<p><strong>ಚಂದ್ರಾಸ್ವಾಮಿ ಬಂಧನ ಇಲ್ಲ</strong></p>.<p>ನವದೆಹಲಿ, ಸೆ. 17 (ಪಿಟಿಐ, ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಾಸ್ವಾಮಿಯನ್ನು ತಕ್ಷಣಕ್ಕೆ ಬಂಧಿಸುವ ಸಂಭವವಿಲ್ಲ ಎಂದು ಉನ್ನತ ಮೂಲಗಳು ಇಂದು ರಾತ್ರಿ ತಿಳಿಸಿವೆ.</p>.<p>ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತಿತರ ಅಪರಾಧಿಗಳ ಜೊತೆ ಚಂದ್ರಾಸ್ವಾಮಿ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.</p>.<p>ತಾವು ರಾಜಕಾರಣಿಗಳಿಂದ ಕೆಲಸ ಮಾಡಿಸಿಕೊಡುವ ಏಜೆಂಟ್ ಅಲ್ಲ. ಪಿ.ವಿ. ನರಸಿಂಹ ರಾವ್ ಅವರಂತಹ ಗಣ್ಯರು ‘ಆಧ್ಯಾತ್ಮಿಕ’ ಕಾರಣಗಳಿಗಾಗಿ ತಮ್ಮ ಬಳಿ ಬರುತ್ತಾರೆ ಎಂದು ಚಂದ್ರಾಸ್ವಾಮಿ ಹೇಳಿದ್ದಾರೆ.</p>.<p>ತಾವು ‘ಮಂತ್ರವಾದಿ’ ಅಲ್ಲ. ಬದಲಾಗಿ ಮಂತ್ರ, ಯಂತ್ರ ಹಾಗೂ ತಂತ್ರಗಳ ‘ಉಪಾಸಕ’ ಎಂದು ವಾರ್ತಾಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಧುನಿಕ ಯುಗದ ಈ ಜೆಟ್ ಸಂಚಾರಿ ಸ್ವಾಮಿ ಸ್ಪಷ್ಟಪಡಿಸಿದರು.</p>.<p><strong>ವಾಸುದೇವನ್ಗೆ ಬೆಂಬಲ ಪ್ರಶ್ನೆ: ಐಎಎಸ್ ಅಧಿಕಾರಿ ಸಂಘದಲ್ಲಿ ಒಡಕು</strong></p>.<p>ಬೆಂಗಳೂರು, ಸೆ. 17– ನ್ಯಾಯಾಲಯ ನಿಂದನೆಗಾಗಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸುವ ವಿಷಯದಲ್ಲಿ ರಾಜ್ಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಒಡಕು ಉಂಟಾಗಿದೆ.</p>.<p>ಸಂಘ ಕೈಗೊಂಡ ತೀರ್ಮಾನವನ್ನು ಧಿಕ್ಕರಿಸಿ 80ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ವಾಸುದೇವನ್ ಅವರಿಗೆ ಬೆಂಬಲ ಸೂಚಿಸಿ ಇಂದು ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಸಿಸಿಲ್ ನರೋನ್ಹ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳು ಧರಣಿಯಲ್ಲಿ ಭಾಗವಹಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂದ್ರಾಸ್ವಾಮಿ ಬಂಧನ ಇಲ್ಲ</strong></p>.<p>ನವದೆಹಲಿ, ಸೆ. 17 (ಪಿಟಿಐ, ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಾಸ್ವಾಮಿಯನ್ನು ತಕ್ಷಣಕ್ಕೆ ಬಂಧಿಸುವ ಸಂಭವವಿಲ್ಲ ಎಂದು ಉನ್ನತ ಮೂಲಗಳು ಇಂದು ರಾತ್ರಿ ತಿಳಿಸಿವೆ.</p>.<p>ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತಿತರ ಅಪರಾಧಿಗಳ ಜೊತೆ ಚಂದ್ರಾಸ್ವಾಮಿ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.</p>.<p>ತಾವು ರಾಜಕಾರಣಿಗಳಿಂದ ಕೆಲಸ ಮಾಡಿಸಿಕೊಡುವ ಏಜೆಂಟ್ ಅಲ್ಲ. ಪಿ.ವಿ. ನರಸಿಂಹ ರಾವ್ ಅವರಂತಹ ಗಣ್ಯರು ‘ಆಧ್ಯಾತ್ಮಿಕ’ ಕಾರಣಗಳಿಗಾಗಿ ತಮ್ಮ ಬಳಿ ಬರುತ್ತಾರೆ ಎಂದು ಚಂದ್ರಾಸ್ವಾಮಿ ಹೇಳಿದ್ದಾರೆ.</p>.<p>ತಾವು ‘ಮಂತ್ರವಾದಿ’ ಅಲ್ಲ. ಬದಲಾಗಿ ಮಂತ್ರ, ಯಂತ್ರ ಹಾಗೂ ತಂತ್ರಗಳ ‘ಉಪಾಸಕ’ ಎಂದು ವಾರ್ತಾಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಧುನಿಕ ಯುಗದ ಈ ಜೆಟ್ ಸಂಚಾರಿ ಸ್ವಾಮಿ ಸ್ಪಷ್ಟಪಡಿಸಿದರು.</p>.<p><strong>ವಾಸುದೇವನ್ಗೆ ಬೆಂಬಲ ಪ್ರಶ್ನೆ: ಐಎಎಸ್ ಅಧಿಕಾರಿ ಸಂಘದಲ್ಲಿ ಒಡಕು</strong></p>.<p>ಬೆಂಗಳೂರು, ಸೆ. 17– ನ್ಯಾಯಾಲಯ ನಿಂದನೆಗಾಗಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸುವ ವಿಷಯದಲ್ಲಿ ರಾಜ್ಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಒಡಕು ಉಂಟಾಗಿದೆ.</p>.<p>ಸಂಘ ಕೈಗೊಂಡ ತೀರ್ಮಾನವನ್ನು ಧಿಕ್ಕರಿಸಿ 80ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ವಾಸುದೇವನ್ ಅವರಿಗೆ ಬೆಂಬಲ ಸೂಚಿಸಿ ಇಂದು ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಸಿಸಿಲ್ ನರೋನ್ಹ ಸೇರಿದಂತೆ ಕೆಲವು ಹಿರಿಯ ಅಧಿಕಾರಿಗಳು ಧರಣಿಯಲ್ಲಿ ಭಾಗವಹಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>