<blockquote><em>ಸಂವಿಧಾನದ ಅಂತರ್ಜಲವಾದ ಸಾಮಾಜಿಕ ನ್ಯಾಯದ ಮೇಲೆ ಮುಸುಕಿನ ದಾಳಿಗಳ ಸರಣಿಯೇ ನಡೆದಿದೆ. ಈ ದಾಳಿಗಳ ಮುಂದುವರಿಕೆಯ ರೂಪದಲ್ಲಿ ಯುಜಿಸಿಯ ಇತ್ತೀಚಿನ ನಿಯಮಗಳ ಕುರಿತ ವಿವಾದವನ್ನು ಗಮನಿಸಬೇಕು. ಈ ವಿವಾದ ರಾಜಕೀಯ ಪ್ರಹಸನದಂತೆಯೂ ರಂಜಕವಾಗಿಯೂ ಕಾಣಿಸುತ್ತಿದೆ.</em></blockquote>.<p>ಯುಜಿಸಿ ಇತ್ತೀಚೆಗೆ ರೂಪಿಸಿರುವ ನಿಯಮ ಗಳ ಕುರಿತು ಉಂಟಾಗಿರುವ ವಿವಾದವು ಉನ್ನತ ಶಿಕ್ಷಣದಲ್ಲಿ ಸಮಾನತೆಯ ಕುರಿತ ಚರ್ಚೆ ಅಲ್ಲ. ಇದು ನಿಜ ಜೀವನದ ಮೇಲೆ ಪರಿಣಾಮ ಉಂಟು ಮಾಡಬಲ್ಲ ರಾಜಕೀಯ ಪ್ರಹಸನವಾಗಿದೆ. ಈ ನಾಟಕದ ಪ್ರತಿ ದೃಶ್ಯದಲ್ಲಿಯೂ ಆರಂಭದಿಂದ ಕೊನೆಯವರೆಗೆ ಸಿನಿಕತನದ ದುರ್ವಾಸನೆ ರಾಚುತ್ತಿದೆ. ಮೊದಲಿಗೆ ಪಾತ್ರದ ಅದಲು ಬದಲು ನಡೆಯಿತು. ಸಾಮಾಜಿಕ ನ್ಯಾಯದ ಕುರಿತು ಅಸಡ್ಡೆ ಹೊಂದಿರುವ ಆಡಳಿತ ವ್ಯವಸ್ಥೆಯು ತಾರತಮ್ಯ ವಿರೋಧಿ ಕ್ರಮವನ್ನುಮುಂದೊಡ್ಡಿತು. ನಂತರ ಭಿನ್ನಮತವನ್ನು ಸೃಷ್ಟಿಸಲಾಯಿತು. ಬಳಿಕ, ನಿಷ್ಠಾವಂತರು ತಮ್ಮದೇ ಸರ್ಕಾರದ ವಿರುದ್ಧ ಬೀದಿಗಿಳಿದರು. ಇಲ್ಲಿ ಸಂತ್ರಸ್ತತೆ ತಲೆಕೆಳಗಾದ ರೀತಿಯಲ್ಲಿ ವ್ಯಕ್ತವಾಯಿತು. ಪ್ರಬಲರು ತಮಗೆ ಕಿರುಕುಳ ಉಂಟಾಗುತ್ತಿದೆ ಎಂದು ಹೇಳಿ ಕೊಂಡರು. ಕೊನೆಯಲ್ಲಿ, ಜಾಣಮರೆವಿನ ತಂತ್ರ ಪ್ರಯೋಗವೂ ಆಯಿತು. ಇಂತಹ ನಿಯಮಗಳನ್ನು ರೂಪಿಸಬೇಕು ಎಂದು ನಿರ್ದೇಶನ ನೀಡಿದ್ದ ಅದೇ ನ್ಯಾಯಪೀಠವು ನಿಯಮಗಳ ಕುರಿತು ಭಾರೀ ಅಸಮಾಧಾನ ವ್ಯಕ್ತಪಡಿಸಿ, ತಡೆ ನೀಡಿತು.ಸಂವಿಧಾನದಲ್ಲಿ ಬರೆಯಲಾಗಿರುವ ನಾಜೂಕಾದ ಸಾಮಾಜಿಕ ಕರಾರು ಧ್ವಂಸಗೊಳ್ಳುವ ಎಚ್ಚರಿಕೆಯನ್ನು ಇದು ನೀಡಿಲ್ಲ ಎಂದಾದರೆ, ಪ್ರತಿ ಹಂತವೂ ಕುತೂಹಲ ಕಾರಿಯೂ ಮನರಂಜನಾತ್ಮಕವೂ ಆಗಿತ್ತು. </p><p>ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಾಮಾಜಿಕ ತಾರತಮ್ಯ ಇದೆ ಅಥವಾ ಇಲ್ಲ ಎಂಬುದರ ಕುರಿತು ಅಲ್ಲ ಈ ವಿವಾದ. ಈ ಬಗ್ಗೆ ನಮಗೆ ಸಂದೇಹವೇನೂ ಬೇಡ. ಎನ್. ಸುಕುಮಾರ್ ಅವರ ಇತ್ತೀಚಿನ ಪುಸ್ತಕ ‘ಕಾಸ್ಟ್ ಡಿಸ್ಕ್ರಿಮಿನೇಷನ್ ಆ್ಯಂಡ್ ಎಕ್ಸ್ಕ್ಲೂಷನ್ ಇನ್ ಇಂಡಿಯನ್ ಯುನಿವರ್ಸಿಟೀಸ್: ಎ ಕ್ರಿಟಿಕಲ್ ರಿಫ್ಲೆಕ್ಷನ್’ (ರೂಟ್ಲೆಜ್, 2023) ಈ ಕುರಿತು ನಿಮ್ಮ ಎಲ್ಲ ಅನುಮಾನಗಳನ್ನು ಪರಿಹರಿಸು ತ್ತದೆ. ಈ ವಿಚಾರದ ಕುರಿತು ತಮಗೆ ಇದ್ದ ಅರಿವು ಮತ್ತು ಸಮೀಕ್ಷೆಗಳಿಂದ ಪಡೆದ ಮಾಹಿತಿ, ವ್ಯಕ್ತಿಗತ ಅನುಭವಗಳು ಮತ್ತು ಸಾಂಸ್ಥಿಕ ವಿಶ್ಲೇಷಣೆಗಳ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಜಾತಿ ತಾರತಮ್ಯವು ವ್ಯವಸ್ಥಿತವಾಗಿದೆ ಎಂಬುದನ್ನು ಅವರು ವಿವರಿಸುತ್ತಾರೆ. ಜಾತಿ ಬಂಡವಾಳವು ಆಧುನಿಕ ಬಂಡವಾಳವಾಗಿ ಪರಿವರ್ತನೆ ಆಗಿರುವುದರ ಕುರಿತು ಸತೀಶ್ ದೇಶಪಾಂಡೆ ಅವರ ಸಿದ್ಧಾಂತವನ್ನು ಸುಕುಮಾರ್ ಅವರು ‘ಸಾಮಾಜಿಕ ವಿಶ್ವವಿಜ್ಞಾನ’ ಎಂದು ಅಭಿವೃದ್ಧಿಪಡಿಸಿದ್ದಾರೆ. ಸಾಮಾಜಿಕ ವಿಶ್ವವಿಜ್ಞಾನ ಎಂದರೆ, ಚಾರಿತ್ರಿಕವಾಗಿ ಜಾತಿಗೆ ಇರುವ ವಿಶೇಷ ಹಕ್ಕು ಮತ್ತು ಸಾಂಸ್ಕೃತಿಕ ಬಂಡವಾಳವನ್ನು ವ್ಯಕ್ತಿಗತ ಬೌದ್ಧಿಕ ಸಾಧನೆಯಾಗಿ ಬಿಂಬಿಸುವ ಪ್ರತಿಭೆಯ ಜಾತಿ ಆಧಾರಿತ ಸಿದ್ಧಾಂತ.</p><p>ಕೆಲವು ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಕರೆಯುವ ಹೆಸರು ಗಳನ್ನು ಗಮನಿಸಿದರೆ ಅವಮಾನದಿಂದ ತಲೆತಗ್ಗಿಸು ವಂತಾಗುತ್ತದೆ. ಆ ಹೆಸರುಗಳೆಂದರೆ, ‘ಮೀಸಲು ಮಕ್ಕಳು’, ‘ಕೆಟಗರಿ ಮಕ್ಕಳು’, ‘ಸರ್ಕಾರಿ ಬ್ರಾಹ್ಮಣ’ ಇತ್ಯಾದಿ ಮತ್ತು ಜಾತಿ ಬೈಗುಳಗಳನ್ನು ಮುದ್ರಿಸಲು ಸಾಧ್ಯವಿಲ್ಲ. ಪ್ರವೇಶ, ಮೇಲ್ವಿಚಾರಣೆ, ಹಾಸ್ಟೆಲ್ ಜೀವನ, ದೈನಂದಿನ ಆಡಳಿತ ಮತ್ತು ಶಿಸ್ತುಕ್ರಮದಲ್ಲಿ ಜಾತಿ ಪೂರ್ವಗ್ರಹ ವ್ಯಾಪಿಸಿದೆ. 10 ವಿ.ವಿಗಳ ಪರಿಶಿಷ್ಟ ಜಾತಿಗೆ ಸೇರಿದ 600 ವಿದ್ಯಾರ್ಥಿಗಳ ಸಂದರ್ಶನವನ್ನು ಸುಕುಮಾರ್ ನಡೆಸಿದ್ದಾರೆ; ಅವರಲ್ಲಿ ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಮೌಖಿಕ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ತಾರತಮ್ಯ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಿಕ್ಷಕರಿಂದಲೇ ತಾರತಮ್ಯ ಉಂಟಾಗುತ್ತಿದೆ ಎಂದು ಶೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಮೇಲ್ವಿಚಾರಣೆಯಲ್ಲಿಯೂ ಶೋಷಣೆಗೆ ಒಳಗಾಗಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿಕೊಂಡಿ ದ್ದಾರೆ. ಈ ಪುಸ್ತಕದಲ್ಲಿ ಗುರುತಿಸಿರುವ ತಾರತಮ್ಯವು ಒಬಿಸಿಯಂತಹ ಇತರ ವರ್ಗಗಳಲ್ಲಿ ಹೇಗೆ ಕಾಣಿಸಿಕೊಂಡಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಆದರೆ, ವಿ.