ಆಂಧ್ರ: ರೂ. 2ಕ್ಕೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಉದ್ಘಾಟನೆ
ಹೈದರಾಬಾದ್, ಜ. 1 (ಪಿಟಿಐ)– ಇಲ್ಲಿನ ಬೃಹತ್ ಕೊಳೆಗೇರಿ ಪ್ರದೇಶವಾದ ಅಡ್ಡಗುಟ್ಟದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ಒದಗಿಸುವ ತಮ್ಮ ಯೋಜನೆಯನ್ನು ಉದ್ಘಾಟಿಸಿದರು.