<p>ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಸಮಯ ಮತ್ತೊಮ್ಮೆ ಒದಗಿಬಂದಿದೆ. ಮನರಂಜನೆಯನ್ನು ಬಯಸಿ, ಸಿನಿಮಾ ನೋಡಲು ಹಂಬಲಿಸುವ ಪ್ರೇಕ್ಷಕನ ಮೇಲೆ ಅದು ಬೀರುವ ಆಳ ಪ್ರಭಾವ ಒಳಿತನ್ನೂ ಮಾಡಿದೆ. <br /> <br /> ಅನಾಹುತಗಳನ್ನೂ ಸೃಷ್ಟಿಸಿದೆ. ಮನರಂಜನೆಗಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಜನ ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಅದರಿಂದ ಪ್ರಭಾವಿತರಾಗಿ, ಅಲ್ಲಿನ ಅವಗುಣಗಳನ್ನು ಆವಾಹಿಸಿಕೊಳ್ಳುವ, ಆರಾಧನಾ ಮನೋಭಾವ ಬೆಳೆಸಿಕೊಳ್ಳುವ <br /> <br /> ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದರಿಂದಲೇ, ಅದನ್ನು ಸದುಪಯೋಗಪಡಿಸಿಕೊಳ್ಳುವ, ಶೋಷಿಸುವ, ಲಾಭಕ್ಕೆ ಬಳಸಿಕೊಳ್ಳುವ ನಿರ್ಮಾಪಕ ವರ್ಗ ಹುಟ್ಟಿಕೊಂಡಿದೆ. ಹಣ ಸಂಪಾದಿಸುವ ಏಕೈಕ ಉದ್ದೇಶದಿಂದಲೇ ಅಂತಹ ಪ್ರೇಕ್ಷಕರನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಯತ್ನದಲ್ಲೇ ಈ ವರ್ಗ ಸದಾ ಮಗ್ನವಾಗಿರುವುದರಿಂದ, ನಮ್ಮ ಸಿನಿಮಾ ಬೌದ್ಧಿಕ ಪ್ರಗತಿ ಸಾಧಿಸಿಲ್ಲ.<br /> <br /> `ದಂಡುಪಾಳ್ಯ~ ಚಿತ್ರ ಬಿಡುಗಡೆಯಾದ ನಂತರ ಆದ ಬೆಳವಣಿಗೆಗಳನ್ನು ಗಮನಿಸಿ- ಕೊಲೆ, ಸುಲಿಗೆ, ಅತ್ಯಾಚಾರಗಳೇ ತುಂಬಿ ಹೋಗಿರುವ ಈ ಚಿತ್ರ ಸಮಾಜಕ್ಕೆ ಕೊಡುವ ಸಂದೇಶವೇನು? ಎಂದೋ ನಡೆದ ಒಂದು ಘಟನೆಯ ಸಾಕ್ಷ್ಯಚಿತ್ರವೇ ಅಥವಾ ಕೊಲೆಗಡುಕರ ವಿಜೃಂಭಣೆಯೇ? <br /> <br /> ಈ ಚಿತ್ರ ಬಿಡುಗಡೆಯಾದಾಗ ಟೀವಿ ಚಾನಲ್ಗಳಲ್ಲಿ `ದಂಡುಪಾಳ್ಯ~ ತಂಡದ ಬೆನ್ನತ್ತಿ ಆ ತಂಡವನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರ ಸಂದರ್ಶನ, ಮಾತುಗಳು, ಅಂದಿನ ಘಟನೆಗಳ ನೆನಪು, ಮೊದಲಾದವು ಚಿತ್ರದ ಪ್ರಚಾರದ ರೂಪದಲ್ಲಿ ಪ್ರಸಾರವಾದವು. ಚಿತ್ರದ ಬಗ್ಗೆ ಮಾತನಾಡಿದ ಎಲ್ಲ ಪೊಲೀಸರೂ, `ಸಮಾಜದಲ್ಲಿ ಜನರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಚಿತ್ರ ಮಹತ್ವದ್ದು, ಒಳ್ಳೆಯ ಪ್ರಯತ್ನ~ ಎಂದೆಲ್ಲಾ ಶ್ಲಾಘಿಸಿದರು.<br /> <br /> ಇದೇ ರೀತಿಯ ಉದ್ದೇಶದಿಂದಲೇ ಸೆನ್ಸಾರ್ ಮಂಡಳಿ ಸದಸ್ಯರೂ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದರು ಎಂದು ಕಾಣುತ್ತದೆ. ರೇಪುಗಳು, ಕುತ್ತಿಗೆ ಕುಯ್ಯುವ ದೃಶ್ಯಗಳು, ಅಶ್ಲೀಲ ಸಂಭಾಷಣೆಗಳೊಡನೆ ಕತೆಗಾಗಿ ಹೆಣೆದ ಕತೆಯನ್ನಿಟ್ಟುಕೊಂಡು ಹಸಿಬಿಸಿಯಾಗಿರುವ ಉದ್ದೇಶರಹಿತವಾಗಿರುವ ಈ ಚಿತ್ರವನ್ನು ಯಥಾವತ್ತಾಗಿ ಪ್ರದರ್ಶನಕ್ಕೆ ಬಿಡುವುದಕ್ಕೆ ಮುನ್ನ ಈ ಎರಡೂ ವಿಭಾಗದ ಜನ, ಇದನ್ನು