ಇಂದು ಇಲ್ಲಿ ಚುನಾವಣಾ ಪ್ರಚಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ‘ಆರ್ಥಿಕ ದೈತ್ಯ’ನಾಗಿ ಬೆಳೆಯಬೇಕಾದರೆ ಶಾಂತಿ ಮತ್ತು ಸ್ಥಿರತೆ ಅಗತ್ಯವೆಂದು ಹೇಳಿದರು. ಮಂಡಲ್ ವರದಿಯ ವಿಷಯಕ್ಕೆ ವಿ.ಪಿ. ಸಿಂಗ್ ಅವರು ದೇಶದಾದ್ಯಂತ ಬೆಂಕಿ ಹೊತ್ತಿಸಿದರೆ, ಬಿಜೆಪಿಯು ಮಸೀದಿ–ಮಂದಿರದ ವಿಷಯಕ್ಕೆ ದೇಶವನ್ನು ಛಿದ್ರಗೊಳಿಸಿತು ಎಂದು ಟೀಕಿಸಿದರು.