿದ್ದು ನಿಜ’:</strong> ಈ ಮಧ್ಯೆ, ಬಂಧನದ ಅವಧಿಯಲ್ಲಿ ನಿಯಮಗಳಿಗೆ ಅನುಗುಣವಾಗಿ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಲಾಗಿದೆ ಎಂಬುದನ್ನು ಅಮೆರಿಕದ ಮಾರ್ಷಲ್ಗಳ ಸೇವಾ ಇಲಾಖೆ ಒಪ್ಪಿಕೊಂಡಿದೆ.<br /> <br /> <strong>ಸೇಡಿನ ಕ್ರಮ– ಮಾಧ್ಯಮಗಳ ಬಣ್ಣನೆ:</strong> ದೇವಯಾನಿ ಖೋಬ್ರಾಗಡೆ ಬಂಧನವನ್ನು ಪ್ರತಿಭಟಿಸಿ ಭಾರತವು ಅಮೆರಿಕ ರಾಜತಾಂತ್ರಿಕರಿಗೆ ನೀಡಿದ್ದ ವಿನಾಯ್ತಿ ಸೌಲಭ್ಯಗಳನ್ನು ರದ್ದುಗೊಳಿಸಿರುವುದು ಮತ್ತು ನವದೆಹಲಿಯ ರಾಯಭಾರಿ ಕಚೇರಿ ಸುತ್ತಮುತ್ತ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದು ‘ಪ್ರತೀಕಾರ’ ಹಾಗೂ ‘ಸೇಡಿನ’ ಕ್ರಮ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ಬಣ್ಣಿಸಿವೆ.<br /> <br /> ‘ಇದೊಂದು ಸೇಡಿನ ಕ್ರಮ’ ಎಂದು ದ ಹಿಲ್ ವರದಿ ಮಾಡಿದ್ದರೆ, ದ ನ್ಯೂಯಾರ್ಕ್ ಟೈಮ್ಸ್ ಮತ್ತು ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ‘ಪ್ರತೀಕಾರದ ಕ್ರಮಗಳು’ ಎಂದು ಬರೆದಿವೆ.<br /> <br /> ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ಇತರ ಪ್ರಮುಖ ಪತ್ರಿಕೆಗಳು, ಆನ್ಲೈನ್ ಮಾಧ್ಯಮಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿವೆ.<br /> <br /> ‘ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ನ್ಯೂಯಾರ್ಕ್ನಲ್ಲಿ ಭದ್ರತಾ ಅಧಿಕಾರಿಗಳು ನಡೆಸಿಕೊಂಡ ರೀತಿಗೆ ಆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಕ್ಷಭೇದ ಮರೆತು ಎಲ್ಲಾ ರಾಜಕಾರಣಿಗಳು ಅಮೆರಿಕದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕ ರಾಯಭಾರಿ ಕಚೇರಿಯ ರಕ್ಷಣೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ದೆಹಲಿ ಪೊಲೀಸರು ಪ್ರತೀಕಾರ ತೀರಿಸಿದ್ದಾರೆ’ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.<br /> <br /> ದೇವಯಾನಿ ಅವರ ಬಂಧನದಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ ಎಂದು ದ ಸ್ಲೇಟ್ ಆನ್ಲೈನ್ ನಿಯತಕಾಲಿಕ ಹೇಳಿದೆ.<br /> <br /> <strong>ಭಾರತೀಯ ಸಮುದಾಯದ ಖಂಡನೆ:</strong> ದೇವಯಾನಿ ಅವರ ಬಂಧನವನ್ನು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ತೀವ್ರವಾಗಿ ಖಂಡಿಸಿದ್ದಾರೆ.<br /> <br /> ದೇವಯಾನಿ ಬಂಧನ ಹಾಗೂ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಿರುವುದನ್ನು ಸಮರ್ಥಿಸಿ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್ ಅವರು ನೀಡಿರುವ ಹೇಳಿಕೆಯನ್ನು ಅಮೆರಿಕ –ಭಾರತ ರಾಜಕೀಯ ಕ್ರಿಯಾ ಸಮಿತಿ (ಯುಎಸ್ಐಎನ್ಪಿಎಸಿ) ಖಂಡಿಸಿದೆ.<br /> <br /> ‘ಹಾರ್ಫ್ ಅವರ ಹೇಳಿಕೆ ಮನನೋಯಿಸುವಂತಹದ್ದು’ ಎಂದು 30 ಲಕ್ಷ ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿಕೆಯಲ್ಲಿ ಹೇಳಿದೆ.<br /> <br /> ದೇವಯಾನಿ ಬಂಧನಕ್ಕೆ ಅನುಸರಿಸಲಾದ ನಿಯಮಗಳನ್ನು ಸಮಿತಿಯು ಪರಿಶೀಲಿಸುತ್ತಿದೆ. ಒಂದು ವೇಳೆ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆದರೆ ಅದು ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಹಾನಿ ಮಾಡಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.</p>.<p>ಇನ್ನಷ್ಟು ಸುದ್ದಿಗಳು:</p>.<p>* <a href="http://www.prajavani.net/article/%E2%80%98%E0%B2%A4%E0%B2%AA%E0%B2%BE%E0%B2%B8%E0%B2%A3%E0%B3%86-%E0%B2%B5%E0%B3%87%E0%B2%B3%E0%B3%86-%E0%B2%95%E0%B3%81%E0%B2%B8%E0%B2%BF%E0%B2%A6%E0%B2%BF%E0%B2%A6%E0%B3%8D%E0%B2%A6%E0%B3%86%E2%80%99#overlay-context=">‘ತಪಾಸಣೆ ವೇಳೆ ಕುಸಿದಿದ್ದೆ’</a><br /> * <a href="http://www.prajavani.net/article/%E2%80%98%E0%B2%B5%E0%B2%BF%E0%B2%A8%E0%B2%BE%E0%B2%AF%E0%B3%8D%E0%B2%A4%E0%B2%BF-%E0%B2%87%E0%B2%A6%E0%B3%86%E2%80%99#overlay-context=">‘ವಿನಾಯ್ತಿ ಇದೆ’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>