ಪಡ್ಡೆ ಹುಡುಗರು, ನಿರುದ್ಯೋಗಿಗಳು, ಕೆಲಸವಿಲ್ಲದ ಸೋಂಬೇರಿಗಳು ನೋಡಿದರೆ ಏನಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿದ್ದರೆ ಚೆನ್ನಾಗಿತ್ತು. <br /> <br /> ಅಂತಹ ಹೊಣೆ ಹೊತ್ತವರು ಒಂದು ಕ್ಷಣ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಎಷ್ಟು ಅನಾಹುತವಾಗುತ್ತದೆ ಎಂಬುದಕ್ಕೆ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದ, ವರದಿಯಾದ ಘಟನೆಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಅನಾಹುತಗಳನ್ನು ಗಮನಿಸಿದರೆ ಸಾಕು.<br /> <br /> ಆಗಸ್ಟ್ 7ರಂದು ಮೈಸೂರಿನ ಜೆಪಿ ನಗರದ ಪೊಲೀಸ್ ಬೂತ್ ಬಳಿ ಇರುವ ಡಾ. ಜಗನ್ನಾಥಾಚಾರ್ ಮತ್ತು ಅವರ ಪುತ್ರಿ ಅಶ್ವಿನಿ ಅವರ ಕತ್ತು ಕೊಯ್ದು ಕೊಲೆ ಮಾಡಲಾಯಿತು. ಅಲ್ಲದೆ, ಮನೆಯಲ್ಲಿದ್ದ ಚಿನ್ನದ ಸರಗಳು, ನೆಕ್ಲೆಸ್, ಬಳೆ, ಎಲ್ಲವೂ ಸೇರಿ 5 ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯಗಳನ್ನು ದೋಚಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದರು. <br /> <br /> 21 ಮತ್ತು 26 ವರ್ಷ ವಯಸ್ಸಿನ ಹೋಟೆಲ್ ಕೆಲಸಗಾರರಾದ ಈ ಇಬ್ಬರು, ಐಷಾರಾಮಿ ಜೀವನ ನಡೆಸಲು ಈ ಕೃತ್ಯ ಮಾಡಿದ್ದಾಗಿ ತಿಳಿಸಿದರು. ದಂಡುಪಾಳ್ಯ ಸಿನಿಮಾ ನೋಡಿ ಅದರಿಂದ ಪ್ರೇರೇಪಿತರಾಗಿ ಈ ಕೊಲೆ ಮಾಡಿದ್ದಾಗಿ ಯುವಕರು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ. <br /> <br /> ಆಗಸ್ಟ್ 2ನೇ ತೇದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಬಡಾವಣೆಯಲ್ಲಿ ಒಂಟಿ ಮಹಿಳೆಯನ್ನು ಮಂಚಕ್ಕೆ ಕಟ್ಟಿಹಾಕಿ ಕೊಲೆ ಮಾಡಲಾಗಿದೆ. ಮನೆಗೆ ನೀರು ಕೇಳಿಕೊಂಡು ಬಂದವರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರೇ ಹೇಳಿದ್ದಾರೆ. `ದಂಡುಪಾಳ್ಯ~ದಲ್ಲಿ ಪೂಜಾಗಾಂಧಿ ಮಾಡುವುದೇನು? ಆಗಸ್ಟ್ 10ರಂದು ಜೆ.ಪಿ. ನಗರದಲ್ಲಿ ವೆಂಟೇಶಯ್ಯ ಮತ್ತು ಅವರ ಪತ್ನಿ ಸ್ವರ್ಣಾಂಬ ಅವರ ಹತ್ಯೆಯಾಯಿತು.<br /> <br /> ಇಬ್ಬರೂ ವೃದ್ಧರು. ಈ ಕೊಲೆ ನಡೆದಿರುವ ರೀತಿಯನ್ನು ಗಮನಿಸಿದರೆ ದಂಡುಪಾಳ್ಯ ಚಿತ್ರದಿಂದ ಪ್ರೇರೇಪಣೆ ಪಡೆದಿರಲಿಕ್ಕೂ ಸಾಕು ಎನ್ನುವುದು ಸ್ಪಷ್ಟವಾಗುತ್ತದೆ. ಆಗಸ್ಟ್ 1ರಿಂದ 10ರವರೆಗೆ ಬೆಂಗಳೂರು ನಗರವೊಂದರಲ್ಲೇ 12 ಸರಣಿ ಕೊಲೆಗಳು ನಡೆದಿವೆ. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಕೊಲೆ ಆಗುತ್ತಿರುವುದು ದಂಡುಪಾಳ್ಯದ ಕಥಾಸೂತ್ರ. <br /> <br /> ಇದು ಬೆಂಗಳೂರಿನಲ್ಲಿ ಮರುಕಳಿಸುತ್ತಿರುವುದಕ್ಕೆ ದಂಡುಪಾಳ್ಯವೇ ಕಾರಣ ಎನ್ನುವುದು ಅವಸರದ ತೀರ್ಮಾನ ಎಂದು ಕೆಲವರು ಹೇಳಬಹುದು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ದೊಡ್ಡ ಪ್ರತಿಭಟನೆಯೇ ನಡೆಯಿತು. `ದಂಡುಪಾಳ್ಯ~ ಬಿಡುಗಡೆಯಾದ ನಂತರ ಅಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾದವು. ದೊಡ್ಡಬಳ್ಳಾಪುರದ ದರ್ಗಾಜೋಗಿ ಹಳ್ಳಿ ಬಡಾವಣೆಯಲ್ಲಿ ಜುಲೈ 20ರಂದು ಒಂಟಿ ಮಹಿಳೆಯ ಕೊಲೆಯಾಯಿತು.<br /> <br /> ಪೊಲೀಸರು ತನಿಖೆ ಚುರುಕುಗೊಳಿಸಲಿಲ್ಲ. ಜುಲೈ 25ರಂದು ಮತ್ತೊಂದು ಬಡಾವಣೆಯಲ್ಲಿ ಮತ್ತೊಬ್ಬ ಒಂಟಿಮಹಿಳೆಯ ಕೊಲೆ ನಡೆಯಿತು. ಮಹಿಳೆಯ ತಲೆಗೆ ಬಡಿದು, ಎಲ್ಲವನ್ನೂ ಅಪಹರಿಸಿ, ಕತ್ತುಕುಯ್ದು ಹೋದದ್ದು ಥೇಟ್ `ದಂಡುಪಾಳ್ಯ~ ಚಿತ್ರದ ಶೈಲಿಯಲ್ಲೇ ಇದೆ ಎಂದು ಅಲ್ಲಿಗೆ ಜನರಿಗೆ ಖಾತ್ರಿಯಾಗಿತ್ತು. ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಕ್ಕೆ ತೆರಳಿ, ಗಲಾಟೆ ಮಾಡಿ ಪ್ರದರ್ಶನ ರದ್ದಾಗುವಂತೆ ಮಾಡಿದರು.<br /> <br /> ಒಂದು ಸಿನಿಮಾ ಪ್ರದರ್ಶನಕ್ಕೆ ಬಂದ ನಂತರ ಇಷ್ಟೊಂದು ಪ್ರಚೋದನಕಾರಿಯಾಗುತ್ತದೆ, ಅಪರಾಧ ಮನೋಭಾವನೆ ಇರುವವರಲ್ಲಿ ಕೆಟ್ಟಕೃತ್ಯ ಮಾಡುವಂತೆ ಪ್ರೇರೇಪಿಸುತ್ತದೆ ಎನ್ನುವ ಮುನ್ಹೊಳಹು ಸೆನ್ಸಾರ್ ಮಂಡಳಿಗೆ ಇರಬೇಕಾದ್ದು ಅಪೇಕ್ಷಣೀಯ.<br /> ಕೆಲವು ತಿಂಗಳ ಹಿಂದೆ ಚೆನ್ನೈ ಶಾಲೆಯೊಂದರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ. ತರಗತಿಯಲ್ಲಿ ಸರಿಯಾದ ಅಂಕ ಗಳಿಸದೆ ತಂಟೆ ಮಾಡುತ್ತಿದ್ದ ಬಾಲಕನೊಬ್ಬ ಗದರಿದ ಶಿಕ್ಷಕಿಗೆ ಚಾಕುವಿನಿಂದ ಇರಿದು ಕೊಂದು ಹಾಕಿದ.<br /> <br /> ವಿಚಾರಣೆಯ ವೇಳೆ ಆತ, ಅಗ್ನಿಪಥ್ ಚಿತ್ರದ ಪ್ರೇರಣೆಯಿಂದ ಆ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಸಿನಿಮಾಗಳಲ್ಲಿನ ಕತೆ ಎಂದರೆ ರಾಮನೂ ಇರುತ್ತಾನೆ. ರಾವಣನೂ ಇರುತ್ತಾನೆ. ಆದರೆ ನಿರೂಪಣೆಯಲ್ಲಿ ವಿಜೃಂಭಿಸುವ ಮೌಲ್ಯಗಳು ಪ್ರೇಕ್ಷಕನನ್ನು ರಾಮನತ್ತ ಒಲಿಯುವಂತೆ ಮಾಡುತ್ತವೆ. <br /> <br /> ನಿರ್ದೇಶಕನೇ ರಾವಣನ ಪರವಹಿಸಿ, ಸೀತೆಯನ್ನು ಅಪಹರಿಸಿದ್ದು ಕರೆಕ್ಟ್ ಎಂದು ಹೇಳಿದರೆ ಏನಾಗುತ್ತದೆ? ಸಮಾಜ ಗಬ್ಬೆದ್ದು ಹೋಗುತ್ತದೆ, ಅಡ್ಡದಾರಿಯನ್ನೇ ರಾಜಮಾರ್ಗ ಎಂದು ಹೇಳಿಕೊಂಡು ಓಡಾಡುತ್ತಿರುವ ಕೆಲ ಚಿತ್ರ ನಿರ್ಮಾಪಕರು ನಿರ್ದೇಶಕರುಗಳಿಂದಾಗಿ ರಾಜ್ಯದಲ್ಲಿ ಅಪರಾಧದ ಪಟ್ಟಿ ಸರ್ರನೆ ಏರುಮುಖವಾಗಿ ಬಿಟ್ಟಿದೆ.<br /> <br /> ಎಂಬತ್ತರ ದಶಕದಲ್ಲಿ ಚಿತ್ರಮಂದಿರಗಳನ್ನು ದರೋಡೆಕೋರರು, ಕಳ್ಳರು ತಮ್ಮ ಆವಾಸಸ್ಥಾನ ಮಾಡಿಕೊಂಡಿದ್ದರು. ಆಗ ಬೆಂಗಳೂರು ನಗರದಲ್ಲಿ ದರೋಡೆ, ಗೂಂಡಾಗಳ ಹಾವಳಿ ವಿಪರೀತವಾಗಿತ್ತು. ಮಧ್ಯರಾತ್ರಿ ಮನೆಗೆ ನುಗ್ಗಿ, ಬಾಗಿಲು ಮುರಿದು, ಕೊಲೆ ಮಾಡಿ ದೋಚಿ ಪರಾರಿಯಾಗುವ ಘಟನೆಗಳು ಹೆಚ್ಚಾಗಿದ್ದವು.<br /> <br /> ಪೊಲೀಸರ ತನಿಖೆಯಿಂದ ಬಹಿರಂಗವಾದ ಸಂಗತಿಯೇ ಅಚ್ಚರಿ ಹುಟ್ಟಿಸುವಂತಹದು. ದರೋಡೆಕೋರರು ತಾವು ದರೋಡೆ ಮಾಡಬೇಕಾದ ಮನೆಯನ್ನು ಮೊದಲೇ ಗುರುತಿಸಿಟ್ಟುಕೊಂಡಿರುತ್ತಾರೆ. <br /> <br /> ರಾತ್ರಿ 9.30ರ ಸಿನಿಮಾ (ಸೆಕೆಂಡ್ ಶೋ) ನೋಡಿ, ಮಧ್ಯರಾತ್ರಿಯವರೆಗೆ ಸಮಯ ಕಳೆಯುತ್ತಾರೆ. ರಾತ್ರಿ 12.30ಕ್ಕೆ ಸಿನಿಮಾ ಮುಗಿಯುತ್ತದೆ. ಕಳ್ಳರಿಗೆ ಪ್ರಶಸ್ತಕಾಲ. ಈ ಸ್ಕೆಚ್ ಬಹಿರಂಗಗೊಂಡ ನಂತರ ಪೊಲೀಸರು ಸೆಕೆಂಡ್ಶೋ ಪ್ರದರ್ಶನವನ್ನೇ ರದ್ದು ಮಾಡಲು ಆದೇಶಿಸಿದರು.<br /> <br /> ಅಮೆರಿಕದಲ್ಲಾದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಜಾಗತಿಕವಾಗಿ ಸಿನಿಮಾ ಒಂದೇ ರೀತಿಯ ಪ್ರಭಾವ ಬೀರುತ್ತದೆ. ಇಲ್ಲಿ ದಂಡುಪಾಳ್ಯ ಅಲ್ಲಿ `ಬ್ಯಾಟ್ಮ್ಯಾನ್~ ( ದಿ ಡಾರ್ಕ್ ನೈಟ್ ರೈಸಸ್). ಬ್ಯಾಟ್ಮ್ಯಾನ್ ಸರಣಿಯ ಜೋಕರ್ ಪಾತ್ರದಿಂದ ಪ್ರೇರಣೆಗೊಂಡ ಯುವಕನೊಬ್ಬ ಚಿತ್ರಮಂದಿರಕ್ಕೆ ತೆರಳಿ, ಬಂದೂಕಿನಿಂದ ಸತತವಾಗಿ ಗುಂಡುಹಾರಿಸಿ 12 ಪ್ರೇಕ್ಷಕರನ್ನು ಕೊಂದ ಘಟನೆಗೆ ಕಾರಣವೇನಿರಬಹುದು? ಅಲ್ಲಿನ ನಿರುದ್ಯೋಗಿ ಯುವಕರಿಗೆ ಸಿನಿಮಾ ಏನು ಕಲಿಸುತ್ತಿದೆ? ಸಿನಿಮಾದವರೇ ಇದಕ್ಕೆ ಉತ್ತರ ಕೊಡಬೇಕು.<br /> <br /> ಭೂಗತ ಜಗತ್ತಿನ ಜನರ ಉಪಟಳ ಹೆಚ್ಚಾಗಿದ್ದ ದಿನಗಳಲ್ಲಿ ಅಂತಹ ಹೆಸರುಗಳನ್ನೇ ಸಿನಿಮಾಗಳಿಗೆ ಇಟ್ಟು, ಅವರಂತಹವರನ್ನೇ ಹೀರೋಗಳನ್ನಾಗಿ ಮಾಡಿ, ಅಂಥವರ ದುಡ್ಡಿನಿಂದಲೇ ಸಿನಿಮಾ ಮಾಡುತ್ತಿದ್ದ ನಮ್ಮ ನಿರ್ಮಾಪಕರು, ಸಿನಿಮಾ ಉದ್ಯಮವನ್ನೇ ಭೂಗತಲೋಕದ ದಾದಾಗಳ ಕೈಗೆ ಒಪ್ಪಿಸಿಬಿಟ್ಟರು.<br /> <br /> ನಮ್ಮ ಮಹಾನ್ ನಟರೊಬ್ಬರು ಎಕೆ-47 ಬಂದೂಕು ಸರಬರಾಜು ವ್ಯವಹಾರದಲ್ಲಿ ತೊಡಗಿಸಿಕೊಂಡು, ಸಿಕ್ಕಿಬಿದ್ದದ್ದು ನಿಮಗೆಲ್ಲಾ ಗೊತ್ತೇ ಇದೆ. ನಟಿಯೊಬ್ಬಳು ಭೂಗತ ದಾದಾನೊಬ್ಬನ ಮಡದಿಯಾಗಿ ದೇಶಾಂತರ ಮಾಡಿ, ಹಗರಣಗಳಲ್ಲಿ ಸಿಕ್ಕಿಬಿದ್ದು ಈಗ ಜೈಲಿನಲ್ಲಿರುವುದು ಬೇರೆ ಕತೆ. <br /> <br /> ನಾವು ಸಿನಿಮಾಗಳ ಮೂಲಕ ಭಯೋತ್ಪಾದಕರನ್ನು, ಉಗ್ರಗಾಮಿಗಳನ್ನು, ನಕ್ಸಲರನ್ನು ಹೀರೋ ಮಾಡಿಟ್ಟಿದ್ದೇವೆ. ಇಂದಿನ ಯುವಕರಿಗೆ ಈ ಹೀರೋಗಳ ಜೀವನಶೈಲಿ ಅತ್ಯಾಕರ್ಷಕ ಎನ್ನಿಸುವಷ್ಟರಮಟ್ಟಿಗೆ ನಮ್ಮ ಕಥಾಶೈಲಿಯನ್ನು ಹಿಗ್ಗಿಸಿಟ್ಟಿದ್ದೇವೆ. ಚಿತ್ರರಂಗ ಮರೆತ ಜವಾಬ್ದಾರಿಯನ್ನು ನೆನಪಿಸುವುದು ಹೇಗೆ?