<p><strong>ನಟಿ ಮಾಧುರಿ ದೀಕ್ಷಿತ್ ಮೇಣದ ಪ್ರತಿಮೆ<br /> ಲಂಡನ್ (ಪಿಟಿಐ):</strong> ಇಲ್ಲಿನ ಪ್ರಖ್ಯಾತ `ಮೇಡಂ ಟುಸ್ಸಾಡ್ಸ್~ ಮ್ಯೂಸಿಯಂನಲ್ಲಿ ಬಾಲಿವುಡ್ನ ಹೆಸರಾಂತ ನಟಿ ಮಾಧುರಿ ದೀಕ್ಷಿತ್ ಅವರ ಮೇಣದ ಪ್ರತಿಮೆ ನಿರ್ಮಾಣವಾಗಲಿದೆ. <br /> <br /> ಈ ಮ್ಯೂಸಿಯಂನಲ್ಲಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ನಟಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್ ಅವರ ಮೇಣದ ಪ್ರತಿಮೆಗಳಿವೆ.<br /> <br /> <strong>ಗಾಂಧೀಜಿ ಸ್ಮಾರಕ ನಿರ್ಮಿಸಲು ನಿರ್ಧಾರ<br /> ಜೆರುಸಲೇಂ (ಪಿಟಿಐ): </strong>ಶಾಂತಿದೂತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಸ್ಥಾಪಿಸಲು ಜೆರುಸಲೇಂ ನಗರಸಭೆ ನಿರ್ಧರಿಸಿದೆ. ಈ ಸ್ಮಾರಕವು ಗಾಂಧೀಜಿಯ ಪ್ರತಿಮೆ ಮತ್ತು ಧ್ಯಾನ ಕೇಂದ್ರವನ್ನೂ ಒಳಗೊಳ್ಳಲಿದೆ.<br /> <br /> `ಗಾಂಧೀಜಿ ನಿಧನರಾದ 64 ವರ್ಷಗಳ ಬಳಿಕ ಈ ಇಂಗಿತ ವ್ಯಕ್ತವಾಗಿದ್ದು, ಈ ಸ್ಮಾರಕವು ಅರಬ್ಬರು ನೆಲೆಸಿರುವ ಜಬೆಲ್ ಮುಕಬೆರ್ ಮತ್ತು ಯಹೂದಿಗಳಿರುವ ಅರ್ಮೊನ್ ಹ್ಯಾನೆಟ್ಸಿವ್ ಸಂಪರ್ಕಿಸುವ ಸ್ಥಳದಲ್ಲಿ ನಿರ್ಮಿಸಲಾಗುವುದು~ ಎಂದು ಈ ಯೋಜನೆಯ ರೂವಾರಿ ಡಾ. ಮೇರ್ ತಿಳಿಸಿದ್ದಾರೆ.<br /> <br /> <strong>ಜೈಲಿನಲ್ಲಿ ಘರ್ಷಣೆ: 31 ಸಾವು<br /> ನ್ಯುವೊ ಲಾರೆಡೊ (ಮೆಕ್ಸಿಕೊ)(ಐಎಎನ್ಎಸ್): </strong>ನಗರದ ಈಶಾನ್ಯ ಭಾಗದಲ್ಲಿರುವ ಸಾಂತಾ ಅಮಾಲಿಯಾ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದು 13 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಜೈಲಿನ ಸುತ್ತ ಪೊಲೀಸರು ಹಾಗೂ ಸೈನಿಕರು ಸುತ್ತುವರಿದು ಅಂತಿಮವಾಗಿ ಘಟನೆಯನ್ನು ನಿಯಂತ್ರಣಕ್ಕೆ ತರಲಾಯಿತು.ಈಗಾಗಲೇ 13 ಕೈದಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> <strong>ಭಾರತದ ನಕಾಶೆ: ತಪ್ಪು ತಿದ್ದಿಕೊಂಡ ಅಮೆರಿಕ<br /> ವಾಷಿಂಗ್ಟನ್ (ಪಿಟಿಐ):</strong> ಭಾರತದ ಭೌಗೋಳಿಕ ಗಡಿಯನ್ನು ತೋರಿಸುವಲ್ಲಿ ಈ ಮೊದಲು ತಪ್ಪೆಸಗಿದ್ದ ಅಮೆರಿಕದ ವಿದೇಶಾಂಗ ಖಾತೆಯು ಈಗ ತಪ್ಪನ್ನು ಸರಿಪಡಿಸಿ ಹೊಸ ಭಾರತದ ನಕಾಶೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ.<br /> <br /> ಈ ಮೊದಲು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದ ಭಾರತದ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶವೆಂಬಂತೆ ಬಿಂಬಿಸಲಾಗಿತ್ತು. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ನಕಾಶೆಯನ್ನು ವಾಪಸ್ ಪಡೆಯಲಾಗಿತ್ತು.<br /> <br /> <strong>ಅತ್ಯಾಚಾರ: 32 ವರ್ಷ ಸಜೆ<br /> ನ್ಯೂಯಾರ್ಕ್ (ಪಿಟಿಐ): </strong>ಭಾರತೀಯ ಮೂಲದ ಗೆಳತಿ ಮೇಲೆ ಅತ್ಯಾಚಾರ ಎಸಗಿದ ನ್ಯೂಯಾರ್ಕ್ನ ಖಾಸಗಿ ಪತ್ತೇದಾರಿ ವ್ಯಕ್ತಿಗೆ ನ್ಯಾಯಾಲಯ 32 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.<br /> <br /> ಗಯಾನಾದ ಭಾರತೀಯ ಮೂಲದ ಜೆರ್ರಿ ರಾಮ್ರತನ್ (39) ಎಂಬಾತನೇ ಕಾರಾಗೃಹ ಶಿಕ್ಷೆಗೆ ಒಳಗಾದವ. <br /> ಅತ್ಯಾಚಾರ, ಸುಳ್ಳು ಸಾಕ್ಷ್ಯ, ಒಳಸಂಚು, ಅಕ್ರಮವಾಗಿ ಸಾಕ್ಷಿಗಳನ್ನು ನಾಶಪಡಿಸುವಿಕೆ ಆರೋಪಗಳ ಅಡಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕ್ವೀನ್ಸ್ ಜಿಲ್ಲೆಯ ವಕೀಲ ರಿಚರ್ಡ್ ಬ್ರೌನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಟಿ ಮಾಧುರಿ ದೀಕ್ಷಿತ್ ಮೇಣದ ಪ್ರತಿಮೆ<br /> ಲಂಡನ್ (ಪಿಟಿಐ):</strong> ಇಲ್ಲಿನ ಪ್ರಖ್ಯಾತ `ಮೇಡಂ ಟುಸ್ಸಾಡ್ಸ್~ ಮ್ಯೂಸಿಯಂನಲ್ಲಿ ಬಾಲಿವುಡ್ನ ಹೆಸರಾಂತ ನಟಿ ಮಾಧುರಿ ದೀಕ್ಷಿತ್ ಅವರ ಮೇಣದ ಪ್ರತಿಮೆ ನಿರ್ಮಾಣವಾಗಲಿದೆ. <br /> <br /> ಈ ಮ್ಯೂಸಿಯಂನಲ್ಲಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ನಟಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್ ಅವರ ಮೇಣದ ಪ್ರತಿಮೆಗಳಿವೆ.<br /> <br /> <strong>ಗಾಂಧೀಜಿ ಸ್ಮಾರಕ ನಿರ್ಮಿಸಲು ನಿರ್ಧಾರ<br /> ಜೆರುಸಲೇಂ (ಪಿಟಿಐ): </strong>ಶಾಂತಿದೂತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಸ್ಥಾಪಿಸಲು ಜೆರುಸಲೇಂ ನಗರಸಭೆ ನಿರ್ಧರಿಸಿದೆ. ಈ ಸ್ಮಾರಕವು ಗಾಂಧೀಜಿಯ ಪ್ರತಿಮೆ ಮತ್ತು ಧ್ಯಾನ ಕೇಂದ್ರವನ್ನೂ ಒಳಗೊಳ್ಳಲಿದೆ.<br /> <br /> `ಗಾಂಧೀಜಿ ನಿಧನರಾದ 64 ವರ್ಷಗಳ ಬಳಿಕ ಈ ಇಂಗಿತ ವ್ಯಕ್ತವಾಗಿದ್ದು, ಈ ಸ್ಮಾರಕವು ಅರಬ್ಬರು ನೆಲೆಸಿರುವ ಜಬೆಲ್ ಮುಕಬೆರ್ ಮತ್ತು ಯಹೂದಿಗಳಿರುವ ಅರ್ಮೊನ್ ಹ್ಯಾನೆಟ್ಸಿವ್ ಸಂಪರ್ಕಿಸುವ ಸ್ಥಳದಲ್ಲಿ ನಿರ್ಮಿಸಲಾಗುವುದು~ ಎಂದು ಈ ಯೋಜನೆಯ ರೂವಾರಿ ಡಾ. ಮೇರ್ ತಿಳಿಸಿದ್ದಾರೆ.<br /> <br /> <strong>ಜೈಲಿನಲ್ಲಿ ಘರ್ಷಣೆ: 31 ಸಾವು<br /> ನ್ಯುವೊ ಲಾರೆಡೊ (ಮೆಕ್ಸಿಕೊ)(ಐಎಎನ್ಎಸ್): </strong>ನಗರದ ಈಶಾನ್ಯ ಭಾಗದಲ್ಲಿರುವ ಸಾಂತಾ ಅಮಾಲಿಯಾ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಟ 31 ಮಂದಿ ಮೃತಪಟ್ಟಿದ್ದು 13 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಜೈಲಿನ ಸುತ್ತ ಪೊಲೀಸರು ಹಾಗೂ ಸೈನಿಕರು ಸುತ್ತುವರಿದು ಅಂತಿಮವಾಗಿ ಘಟನೆಯನ್ನು ನಿಯಂತ್ರಣಕ್ಕೆ ತರಲಾಯಿತು.ಈಗಾಗಲೇ 13 ಕೈದಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> <strong>ಭಾರತದ ನಕಾಶೆ: ತಪ್ಪು ತಿದ್ದಿಕೊಂಡ ಅಮೆರಿಕ<br /> ವಾಷಿಂಗ್ಟನ್ (ಪಿಟಿಐ):</strong> ಭಾರತದ ಭೌಗೋಳಿಕ ಗಡಿಯನ್ನು ತೋರಿಸುವಲ್ಲಿ ಈ ಮೊದಲು ತಪ್ಪೆಸಗಿದ್ದ ಅಮೆರಿಕದ ವಿದೇಶಾಂಗ ಖಾತೆಯು ಈಗ ತಪ್ಪನ್ನು ಸರಿಪಡಿಸಿ ಹೊಸ ಭಾರತದ ನಕಾಶೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ.<br /> <br /> ಈ ಮೊದಲು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದ ಭಾರತದ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶವೆಂಬಂತೆ ಬಿಂಬಿಸಲಾಗಿತ್ತು. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ನಕಾಶೆಯನ್ನು ವಾಪಸ್ ಪಡೆಯಲಾಗಿತ್ತು.<br /> <br /> <strong>ಅತ್ಯಾಚಾರ: 32 ವರ್ಷ ಸಜೆ<br /> ನ್ಯೂಯಾರ್ಕ್ (ಪಿಟಿಐ): </strong>ಭಾರತೀಯ ಮೂಲದ ಗೆಳತಿ ಮೇಲೆ ಅತ್ಯಾಚಾರ ಎಸಗಿದ ನ್ಯೂಯಾರ್ಕ್ನ ಖಾಸಗಿ ಪತ್ತೇದಾರಿ ವ್ಯಕ್ತಿಗೆ ನ್ಯಾಯಾಲಯ 32 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.<br /> <br /> ಗಯಾನಾದ ಭಾರತೀಯ ಮೂಲದ ಜೆರ್ರಿ ರಾಮ್ರತನ್ (39) ಎಂಬಾತನೇ ಕಾರಾಗೃಹ ಶಿಕ್ಷೆಗೆ ಒಳಗಾದವ. <br /> ಅತ್ಯಾಚಾರ, ಸುಳ್ಳು ಸಾಕ್ಷ್ಯ, ಒಳಸಂಚು, ಅಕ್ರಮವಾಗಿ ಸಾಕ್ಷಿಗಳನ್ನು ನಾಶಪಡಿಸುವಿಕೆ ಆರೋಪಗಳ ಅಡಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕ್ವೀನ್ಸ್ ಜಿಲ್ಲೆಯ ವಕೀಲ ರಿಚರ್ಡ್ ಬ್ರೌನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>