ರಾಯಚೂರು, ಆ. 2– ಮೀಸಲು ಪ್ರಮಾಣವನ್ನು ಶೇ 80ಕ್ಕೆ ಏರಿಸುವ ತನ್ನ ನಿರ್ಧಾರವನ್ನು ಜಾರಿಗೆ ತರುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟಿಗೆ ವಾಗ್ದಾನ ನೀಡಿದೆ ಎಂಬ ಸುದ್ದಿಯ ಬಗ್ಗೆ ಅಚ್ಚರಿ ಹಾಗೂ ದಿಗ್ಭ್ರಮೆಯನ್ನು ವೀರಪ್ಪ ಮೊಯಿಲಿ ಸಂಪುಟದ ಹಿರಿಯ ಸಹೋದ್ಯೋಗಿಯೂ ಆಗಿರುವ ಲೋಕೋಪಯೋಗಿ ಖಾತೆಯ ಸಚಿವ ಕೆ.ಎಚ್. ರಂಗನಾಥ್ ಇಂದು ಇಲ್ಲಿ
ವ್ಯಕ್ತಪಡಿಸಿದರು.