<p><strong>ಇಸ್ಲಾಮಾಬಾದ್ (ಪಿಟಿಐ):</strong> ಹಿಂದೂ ಮತ್ತು ಸಿಖ್ಖರ ಪೂಜಾ ಮಂದಿರಗಳಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ, ಶೂ ಪಾಲಿಶ್ ಮಾಡುವಂತಹ `ಸೇವಾ~ ಕೈಂಕರ್ಯ ಮಾಡಿದ್ದು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ಒಬ್ಬರ `ಸೇವೆ~ಗೆ ಕುತ್ತು ತಂದಿದೆ. <br /> <br /> ಪೆಶಾವರ ಮೂಲದ ಉಪ ಅಟಾರ್ನಿ ಜನರಲ್ ಖುರ್ಷಿದ್ ಖಾನ್ ಸದ್ಯ ನೇಪಾಳ ಮತ್ತು ಭೂತಾನ್ಗಳಿಗೆ ಖಾಸಗಿ ಭೇಟಿಗೆ ತೆರಳಿದ್ದು, ಅಲ್ಲಿನ ಮಂದಿರಗಳಲ್ಲಿ ಇಂತಹ `ಸೇವೆ~ಗಳನ್ನು ಮಾಡಿದ್ದಾರೆ. ಇದರಿಂದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ `ಸೇವೆ~ಯಿಂದಲೇ ವಜಾಗೊಂಡಿದ್ದಾರೆ.<br /> <br /> ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎಂದು ದೃಢೀಕರಿಸಿರುವ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್, ಖಾನ್ ವಜಾಕ್ಕೆ ಏನು ಕಾರಣ ಎಂದು ತಿಳಿಸಿಲ್ಲ.ಸದ್ಯ ಕಠ್ಮಂಡುವಿನಲ್ಲಿರುವ ಖಾನ್, ಸೇವೆಯಿಂದ ವಜಾಗೊಂಡಿರುವ ವಿಷಯ ತಿಳಿದು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪಾಕ್ಗೆ ಹಿಂದಿರುಗಲು ನಿರ್ಧರಿಸಿರುವುದಾಗಿ `ಎಕ್ಸ್ಪ್ರೆಸ್ ಟ್ರಿಬ್ಯೂನ್~ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.<br /> <br /> `ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ನೋವನ್ನು ಇಂತಹ ಸೇವಾ ಕಾರ್ಯಗಳ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ಖಾನ್ ಈ ಹಿಂದೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ):</strong> ಹಿಂದೂ ಮತ್ತು ಸಿಖ್ಖರ ಪೂಜಾ ಮಂದಿರಗಳಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ, ಶೂ ಪಾಲಿಶ್ ಮಾಡುವಂತಹ `ಸೇವಾ~ ಕೈಂಕರ್ಯ ಮಾಡಿದ್ದು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ಒಬ್ಬರ `ಸೇವೆ~ಗೆ ಕುತ್ತು ತಂದಿದೆ. <br /> <br /> ಪೆಶಾವರ ಮೂಲದ ಉಪ ಅಟಾರ್ನಿ ಜನರಲ್ ಖುರ್ಷಿದ್ ಖಾನ್ ಸದ್ಯ ನೇಪಾಳ ಮತ್ತು ಭೂತಾನ್ಗಳಿಗೆ ಖಾಸಗಿ ಭೇಟಿಗೆ ತೆರಳಿದ್ದು, ಅಲ್ಲಿನ ಮಂದಿರಗಳಲ್ಲಿ ಇಂತಹ `ಸೇವೆ~ಗಳನ್ನು ಮಾಡಿದ್ದಾರೆ. ಇದರಿಂದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ `ಸೇವೆ~ಯಿಂದಲೇ ವಜಾಗೊಂಡಿದ್ದಾರೆ.<br /> <br /> ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎಂದು ದೃಢೀಕರಿಸಿರುವ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್, ಖಾನ್ ವಜಾಕ್ಕೆ ಏನು ಕಾರಣ ಎಂದು ತಿಳಿಸಿಲ್ಲ.ಸದ್ಯ ಕಠ್ಮಂಡುವಿನಲ್ಲಿರುವ ಖಾನ್, ಸೇವೆಯಿಂದ ವಜಾಗೊಂಡಿರುವ ವಿಷಯ ತಿಳಿದು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪಾಕ್ಗೆ ಹಿಂದಿರುಗಲು ನಿರ್ಧರಿಸಿರುವುದಾಗಿ `ಎಕ್ಸ್ಪ್ರೆಸ್ ಟ್ರಿಬ್ಯೂನ್~ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.<br /> <br /> `ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ನೋವನ್ನು ಇಂತಹ ಸೇವಾ ಕಾರ್ಯಗಳ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ಖಾನ್ ಈ ಹಿಂದೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>