ವಿಗಳು ಪ್ರಜಾಸತ್ತಾತ್ಮಕ ಅವಕಾಶಗಳನ್ನು ಒದಗಿಸುವ ಬದಲು ಬಹಿಷ್ಕಾರಕಾರಿ ಅನುಭವ ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ ಎಂಬ ಕ್ರೂರ ಸತ್ಯವನ್ನು ನೀವು ಪ್ರಶ್ನಿಸಲು ಸಾಧ್ಯವಿಲ್ಲ. </p><p>ಈ ರೋಗಕ್ಕೆ ಮದ್ದೇನು ಎಂಬುದರ ಕುರಿತು ಈ ಚರ್ಚೆ ಅಲ್ಲ ಎಂಬುದನ್ನು ನಾವು ನೆನಪಿಡಬೇಕು. ಈ ಸವಾಲನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಇಚ್ಛೆ ಎರಡೂ ಕಡೆಗಳಲ್ಲಿಯೂ ಕಾಣಿಸುವುದಿಲ್ಲ. 2012ರಲ್ಲಿ ಮೂಲ ನಿಯಮಗಳನ್ನು ರೂಪಿಸಿದ ಸಮಿತಿಯಲ್ಲಿ ನಾನು ಯುಜಿಸಿ ಸದಸ್ಯ ಎಂಬ ನೆಲೆಯಲ್ಲಿ ಭಾಗಿಯಾಗಿದ್ದೆ ಮತ್ತು ಸಾಂಸ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಇನ್ನೂ ಬಹಳಷ್ಟು ಅದರಲ್ಲಿ ಇರಬೇಕಿತ್ತು ಎಂಬುದನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಏನೂ ಇಲ್ಲ. ಈ ವಿಚಾರದಲ್ಲಿ 2026ರ ನಿಯಮಗಳು ಖಂಡಿತವಾಗಿಯೂ ಉತ್ತಮ ಗೊಂಡಿವೆ. ಅದೇ ಹೊತ್ತಿಗೆ, ತಾರತಮ್ಯ ಎಂದರೆ ಏನು ಎಂಬ ಪರಿಕಲ್ಪನೆಯನ್ನು ಹೊಸ ನಿಯಮಗಳು (ಕಿರುಕುಳ, ಸಂತ್ರಸ್ತಭಾವನೆ ಮೂಡಿಸುವುದು ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು) ನಿಸ್ಸಾರಗೊಳಿಸಿವೆ; ಹಾಗೆಯೇ ಮೂಲ ನಿಯಮಗಳಲ್ಲಿ ಇದ್ದ ತಾರತಮ್ಯದ ಉದಾಹರಣೆಸಹಿತ ಪಟ್ಟಿಯನ್ನು ಕೈಬಿಡಲಾಗಿದೆ. </p><p>ವಾಸ್ತವದಲ್ಲಿ ಇವುಗಳಿಂದ ಅಂತಹ ಅನುಕೂಲ ವೇನೂ ಇಲ್ಲ. ಯಾವುದೇ ನಿಯಮದಲ್ಲಿನ ಪದಬಳಕೆ ಹೇಗಿದೆ ಎಂಬುದು ನಿಜವಾದ ಸಮಸ್ಯೆ ಅಲ್ಲವೇ ಅಲ್ಲ; ಬದಲಿಗೆ ಇಂತಹ ಯಾವುದೇ ನಿಯಮದ ಅನುಷ್ಠಾನಕ್ಕೆ ಇರುವ ಇಚ್ಛೆಯ ಕೊರತೆಯೇ ನಿಜವಾದ ಸಮಸ್ಯೆ ಎಂಬುದು ವಿ.ವಿ ವ್ಯವಸ್ಥೆ ಬಲ್ಲ ಎಲ್ಲರಿಗೂ ತಿಳಿದಿದೆ. ಯುಜಿಸಿಯ 2012ರ ನಿಯಮಗಳು ಕಾಗದದಲ್ಲಷ್ಟೇ ಉಳಿದಿದ್ದವು. ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಗೊತ್ತಿರಲಿಲ್ಲ ಮತ್ತು ಅಧಿಕಾರಿಗಳು ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. 2026ರ ನಿಯಮಗಳ ಪರಿಸ್ಥಿತಿಯು ಅದಕ್ಕಿಂತ ಭಿನ್ನವೇನೂ ಆಗುವುದಿಲ್ಲ. ಈ ಬಾರಿ ಸಿಕ್ಕ ಭಾರೀ ಪ್ರಚಾರದಿಂದಾಗಿ ಮುಂದೆ ಸಂತ್ರಸ್ತರಲ್ಲಿ ಕೆಲವರಾದರೂ ತಾರತಮ್ಯ ತಡೆಯ ಹಳೆಯ ನಿಯಮಗಳನ್ನು ಬಳಸಬಹುದು</p><p>ಇದು ಕಾನೂನಿಗೆ ಸಂಬಂಧಿಸಿದ ವಿವಾದ ಅಲ್ಲ ಮತ್ತು ಆಗಿರಬೇಕಾಗಿಯೂ ಇಲ್ಲ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಈ ಹಿಂದಿನ ಮತ್ತು ಹೊಸ ನಿಯಮಗಳಲ್ಲಿರುವ ತಾರತಮ್ಯ ತಡೆ ಅಂಶಗಳೆಲ್ಲವನ್ನೂ ನೇರವಾಗಿ ಸಂವಿಧಾನದಿಂದ ಪಡೆದುಕೊಳ್ಳ ಲಾಗಿದೆ. ‘ಜಾತಿ, ಮತ, ಜನಾಂಗ, ಧರ್ಮ, ಭಾಷೆ, ಲಿಂಗ ಅಥವಾ ಅಂಗವೈಕಲ್ಯ’ದ ಆಧಾರದಲ್ಲಿ ತಾರತಮ್ಯದಿಂದ ರಕ್ಷಣೆ ಕೊಡುವ ಉದ್ದೇಶವನ್ನು ಎರಡೂ ನಿಯಮಗಳು ಹೊಂದಿವೆ; ಜಾತಿ ತಾರತಮ್ಯ ತಡೆಗೆ ಮಹತ್ವ ನೀಡಿವೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ತಾರತಮ್ಯಕ್ಕೆ ಒಳಗಾಗುವ ಹೆಚ್ಚಿನ ಅಪಾಯ ಇದೆ ಎಂದು ನಿರ್ದಿಷ್ಟವಾಗಿ ಹೇಳಿವೆ (ಹೊಸ ನಿಯಮಗಳಲ್ಲಿ ಒಬಿಸಿಯನ್ನೂ ಸೇರಿಸಿ ಕೊಳ್ಳಲಾಗಿದೆ). ಜಾತಿ ತಾರತಮ್ಯಕ್ಕೆ ಒಳಗಾಗಿದ್ದೇವೆ ಎಂದು ದೂರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಗಳಾದ ರೋಹಿತ್ ವೇಮುಲ ಮತ್ತು ಪಾಯಲ್ ತಾಡ್ವಿ ಅವರ ತಾಯಂದಿರು ಸಲ್ಲಿಸಿರುವ ಅರ್ಜಿಯ ಆಧಾರ ದಲ್ಲಿ ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ಸ್ಪಷ್ಟ ಆದೇಶದಿಂದ ಯುಜಿಸಿ ಈಗಿನ ಪರಿಷ್ಕರಣೆ ನಡೆಸಿದೆ. </p><p>ಹಾಗೆ ನೋಡಿದರೆ, ನ್ಯಾಯಮೂರ್ತಿ (ಈಗಿನ ಮುಖ್ಯ ನ್ಯಾಯಮೂರ್ತಿ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲಾ ಬಾಗ್ಚಿ ಅವರ ಪೀಠವು ‘ದೂರು ಪರಿಹಾರ ಸಮಿತಿ’ಯೊಂದನ್ನು ರೂಪಿಸಬೇಕು ಎಂದು 2025ರ ಸೆ. 15ರಂದು ಆದೇಶ ನೀಡಿತ್ತು. ಸಮಿತಿಯಲ್ಲಿ ಶೇ 50ರಷ್ಟು ಸದಸ್ಯರು ಎಸ್ಸಿ/ಎಸ್ಟಿ ಅಥವಾ ಒಬಿಸಿ ಸಮುದಾಯ ದವರಾಗಿಬೇಕು, ಅಧ್ಯಕ್ಷರು ಇದೇ ಸಮುದಾಯ ದವರು ಆಗಿರಬೇಕು ಎಂದೂ ಹೇಳಿತ್ತು. ನಾಲ್ಕು ತಿಂಗಳ ಬಳಿಕ ಅದೇ ಪೀಠವು ವ್ಯಕ್ತಪಡಿಸಿದ ದಿಗಿಲು ವಿಚಿತ್ರ ಅನ್ನಿಸುತ್ತದೆ. ಸಾಮಾನ್ಯ ವರ್ಗದವರ ವಿರುದ್ಧವಾದುದು ಅಥವಾ ಕ್ರೂರವಾದುದು ಹೊಸ ನಿಯಮ ದಲ್ಲಿ ಎಳ್ಳಷ್ಟೂ ಇರಲಿಲ್ಲ. ಗೌತಮ್ ಭಾಟಿಯಾ ಅವರು ಗುರುತಿಸಿರುವಂತೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬಹುಕಾಲದಿಂದ ಹೊಂದಿದ್ದ ನಿಲುವಿಗೆ ಅನುಗುಣವಾಗಿ ಈಗಿನ ತಡೆ ಆದೇಶ ಇಲ್ಲ. </p><p>ಇದೊಂದು ರಾಜಕೀಯ ಸಂಘರ್ಷ ಮತ್ತು ಅದನ್ನು ನಾವು ಎದುರಿಸೋಣ. ಒಂದು ಕಾಲದಲ್ಲಿ ಸಾಮಾಜಿಕ, ಸೈದ್ಧಾಂತಿಕ ಮತ್ತು ರಾಜಕೀಯ ಎನಿಸಿದ್ದ ವಿಚಾರ ಇದು; ಅನುಷ್ಠಾನದ ಸಾಧ್ಯತೆ ಇಲ್ಲದ ನಿಯಮದ ಕುರಿತ ಪ್ರಹಸನದಂತಹ ವಿವಾದದ ಹಿಂದೆ ನಾವು ಅಡಗಿಕೊಳ್ಳುವುದೇ ಇಲ್ಲಿನ ಮುಖ್ಯ ತೊಡಕು. ತನ್ನ ಮುಖ್ಯ ಮತಬ್ಯಾಂಕ್ ‘ಪ್ರಬಲ ಜಾತಿ’ ಹಿಂದೂಗಳ ಜೊತೆಗೆ ಹಿಂದೂ ಸಮಾಜದ ಇತರ ಜಾತಿಗಳ ನಡುವೆಯೂ ಪ್ರವೇಶಿಸಿ ಗೆಲುವಿನ ಸಾಮಾಜಿಕ ಸಮೀಕರಣವೊಂದನ್ನು ಬಿಜೆಪಿ ಕಟ್ಟಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ, ಹಿಂದೂ ಸಮಾಜದ ‘ದುರ್ಬಲ’ ಜಾತಿಗಳ ‘ಜಾತಿ ಗಣತಿ’ಯೂ ಸೇರಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ಬೇಕಾದುದನ್ನು ಮಾಡಬೇಕಿದೆ. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಕೊಡಬೇಕಾದ ಬೆಲೆ ಎಂಬ ಕಾರಣಕ್ಕೆ ಬಿಜೆಪಿಯ ಮುಖ್ಯ ಮತಬ್ಯಾಂಕ್ ಈ ಎಲ್ಲ ರಿಯಾಯಿತಿಗಳನ್ನು ಈವರೆಗೆ ಸಹಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಪ್ರಾಬಲ್ಯ ಮತ್ತು ಸೈದ್ಧಾಂತಿಕ ಅಭಿಯಾನವು ಇಂತಹ ರಿಯಾಯಿತಿ ಇನ್ನು ಅಗತ್ಯ ಇಲ್ಲ ಎಂದು ‘ಪ್ರಬಲ ಜಾತಿ’ಗಳ ಮುಖ್ಯ ಮತಬ್ಯಾಂಕ್ ನಂಬುವಂತೆ ಮಾಡಿದೆ. ಏನೇ ಆದರೂ ಒಬಿಸಿ ಸಮುದಾಯಗಳವರು ತಾವು ಎಲ್ಲಿ ರೇಖೆ ಎಳೆಯು ತ್ತಾರೋ ಅಲ್ಲಿ ನಿಲ್ಲುತ್ತಾರೆ. ಬಿಜೆಪಿ ಮುಚ್ಚಿ ಇರಿಸಲು ಬಯಸುತ್ತಿದ್ದ ಬಿರುಕು ಈಗ ಬಯಲಾಗುತ್ತದೆ.</p><p>ಈ ಕುರಿತು ನಾವು ಸಂದೇಹಪಡುವುದೇನೂ ಬೇಡ: ಸಂವಿಧಾನದ ಚಿಂತನೆಯಾದ ಸಾಮಾಜಿಕ ನ್ಯಾಯದ ಮೇಲೆ ತೆಳುವಾಗಿ ಮರೆಮಾಚಿ ದಾಳಿ ನಡೆಸಿರುವುದನ್ನು ನೋಡಿದ್ದೇವೆ. ಯುಜಿಸಿಯ ಸಮಾನತೆ ನಿಯಮಗಳು ಉದಾಹರಣೆಯಷ್ಟೆ. ಇಡೀ ಮೀಸಲಾತಿ ವ್ಯವಸ್ಥೆಯೇ ಅವರ ಗುರಿ. ಒಬಿಸಿಯು ಮುಂಚೂಣಿಗೆ ಬಂದಿರುವುದು ನಿಜವಾದ ಅಸಡ್ಡೆ ಸೃಷ್ಟಿ ಮಾಡಿದೆ. ಜಾತಿ ಗಣತಿ ತಕ್ಷಣದ ಸುಳಿವಾಗಿದೆ. ಇದು ಅಧಿಕಾರಕ್ಕಾಗಿ ಹೊಸದಾಗಿ ಆರಂಭ ಗೊಂಡ ಸಾಮಾಜಿಕ ಸಂಘರ್ಷ. ಪಿರಮಿಡ್ನ ಮೇಲ್ಭಾಗ ದಲ್ಲಿರುವವರು ತಮ್ಮ ಇರುವನ್ನು ಬಲವಾಗಿ ಘೋಷಿಸಿಕೊಂಡಿದ್ದಾರೆ. ಸಾಮಾಜಿಕ ಪಿರಮಿಡ್ನ ತಳದಲ್ಲಿ ಇರುವವರು ಈಗ ಸ್ಪಂದಿಸಬೇಕಿದೆ. ಈ ಸಂಘರ್ಷವು ನಮ್ಮ ಗಣರಾಜ್ಯದ ವಿಧಿಯನ್ನು ನಿರ್ಣಯಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಸಂವಿಧಾನದ ಅಂತರ್ಜಲವಾದ ಸಾಮಾಜಿಕ ನ್ಯಾಯದ ಮೇಲೆ ಮುಸುಕಿನ ದಾಳಿಗಳ ಸರಣಿಯೇ ನಡೆದಿದೆ. ಈ ದಾಳಿಗಳ ಮುಂದುವರಿಕೆಯ ರೂಪದಲ್ಲಿ ಯುಜಿಸಿಯ ಇತ್ತೀಚಿನ ನಿಯಮಗಳ ಕುರಿತ ವಿವಾದವನ್ನು ಗಮನಿಸಬೇಕು. ಈ ವಿವಾದ ರಾಜಕೀಯ ಪ್ರಹಸನದಂತೆಯೂ ರಂಜಕವಾಗಿಯೂ ಕಾಣಿಸುತ್ತಿದೆ.</em></blockquote>.