</p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಸಮಯ ಮತ್ತೊಮ್ಮೆ ಒದಗಿಬಂದಿದೆ. ಮನರಂಜನೆಯನ್ನು ಬಯಸಿ, ಸಿನಿಮಾ ನೋಡಲು ಹಂಬಲಿಸುವ ಪ್ರೇಕ್ಷಕನ ಮೇಲೆ ಅದು ಬೀರುವ ಆಳ ಪ್ರಭಾವ ಒಳಿತನ್ನೂ ಮಾಡಿದೆ. <br /> <br /> ಅನಾಹುತಗಳನ್ನೂ ಸೃಷ್ಟಿಸಿದೆ. ಮನರಂಜನೆಗಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಜನ ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಅದರಿಂದ ಪ್ರಭಾವಿತರಾಗಿ, ಅಲ್ಲಿನ ಅವಗುಣಗಳನ್ನು ಆವಾಹಿಸಿಕೊಳ್ಳುವ, ಆರಾಧನಾ ಮನೋಭಾವ ಬೆಳೆಸಿಕೊಳ್ಳುವ <br /> <br /> ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದರಿಂದಲೇ, ಅದನ್ನು ಸದುಪಯೋಗಪಡಿಸಿಕೊಳ್ಳುವ, ಶೋಷಿಸುವ, ಲಾಭಕ್ಕೆ ಬಳಸಿಕೊಳ್ಳುವ ನಿರ್ಮಾಪಕ ವರ್ಗ ಹುಟ್ಟಿಕೊಂಡಿದೆ. ಹಣ ಸಂಪಾದಿಸುವ ಏಕೈಕ ಉದ್ದೇಶದಿಂದಲೇ ಅಂತಹ ಪ್ರೇಕ್ಷಕರನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಯತ್ನದಲ್ಲೇ ಈ ವರ್ಗ ಸದಾ ಮಗ್ನವಾಗಿರುವುದರಿಂದ, ನಮ್ಮ ಸಿನಿಮಾ ಬೌದ್ಧಿಕ ಪ್ರಗತಿ ಸಾಧಿಸಿಲ್ಲ.<br /> <br /> `ದಂಡುಪಾಳ್ಯ~ ಚಿತ್ರ ಬಿಡುಗಡೆಯಾದ ನಂತರ ಆದ ಬೆಳವಣಿಗೆಗಳನ್ನು ಗಮನಿಸಿ- ಕೊಲೆ, ಸುಲಿಗೆ, ಅತ್ಯಾಚಾರಗಳೇ ತುಂಬಿ ಹೋಗಿರುವ ಈ ಚಿತ್ರ ಸಮಾಜಕ್ಕೆ ಕೊಡುವ ಸಂದೇಶವೇನು? ಎಂದೋ ನಡೆದ ಒಂದು ಘಟನೆಯ ಸಾಕ್ಷ್ಯಚಿತ್ರವೇ ಅಥವಾ ಕೊಲೆಗಡುಕರ ವಿಜೃಂಭಣೆಯೇ? <br /> <br /> ಈ ಚಿತ್ರ ಬಿಡುಗಡೆಯಾದಾಗ ಟೀವಿ ಚಾನಲ್ಗಳಲ್ಲಿ `ದಂಡುಪಾಳ್ಯ~ ತಂಡದ ಬೆನ್ನತ್ತಿ ಆ ತಂಡವನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರ ಸಂದರ್ಶನ, ಮಾತುಗಳು, ಅಂದಿನ ಘಟನೆಗಳ ನೆನಪು, ಮೊದಲಾದವು ಚಿತ್ರದ ಪ್ರಚಾರದ ರೂಪದಲ್ಲಿ ಪ್ರಸಾರವಾದವು. ಚಿತ್ರದ ಬಗ್ಗೆ ಮಾತನಾಡಿದ ಎಲ್ಲ ಪೊಲೀಸರೂ, `ಸಮಾಜದಲ್ಲಿ ಜನರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಚಿತ್ರ ಮಹತ್ವದ್ದು, ಒಳ್ಳೆಯ ಪ್ರಯತ್ನ~ ಎಂದೆಲ್ಲಾ ಶ್ಲಾಘಿಸಿದರು.<br /> <br /> ಇದೇ ರೀತಿಯ ಉದ್ದೇಶದಿಂದಲೇ ಸೆನ್ಸಾರ್ ಮಂಡಳಿ ಸದಸ್ಯರೂ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದರು ಎಂದು ಕಾಣುತ್ತದೆ. ರೇಪುಗಳು, ಕುತ್ತಿಗೆ ಕುಯ್ಯುವ ದೃಶ್ಯಗಳು, ಅಶ್ಲೀಲ ಸಂಭಾಷಣೆಗಳೊಡನೆ ಕತೆಗಾಗಿ ಹೆಣೆದ ಕತೆಯನ್ನಿಟ್ಟುಕೊಂಡು ಹಸಿಬಿಸಿಯಾಗಿರುವ ಉದ್ದೇಶರಹಿತವಾಗಿರುವ ಈ ಚಿತ್ರವನ್ನು ಯಥಾವತ್ತಾಗಿ ಪ್ರದರ್ಶನಕ್ಕೆ ಬಿಡುವುದಕ್ಕೆ ಮುನ್ನ ಈ ಎರಡೂ ವಿಭಾಗದ ಜನ, ಇದನ್ನು ಪಡ್ಡೆ ಹುಡುಗರು, ನಿರುದ್ಯೋಗಿಗಳು, ಕೆಲಸವಿಲ್ಲದ ಸೋಂಬೇರಿಗಳು ನೋಡಿದರೆ ಏನಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿದ್ದರೆ ಚೆನ್ನಾಗಿತ್ತು. <br /> <br /> ಅಂತಹ ಹೊಣೆ ಹೊತ್ತವರು ಒಂದು ಕ್ಷಣ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಎಷ್ಟು ಅನಾಹುತವಾಗುತ್ತದೆ ಎಂಬುದಕ್ಕೆ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದ, ವರದಿಯಾದ ಘಟನೆಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಅನಾಹುತಗಳನ್ನು ಗಮನಿಸಿದರೆ ಸಾಕು.<br /> <br /> ಆಗಸ್ಟ್ 7ರಂದು ಮೈಸೂರಿನ ಜೆಪಿ ನಗರದ ಪೊಲೀಸ್ ಬೂತ್ ಬಳಿ ಇರುವ ಡಾ. ಜಗನ್ನಾಥಾಚಾರ್ ಮತ್ತು ಅವರ ಪುತ್ರಿ ಅಶ್ವಿನಿ ಅವರ ಕತ್ತು ಕೊಯ್ದು ಕೊಲೆ ಮಾಡಲಾಯಿತು. ಅಲ್ಲದೆ, ಮನೆಯಲ್ಲಿದ್ದ ಚಿನ್ನದ ಸರಗಳು, ನೆಕ್ಲೆಸ್, ಬಳೆ, ಎಲ್ಲವೂ ಸೇರಿ 5 ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯಗಳನ್ನು ದೋಚಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದರು. <br /> <br /> 21 ಮತ್ತು 26 ವರ್ಷ ವಯಸ್ಸಿನ ಹೋಟೆಲ್ ಕೆಲಸಗಾರರಾದ ಈ ಇಬ್ಬರು, ಐಷಾರಾಮಿ ಜೀವನ ನಡೆಸಲು ಈ ಕೃತ್ಯ ಮಾಡಿದ್ದಾಗಿ ತಿಳಿಸಿದರು. ದಂಡುಪಾಳ್ಯ ಸಿನಿಮಾ ನೋಡಿ ಅದರಿಂದ ಪ್ರೇರೇಪಿತರಾಗಿ ಈ ಕೊಲೆ ಮಾಡಿದ್ದಾಗಿ ಯುವಕರು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ. <br /> <br /> ಆಗಸ್ಟ್ 2ನೇ ತೇದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಬಡಾವಣೆಯಲ್ಲಿ ಒಂಟಿ ಮಹಿಳೆಯನ್ನು ಮಂಚಕ್ಕೆ ಕಟ್ಟಿಹಾಕಿ ಕೊಲೆ ಮಾಡಲಾಗಿದೆ. ಮನೆಗೆ ನೀರು ಕೇಳಿಕೊಂಡು ಬಂದವರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರೇ ಹೇಳಿದ್ದಾರೆ. `ದಂಡುಪಾಳ್ಯ~ದಲ್ಲಿ ಪೂಜಾಗಾಂಧಿ ಮಾಡುವುದೇನು? ಆಗಸ್ಟ್ 10ರಂದು ಜೆ.ಪಿ. ನಗರದಲ್ಲಿ ವೆಂಟೇಶಯ್ಯ ಮತ್ತು ಅವರ ಪತ್ನಿ ಸ್ವರ್ಣಾಂಬ ಅವರ ಹತ್ಯೆಯಾಯಿತು.<br /> <br /> ಇಬ್ಬರೂ ವೃದ್ಧರು. ಈ ಕೊಲೆ ನಡೆದಿರುವ ರೀತಿಯನ್ನು ಗಮನಿಸಿದರೆ ದಂಡುಪಾಳ್ಯ ಚಿತ್ರದಿಂದ ಪ್ರೇರೇಪಣೆ ಪಡೆದಿರಲಿಕ್ಕೂ ಸಾಕು ಎನ್ನುವುದು ಸ್ಪಷ್ಟವಾಗುತ್ತದೆ. ಆಗಸ್ಟ್ 1ರಿಂದ 10ರವರೆಗೆ ಬೆಂಗಳೂರು ನಗರವೊಂದರಲ್ಲೇ 12 ಸರಣಿ ಕೊಲೆಗಳು ನಡೆದಿವೆ. