<p><strong>ವಿಶ್ವ ವಾಣಿಜ್ಯ ಸಂಘಟನೆ ಆರಂಭ<br />ನವದೆಹಲಿ, ಜ. 1 (ಪಿಟಿಐ)– </strong>ಜಾಗತಿಕವಾಗಿ ಮುಕ್ತ ವ್ಯಾಪಾರ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯೊಡನೆ ‘ವಿಶ್ವ ವಾಣಿಜ್ಯ ಸಂಘಟನೆ’ (ಡಬ್ಲ್ಯುಟಿಒ) ನೂತನ ವರ್ಷದ ದಿನವಾದ ಇಂದು ಜಿನೀವಾದಲ್ಲಿ ಕಾರ್ಯಾರಂಭ ಮಾಡಿತು.</p>.<p>ಗ್ಯಾಟ್ನ (ಸುಂಕ ಮತ್ತು ವ್ಯಾಪಾರ ಕುರಿತ ಸಾಮಾನ್ಯ ಒಪ್ಪಂದ) ಸ್ಥಾನದಲ್ಲಿ ಜಾಗತಿಕ ವಾಣಿಜ್ಯ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲಿರುವ ಈ ಹೊಸ ಸಂಘಟನೆಗೆ ಭಾರತ ಸೇರಿದಂತೆ 85 ಸಂಸ್ಥಾಪಕ ದೇಶಗಳ ಬೆಂಬಲ ಲಭಿಸಿದೆ.</p>.<p><strong>ರೈಲು ಅಪಘಾತ: ಸತ್ತವರ ಪೈಕಿ ಕಾರ್ಮಿಕ ನಾಯಕ ಸುಂದರೇಶ್<br />ಬೆಂಗಳೂರು, ಜ. 1– </strong>ಯಲಹಂಕ ಬಳಿ ಶನಿವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮಡಿದ ಎಂಟು ಮಂದಿಯಲ್ಲಿ ರಾಜ್ಯ ಸಿಪಿಐ ಘಟಕದ ಪ್ರಮುಖ ನಾಯಕರಾದ ಬಿ.ಕೆ. ಸುಂದರೇಶ್ (38) ಅವರೂ ಸೇರಿದ್ದಾರೆ. ಗಾಯಗೊಂಡಿರುವವರು ಗುಣಮುಖರಾಗುತ್ತಿದ್ದಾರೆ.</p>.<p>ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಒಕ್ಕೂಟದ ಕಾರ್ಯದರ್ಶಿಯೂ ಆಗಿದ್ದ ಸುಂದರೇಶ್, ಮುಂಬೈನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಈ ನತದೃಷ್ಟ ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಪ್ರಾಣ ತೆತ್ತರು.</p>.<p><strong>ಆಂಧ್ರ: ರೂ. 2ಕ್ಕೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಉದ್ಘಾಟನೆ<br />ಹೈದರಾಬಾದ್, ಜ. 1 (ಪಿಟಿಐ)–</strong> ಇಲ್ಲಿನ ಬೃಹತ್ ಕೊಳೆಗೇರಿ ಪ್ರದೇಶವಾದ ಅಡ್ಡಗುಟ್ಟದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ಒದಗಿಸುವ ತಮ್ಮ ಯೋಜನೆಯನ್ನು ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವ ವಾಣಿಜ್ಯ ಸಂಘಟನೆ ಆರಂಭ<br />ನವದೆಹಲಿ, ಜ. 1 (ಪಿಟಿಐ)– </strong>ಜಾಗತಿಕವಾಗಿ ಮುಕ್ತ ವ್ಯಾಪಾರ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯೊಡನೆ ‘ವಿಶ್ವ ವಾಣಿಜ್ಯ ಸಂಘಟನೆ’ (ಡಬ್ಲ್ಯುಟಿಒ) ನೂತನ ವರ್ಷದ ದಿನವಾದ ಇಂದು ಜಿನೀವಾದಲ್ಲಿ ಕಾರ್ಯಾರಂಭ ಮಾಡಿತು.</p>.<p>ಗ್ಯಾಟ್ನ (ಸುಂಕ ಮತ್ತು ವ್ಯಾಪಾರ ಕುರಿತ ಸಾಮಾನ್ಯ ಒಪ್ಪಂದ) ಸ್ಥಾನದಲ್ಲಿ ಜಾಗತಿಕ ವಾಣಿಜ್ಯ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲಿರುವ ಈ ಹೊಸ ಸಂಘಟನೆಗೆ ಭಾರತ ಸೇರಿದಂತೆ 85 ಸಂಸ್ಥಾಪಕ ದೇಶಗಳ ಬೆಂಬಲ ಲಭಿಸಿದೆ.</p>.<p><strong>ರೈಲು ಅಪಘಾತ: ಸತ್ತವರ ಪೈಕಿ ಕಾರ್ಮಿಕ ನಾಯಕ ಸುಂದರೇಶ್<br />ಬೆಂಗಳೂರು, ಜ. 1– </strong>ಯಲಹಂಕ ಬಳಿ ಶನಿವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮಡಿದ ಎಂಟು ಮಂದಿಯಲ್ಲಿ ರಾಜ್ಯ ಸಿಪಿಐ ಘಟಕದ ಪ್ರಮುಖ ನಾಯಕರಾದ ಬಿ.ಕೆ. ಸುಂದರೇಶ್ (38) ಅವರೂ ಸೇರಿದ್ದಾರೆ. ಗಾಯಗೊಂಡಿರುವವರು ಗುಣಮುಖರಾಗುತ್ತಿದ್ದಾರೆ.</p>.<p>ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಒಕ್ಕೂಟದ ಕಾರ್ಯದರ್ಶಿಯೂ ಆಗಿದ್ದ ಸುಂದರೇಶ್, ಮುಂಬೈನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಈ ನತದೃಷ್ಟ ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಪ್ರಾಣ ತೆತ್ತರು.</p>.<p><strong>ಆಂಧ್ರ: ರೂ. 2ಕ್ಕೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಉದ್ಘಾಟನೆ<br />ಹೈದರಾಬಾದ್, ಜ. 1 (ಪಿಟಿಐ)–</strong> ಇಲ್ಲಿನ ಬೃಹತ್ ಕೊಳೆಗೇರಿ ಪ್ರದೇಶವಾದ ಅಡ್ಡಗುಟ್ಟದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ಒದಗಿಸುವ ತಮ್ಮ ಯೋಜನೆಯನ್ನು ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>