<p>ಯುಜಿಸಿ ಇತ್ತೀಚೆಗೆ ರೂಪಿಸಿರುವ ನಿಯಮ ಗಳ ಕುರಿತು ಉಂಟಾಗಿರುವ ವಿವಾದವು ಉನ್ನತ ಶಿಕ್ಷಣದಲ್ಲಿ ಸಮಾನತೆಯ ಕುರಿತ ಚರ್ಚೆ ಅಲ್ಲ. ಇದು ನಿಜ ಜೀವನದ ಮೇಲೆ ಪರಿಣಾಮ ಉಂಟು ಮಾಡಬಲ್ಲ ರಾಜಕೀಯ ಪ್ರಹಸನವಾಗಿದೆ. ಈ ನಾಟಕದ ಪ್ರತಿ ದೃಶ್ಯದಲ್ಲಿಯೂ ಆರಂಭದಿಂದ ಕೊನೆಯವರೆಗೆ ಸಿನಿಕತನದ ದುರ್ವಾಸನೆ ರಾಚುತ್ತಿದೆ. ಮೊದಲಿಗೆ ಪಾತ್ರದ ಅದಲು ಬದಲು ನಡೆಯಿತು. ಸಾಮಾಜಿಕ ನ್ಯಾಯದ ಕುರಿತು ಅಸಡ್ಡೆ ಹೊಂದಿರುವ ಆಡಳಿತ ವ್ಯವಸ್ಥೆಯು ತಾರತಮ್ಯ ವಿರೋಧಿ ಕ್ರಮವನ್ನುಮುಂದೊಡ್ಡಿತು. ನಂತರ ಭಿನ್ನಮತವನ್ನು ಸೃಷ್ಟಿಸಲಾಯಿತು. ಬಳಿಕ, ನಿಷ್ಠಾವಂತರು ತಮ್ಮದೇ ಸರ್ಕಾರದ ವಿರುದ್ಧ ಬೀದಿಗಿಳಿದರು. ಇಲ್ಲಿ ಸಂತ್ರಸ್ತತೆ ತಲೆಕೆಳಗಾದ ರೀತಿಯಲ್ಲಿ ವ್ಯಕ್ತವಾಯಿತು. ಪ್ರಬಲರು ತಮಗೆ ಕಿರುಕುಳ ಉಂಟಾಗುತ್ತಿದೆ ಎಂದು ಹೇಳಿ ಕೊಂಡರು. ಕೊನೆಯಲ್ಲಿ, ಜಾಣಮರೆವಿನ ತಂತ್ರ ಪ್ರಯೋಗವೂ ಆಯಿತು. ಇಂತಹ ನಿಯಮಗಳನ್ನು ರೂಪಿಸಬೇಕು ಎಂದು ನಿರ್ದೇಶನ ನೀಡಿದ್ದ ಅದೇ ನ್ಯಾಯಪೀಠವು ನಿಯಮಗಳ ಕುರಿತು ಭಾರೀ ಅಸಮಾಧಾನ ವ್ಯಕ್ತಪಡಿಸಿ, ತಡೆ ನೀಡಿತು.ಸಂವಿಧಾನದಲ್ಲಿ ಬರೆಯಲಾಗಿರುವ ನಾಜೂಕಾದ ಸಾಮಾಜಿಕ ಕರಾರು ಧ್ವಂಸಗೊಳ್ಳುವ ಎಚ್ಚರಿಕೆಯನ್ನು ಇದು ನೀಡಿಲ್ಲ ಎಂದಾದರೆ, ಪ್ರತಿ ಹಂತವೂ ಕುತೂಹಲ ಕಾರಿಯೂ ಮನರಂಜನಾತ್ಮಕವೂ ಆಗಿತ್ತು. </p><p>ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಾಮಾಜಿಕ ತಾರತಮ್ಯ ಇದೆ ಅಥವಾ ಇಲ್ಲ ಎಂಬುದರ ಕುರಿತು ಅಲ್ಲ ಈ ವಿವಾದ. ಈ ಬಗ್ಗೆ ನಮಗೆ ಸಂದೇಹವೇನೂ ಬೇಡ. ಎನ್. ಸುಕುಮಾರ್ ಅವರ ಇತ್ತೀಚಿನ ಪುಸ್ತಕ ‘ಕಾಸ್ಟ್ ಡಿಸ್ಕ್ರಿಮಿನೇಷನ್ ಆ್ಯಂಡ್ ಎಕ್ಸ್ಕ್ಲೂಷನ್ ಇನ್ ಇಂಡಿಯನ್ ಯುನಿವರ್ಸಿಟೀಸ್: ಎ ಕ್ರಿಟಿಕಲ್ ರಿಫ್ಲೆಕ್ಷನ್’ (ರೂಟ್ಲೆಜ್, 2023) ಈ ಕುರಿತು ನಿಮ್ಮ ಎಲ್ಲ ಅನುಮಾನಗಳನ್ನು ಪರಿಹರಿಸು ತ್ತದೆ. ಈ ವಿಚಾರದ ಕುರಿತು ತಮಗೆ ಇದ್ದ ಅರಿವು ಮತ್ತು ಸಮೀಕ್ಷೆಗಳಿಂದ ಪಡೆದ ಮಾಹಿತಿ, ವ್ಯಕ್ತಿಗತ ಅನುಭವಗಳು ಮತ್ತು ಸಾಂಸ್ಥಿಕ ವಿಶ್ಲೇಷಣೆಗಳ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಜಾತಿ ತಾರತಮ್ಯವು ವ್ಯವಸ್ಥಿತವಾಗಿದೆ ಎಂಬುದನ್ನು ಅವರು ವಿವರಿಸುತ್ತಾರೆ. ಜಾತಿ ಬಂಡವಾಳವು ಆಧುನಿಕ ಬಂಡವಾಳವಾಗಿ ಪರಿವರ್ತನೆ ಆಗಿರುವುದರ ಕುರಿತು ಸತೀಶ್ ದೇಶಪಾಂಡೆ ಅವರ ಸಿದ್ಧಾಂತವನ್ನು ಸುಕುಮಾರ್ ಅವರು ‘ಸಾಮಾಜಿಕ ವಿಶ್ವವಿಜ್ಞಾನ’ ಎಂದು ಅಭಿವೃದ್ಧಿಪಡಿಸಿದ್ದಾರೆ. ಸಾಮಾಜಿಕ ವಿಶ್ವವಿಜ್ಞಾನ ಎಂದರೆ, ಚಾರಿತ್ರಿಕವಾಗಿ ಜಾತಿಗೆ ಇರುವ ವಿಶೇಷ ಹಕ್ಕು ಮತ್ತು ಸಾಂಸ್ಕೃತಿಕ ಬಂಡವಾಳವನ್ನು ವ್ಯಕ್ತಿಗತ ಬೌದ್ಧಿಕ ಸಾಧನೆಯಾಗಿ ಬಿಂಬಿಸುವ ಪ್ರತಿಭೆಯ ಜಾತಿ ಆಧಾರಿತ ಸಿದ್ಧಾಂತ.