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಕೊಲೆ ಆಗುತ್ತಿರುವುದು ದಂಡುಪಾಳ್ಯದ ಕಥಾಸೂತ್ರ. <br /> <br /> ಇದು ಬೆಂಗಳೂರಿನಲ್ಲಿ ಮರುಕಳಿಸುತ್ತಿರುವುದಕ್ಕೆ ದಂಡುಪಾಳ್ಯವೇ ಕಾರಣ ಎನ್ನುವುದು ಅವಸರದ ತೀರ್ಮಾನ ಎಂದು ಕೆಲವರು ಹೇಳಬಹುದು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ದೊಡ್ಡ ಪ್ರತಿಭಟನೆಯೇ ನಡೆಯಿತು. `ದಂಡುಪಾಳ್ಯ~ ಬಿಡುಗಡೆಯಾದ ನಂತರ ಅಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾದವು. ದೊಡ್ಡಬಳ್ಳಾಪುರದ ದರ್ಗಾಜೋಗಿ ಹಳ್ಳಿ ಬಡಾವಣೆಯಲ್ಲಿ ಜುಲೈ 20ರಂದು ಒಂಟಿ ಮಹಿಳೆಯ ಕೊಲೆಯಾಯಿತು.<br /> <br /> ಪೊಲೀಸರು ತನಿಖೆ ಚುರುಕುಗೊಳಿಸಲಿಲ್ಲ. ಜುಲೈ 25ರಂದು ಮತ್ತೊಂದು ಬಡಾವಣೆಯಲ್ಲಿ ಮತ್ತೊಬ್ಬ ಒಂಟಿಮಹಿಳೆಯ ಕೊಲೆ ನಡೆಯಿತು. ಮಹಿಳೆಯ ತಲೆಗೆ ಬಡಿದು, ಎಲ್ಲವನ್ನೂ ಅಪಹರಿಸಿ, ಕತ್ತುಕುಯ್ದು ಹೋದದ್ದು ಥೇಟ್ `ದಂಡುಪಾಳ್ಯ~ ಚಿತ್ರದ ಶೈಲಿಯಲ್ಲೇ ಇದೆ ಎಂದು ಅಲ್ಲಿಗೆ ಜನರಿಗೆ ಖಾತ್ರಿಯಾಗಿತ್ತು. ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಕ್ಕೆ ತೆರಳಿ, ಗಲಾಟೆ ಮಾಡಿ ಪ್ರದರ್ಶನ ರದ್ದಾಗುವಂತೆ ಮಾಡಿದರು.<br /> <br /> ಒಂದು ಸಿನಿಮಾ ಪ್ರದರ್ಶನಕ್ಕೆ ಬಂದ ನಂತರ ಇಷ್ಟೊಂದು ಪ್ರಚೋದನಕಾರಿಯಾಗುತ್ತದೆ, ಅಪರಾಧ ಮನೋಭಾವನೆ ಇರುವವರಲ್ಲಿ ಕೆಟ್ಟಕೃತ್ಯ ಮಾಡುವಂತೆ ಪ್ರೇರೇಪಿಸುತ್ತದೆ ಎನ್ನುವ ಮುನ್ಹೊಳಹು ಸೆನ್ಸಾರ್ ಮಂಡಳಿಗೆ ಇರಬೇಕಾದ್ದು ಅಪೇಕ್ಷಣೀಯ.<br /> ಕೆಲವು ತಿಂಗಳ ಹಿಂದೆ ಚೆನ್ನೈ ಶಾಲೆಯೊಂದರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ. ತರಗತಿಯಲ್ಲಿ ಸರಿಯಾದ ಅಂಕ ಗಳಿಸದೆ ತಂಟೆ ಮಾಡುತ್ತಿದ್ದ ಬಾಲಕನೊಬ್ಬ ಗದರಿದ ಶಿಕ್ಷಕಿಗೆ ಚಾಕುವಿನಿಂದ ಇರಿದು ಕೊಂದು ಹಾಕಿದ.<br /> <br /> ವಿಚಾರಣೆಯ ವೇಳೆ ಆತ, ಅಗ್ನಿಪಥ್ ಚಿತ್ರದ ಪ್ರೇರಣೆಯಿಂದ ಆ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಸಿನಿಮಾಗಳಲ್ಲಿನ ಕತೆ ಎಂದರೆ ರಾಮನೂ ಇರುತ್ತಾನೆ. ರಾವಣನೂ ಇರುತ್ತಾನೆ. ಆದರೆ ನಿರೂಪಣೆಯಲ್ಲಿ ವಿಜೃಂಭಿಸುವ ಮೌಲ್ಯಗಳು ಪ್ರೇಕ್ಷಕನನ್ನು ರಾಮನತ್ತ ಒಲಿಯುವಂತೆ ಮಾಡುತ್ತವೆ. <br /> <br /> ನಿರ್ದೇಶಕನೇ ರಾವಣನ ಪರವಹಿಸಿ, ಸೀತೆಯನ್ನು ಅಪಹರಿಸಿದ್ದು ಕರೆಕ್ಟ್ ಎಂದು ಹೇಳಿದರೆ ಏನಾಗುತ್ತದೆ? ಸಮಾಜ ಗಬ್ಬೆದ್ದು ಹೋಗುತ್ತದೆ, ಅಡ್ಡದಾರಿಯನ್ನೇ ರಾಜಮಾರ್ಗ ಎಂದು ಹೇಳಿಕೊಂಡು ಓಡಾಡುತ್ತಿರುವ ಕೆಲ ಚಿತ್ರ ನಿರ್ಮಾಪಕರು ನಿರ್ದೇಶಕರುಗಳಿಂದಾಗಿ ರಾಜ್ಯದಲ್ಲಿ ಅಪರಾಧದ ಪಟ್ಟಿ ಸರ್ರನೆ ಏರುಮುಖವಾಗಿ ಬಿಟ್ಟಿದೆ.<br /> <br /> ಎಂಬತ್ತರ ದಶಕದಲ್ಲಿ ಚಿತ್ರಮಂದಿರಗಳನ್ನು ದರೋಡೆಕೋರರು, ಕಳ್ಳರು ತಮ್ಮ ಆವಾಸಸ್ಥಾನ ಮಾಡಿಕೊಂಡಿದ್ದರು. ಆಗ ಬೆಂಗಳೂರು ನಗರದಲ್ಲಿ ದರೋಡೆ, ಗೂಂಡಾಗಳ ಹಾವಳಿ ವಿಪರೀತವಾಗಿತ್ತು. ಮಧ್ಯರಾತ್ರಿ ಮನೆಗೆ ನುಗ್ಗಿ, ಬಾಗಿಲು ಮುರಿದು, ಕೊಲೆ ಮಾಡಿ ದೋಚಿ ಪರಾರಿಯಾಗುವ ಘಟನೆಗಳು ಹೆಚ್ಚಾಗಿದ್ದವು.