ಭ್ರಷ್ಟಾಚಾರ: ಇನ್ನೆಷ್ಟು ದಿನ ಕಾಂಗ್ರೆಸ್, ಬಿಜೆಪಿ ನಾಟಕ?
ಒಟ್ಟಾರೆ ಇಡೀ ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ರಾಜಕಾರಣಿಗಳೆಲ್ಲರೂ ಭ್ರಷ್ಟರಾಗಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಭ್ರಷ್ಟರು ಯಾರು ಎಂಬುದು ಗೊತ್ತಿದ್ದೂ ಪ್ರಧಾನಿ ಮನಮೋಹನ್ ಸಿಂಗ್, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಅನಿಸಿಕೆಯೂ ಎಲ್ಲೆಡೆ ಕಂಡು ಬರುತ್ತಿದೆ. ಇಂತಹ ಭಾವನೆಯೂ ತಪ್ಪು. ಆದರೆ, ಮನಮೋಹನ್ ಸಿಂಗ್ ಅವರು ಜನಮಾನಸದಲ್ಲಿ ಮೂಡಿರುವ ಇಂತಹ ಅನುಮಾನ ದೂರ ಮಾಡಲು ಸೂಕ್ತ ಬಗೆಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.Last Updated 16 ಜೂನ್ 2018, 9:27 IST