<br /> <br /> ಪೊಲೀಸರ ತನಿಖೆಯಿಂದ ಬಹಿರಂಗವಾದ ಸಂಗತಿಯೇ ಅಚ್ಚರಿ ಹುಟ್ಟಿಸುವಂತಹದು. ದರೋಡೆಕೋರರು ತಾವು ದರೋಡೆ ಮಾಡಬೇಕಾದ ಮನೆಯನ್ನು ಮೊದಲೇ ಗುರುತಿಸಿಟ್ಟುಕೊಂಡಿರುತ್ತಾರೆ. <br /> <br /> ರಾತ್ರಿ 9.30ರ ಸಿನಿಮಾ (ಸೆಕೆಂಡ್ ಶೋ) ನೋಡಿ, ಮಧ್ಯರಾತ್ರಿಯವರೆಗೆ ಸಮಯ ಕಳೆಯುತ್ತಾರೆ. ರಾತ್ರಿ 12.30ಕ್ಕೆ ಸಿನಿಮಾ ಮುಗಿಯುತ್ತದೆ. ಕಳ್ಳರಿಗೆ ಪ್ರಶಸ್ತಕಾಲ. ಈ ಸ್ಕೆಚ್ ಬಹಿರಂಗಗೊಂಡ ನಂತರ ಪೊಲೀಸರು ಸೆಕೆಂಡ್ಶೋ ಪ್ರದರ್ಶನವನ್ನೇ ರದ್ದು ಮಾಡಲು ಆದೇಶಿಸಿದರು.<br /> <br /> ಅಮೆರಿಕದಲ್ಲಾದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಜಾಗತಿಕವಾಗಿ ಸಿನಿಮಾ ಒಂದೇ ರೀತಿಯ ಪ್ರಭಾವ ಬೀರುತ್ತದೆ. ಇಲ್ಲಿ ದಂಡುಪಾಳ್ಯ ಅಲ್ಲಿ `ಬ್ಯಾಟ್ಮ್ಯಾನ್~ ( ದಿ ಡಾರ್ಕ್ ನೈಟ್ ರೈಸಸ್). ಬ್ಯಾಟ್ಮ್ಯಾನ್ ಸರಣಿಯ ಜೋಕರ್ ಪಾತ್ರದಿಂದ ಪ್ರೇರಣೆಗೊಂಡ ಯುವಕನೊಬ್ಬ ಚಿತ್ರಮಂದಿರಕ್ಕೆ ತೆರಳಿ, ಬಂದೂಕಿನಿಂದ ಸತತವಾಗಿ ಗುಂಡುಹಾರಿಸಿ 12 ಪ್ರೇಕ್ಷಕರನ್ನು ಕೊಂದ ಘಟನೆಗೆ ಕಾರಣವೇನಿರಬಹುದು? ಅಲ್ಲಿನ ನಿರುದ್ಯೋಗಿ ಯುವಕರಿಗೆ ಸಿನಿಮಾ ಏನು ಕಲಿಸುತ್ತಿದೆ? ಸಿನಿಮಾದವರೇ ಇದಕ್ಕೆ ಉತ್ತರ ಕೊಡಬೇಕು.<br /> <br /> ಭೂಗತ ಜಗತ್ತಿನ ಜನರ ಉಪಟಳ ಹೆಚ್ಚಾಗಿದ್ದ ದಿನಗಳಲ್ಲಿ ಅಂತಹ ಹೆಸರುಗಳನ್ನೇ ಸಿನಿಮಾಗಳಿಗೆ ಇಟ್ಟು, ಅವರಂತಹವರನ್ನೇ ಹೀರೋಗಳನ್ನಾಗಿ ಮಾಡಿ, ಅಂಥವರ ದುಡ್ಡಿನಿಂದಲೇ ಸಿನಿಮಾ ಮಾಡುತ್ತಿದ್ದ ನಮ್ಮ ನಿರ್ಮಾಪಕರು, ಸಿನಿಮಾ ಉದ್ಯಮವನ್ನೇ ಭೂಗತಲೋಕದ ದಾದಾಗಳ ಕೈಗೆ ಒಪ್ಪಿಸಿಬಿಟ್ಟರು.<br /> <br /> ನಮ್ಮ ಮಹಾನ್ ನಟರೊಬ್ಬರು ಎಕೆ-47 ಬಂದೂಕು ಸರಬರಾಜು ವ್ಯವಹಾರದಲ್ಲಿ ತೊಡಗಿಸಿಕೊಂಡು, ಸಿಕ್ಕಿಬಿದ್ದದ್ದು ನಿಮಗೆಲ್ಲಾ ಗೊತ್ತೇ ಇದೆ. ನಟಿಯೊಬ್ಬಳು ಭೂಗತ ದಾದಾನೊಬ್ಬನ ಮಡದಿಯಾಗಿ ದೇಶಾಂತರ ಮಾಡಿ, ಹಗರಣಗಳಲ್ಲಿ ಸಿಕ್ಕಿಬಿದ್ದು ಈಗ ಜೈಲಿನಲ್ಲಿರುವುದು ಬೇರೆ ಕತೆ. <br /> <br /> ನಾವು ಸಿನಿಮಾಗಳ ಮೂಲಕ ಭಯೋತ್ಪಾದಕರನ್ನು, ಉಗ್ರಗಾಮಿಗಳನ್ನು, ನಕ್ಸಲರನ್ನು ಹೀರೋ ಮಾಡಿಟ್ಟಿದ್ದೇವೆ. ಇಂದಿನ ಯುವಕರಿಗೆ ಈ ಹೀರೋಗಳ ಜೀವನಶೈಲಿ ಅತ್ಯಾಕರ್ಷಕ ಎನ್ನಿಸುವಷ್ಟರಮಟ್ಟಿಗೆ ನಮ್ಮ ಕಥಾಶೈಲಿಯನ್ನು ಹಿಗ್ಗಿಸಿಟ್ಟಿದ್ದೇವೆ. ಚಿತ್ರರಂಗ ಮರೆತ ಜವಾಬ್ದಾರಿಯನ್ನು ನೆನಪಿಸುವುದು ಹೇಗೆ?</p>.<p> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>