</p><p>ಕೆಲವು ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಕರೆಯುವ ಹೆಸರು ಗಳನ್ನು ಗಮನಿಸಿದರೆ ಅವಮಾನದಿಂದ ತಲೆತಗ್ಗಿಸು ವಂತಾಗುತ್ತದೆ. ಆ ಹೆಸರುಗಳೆಂದರೆ, ‘ಮೀಸಲು ಮಕ್ಕಳು’, ‘ಕೆಟಗರಿ ಮಕ್ಕಳು’, ‘ಸರ್ಕಾರಿ ಬ್ರಾಹ್ಮಣ’ ಇತ್ಯಾದಿ ಮತ್ತು ಜಾತಿ ಬೈಗುಳಗಳನ್ನು ಮುದ್ರಿಸಲು ಸಾಧ್ಯವಿಲ್ಲ. ಪ್ರವೇಶ, ಮೇಲ್ವಿಚಾರಣೆ, ಹಾಸ್ಟೆಲ್ ಜೀವನ, ದೈನಂದಿನ ಆಡಳಿತ ಮತ್ತು ಶಿಸ್ತುಕ್ರಮದಲ್ಲಿ ಜಾತಿ ಪೂರ್ವಗ್ರಹ ವ್ಯಾಪಿಸಿದೆ. 10 ವಿ.ವಿಗಳ ಪರಿಶಿಷ್ಟ ಜಾತಿಗೆ ಸೇರಿದ 600 ವಿದ್ಯಾರ್ಥಿಗಳ ಸಂದರ್ಶನವನ್ನು ಸುಕುಮಾರ್ ನಡೆಸಿದ್ದಾರೆ; ಅವರಲ್ಲಿ ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಮೌಖಿಕ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ತಾರತಮ್ಯ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಿಕ್ಷಕರಿಂದಲೇ ತಾರತಮ್ಯ ಉಂಟಾಗುತ್ತಿದೆ ಎಂದು ಶೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಮೇಲ್ವಿಚಾರಣೆಯಲ್ಲಿಯೂ ಶೋಷಣೆಗೆ ಒಳಗಾಗಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿಕೊಂಡಿ ದ್ದಾರೆ. ಈ ಪುಸ್ತಕದಲ್ಲಿ ಗುರುತಿಸಿರುವ ತಾರತಮ್ಯವು ಒಬಿಸಿಯಂತಹ ಇತರ ವರ್ಗಗಳಲ್ಲಿ ಹೇಗೆ ಕಾಣಿಸಿಕೊಂಡಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಆದರೆ, ವಿ.ವಿಗಳು ಪ್ರಜಾಸತ್ತಾತ್ಮಕ ಅವಕಾಶಗಳನ್ನು ಒದಗಿಸುವ ಬದಲು ಬಹಿಷ್ಕಾರಕಾರಿ ಅನುಭವ ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ ಎಂಬ ಕ್ರೂರ ಸತ್ಯವನ್ನು ನೀವು ಪ್ರಶ್ನಿಸಲು ಸಾಧ್ಯವಿಲ್ಲ. </p><p>ಈ ರೋಗಕ್ಕೆ ಮದ್ದೇನು ಎಂಬುದರ ಕುರಿತು ಈ ಚರ್ಚೆ ಅಲ್ಲ ಎಂಬುದನ್ನು ನಾವು ನೆನಪಿಡಬೇಕು. ಈ ಸವಾಲನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಇಚ್ಛೆ ಎರಡೂ ಕಡೆಗಳಲ್ಲಿಯೂ ಕಾಣಿಸುವುದಿಲ್ಲ. 2012ರಲ್ಲಿ ಮೂಲ ನಿಯಮಗಳನ್ನು ರೂಪಿಸಿದ ಸಮಿತಿಯಲ್ಲಿ ನಾನು ಯುಜಿಸಿ ಸದಸ್ಯ ಎಂಬ ನೆಲೆಯಲ್ಲಿ ಭಾಗಿಯಾಗಿದ್ದೆ ಮತ್ತು ಸಾಂಸ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಇನ್ನೂ ಬಹಳಷ್ಟು ಅದರಲ್ಲಿ ಇರಬೇಕಿತ್ತು ಎಂಬುದನ್ನು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಏನೂ ಇಲ್ಲ. ಈ ವಿಚಾರದಲ್ಲಿ 2026ರ ನಿಯಮಗಳು ಖಂಡಿತವಾಗಿಯೂ ಉತ್ತಮ ಗೊಂಡಿವೆ. ಅದೇ ಹೊತ್ತಿಗೆ, ತಾರತಮ್ಯ ಎಂದರೆ ಏನು ಎಂಬ ಪರಿಕಲ್ಪನೆಯನ್ನು ಹೊಸ ನಿಯಮಗಳು (ಕಿರುಕುಳ, ಸಂತ್ರಸ್ತಭಾವನೆ ಮೂಡಿಸುವುದು ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು) ನಿಸ್ಸಾರಗೊಳಿಸಿವೆ; ಹಾಗೆಯೇ ಮೂಲ ನಿಯಮಗಳಲ್ಲಿ ಇದ್ದ ತಾರತಮ್ಯದ ಉದಾಹರಣೆಸಹಿತ ಪಟ್ಟಿಯನ್ನು ಕೈಬಿಡಲಾಗಿದೆ. </p><p>ವಾಸ್ತವದಲ್ಲಿ ಇವುಗಳಿಂದ ಅಂತಹ ಅನುಕೂಲ ವೇನೂ ಇಲ್ಲ. ಯಾವುದೇ ನಿಯಮದಲ್ಲಿನ ಪದಬಳಕೆ ಹೇಗಿದೆ ಎಂಬುದು ನಿಜವಾದ ಸಮಸ್ಯೆ ಅಲ್ಲವೇ ಅಲ್ಲ; ಬದಲಿಗೆ ಇಂತಹ ಯಾವುದೇ ನಿಯಮದ ಅನುಷ್ಠಾನಕ್ಕೆ ಇರುವ ಇಚ್ಛೆಯ ಕೊರತೆಯೇ ನಿಜವಾದ ಸಮಸ್ಯೆ ಎಂಬುದು ವಿ.ವಿ ವ್ಯವಸ್ಥೆ ಬಲ್ಲ ಎಲ್ಲರಿಗೂ ತಿಳಿದಿದೆ. ಯುಜಿಸಿಯ 2012ರ ನಿಯಮಗಳು ಕಾಗದದಲ್ಲಷ್ಟೇ ಉಳಿದಿದ್ದವು. ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಗೊತ್ತಿರಲಿಲ್ಲ ಮತ್ತು ಅಧಿಕಾರಿಗಳು ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. 2026ರ ನಿಯಮಗಳ ಪರಿಸ್ಥಿತಿಯು ಅದಕ್ಕಿಂತ ಭಿನ್ನವೇನೂ ಆಗುವುದಿಲ್ಲ. ಈ ಬಾರಿ ಸಿಕ್ಕ ಭಾರೀ ಪ್ರಚಾರದಿಂದಾಗಿ ಮುಂದೆ ಸಂತ್ರಸ್ತರಲ್ಲಿ ಕೆಲವರಾದರೂ ತಾರತಮ್ಯ ತಡೆಯ ಹಳೆಯ ನಿಯಮಗಳನ್ನು ಬಳಸಬಹುದು</p><p>ಇದು ಕಾನೂನಿಗೆ ಸಂಬಂಧಿಸಿದ ವಿವಾದ ಅಲ್ಲ ಮತ್ತು ಆಗಿರಬೇಕಾಗಿಯೂ ಇಲ್ಲ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಈ ಹಿಂದಿನ ಮತ್ತು ಹೊಸ ನಿಯಮಗಳಲ್ಲಿರುವ ತಾರತಮ್ಯ ತಡೆ ಅಂಶಗಳೆಲ್ಲವನ್ನೂ ನೇರವಾಗಿ ಸಂವಿಧಾನದಿಂದ ಪಡೆದುಕೊಳ್ಳ ಲಾಗಿದೆ. ‘ಜಾತಿ, ಮತ, ಜನಾಂಗ, ಧರ್ಮ, ಭಾಷೆ, ಲಿಂಗ ಅಥವಾ ಅಂಗವೈಕಲ್ಯ’ದ ಆಧಾರದಲ್ಲಿ ತಾರತಮ್ಯದಿಂದ ರಕ್ಷಣೆ ಕೊಡುವ ಉದ್ದೇಶವನ್ನು ಎರಡೂ ನಿಯಮಗಳು ಹೊಂದಿವೆ; ಜಾತಿ ತಾರತಮ್ಯ ತಡೆಗೆ ಮಹತ್ವ ನೀಡಿವೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ತಾರತಮ್ಯಕ್ಕೆ ಒಳಗಾಗುವ ಹೆಚ್ಚಿನ ಅಪಾಯ ಇದೆ ಎಂದು ನಿರ್ದಿಷ್ಟವಾಗಿ ಹೇಳಿವೆ (ಹೊಸ ನಿಯಮಗಳಲ್ಲಿ ಒಬಿಸಿಯನ್ನೂ ಸೇರಿಸಿ ಕೊಳ್ಳಲಾಗಿದೆ). ಜಾತಿ ತಾರತಮ್ಯಕ್ಕೆ ಒಳಗಾಗಿದ್ದೇವೆ ಎಂದು ದೂರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಗಳಾದ ರೋಹಿತ್ ವೇಮುಲ ಮತ್ತು ಪಾಯಲ್ ತಾಡ್ವಿ ಅವರ ತಾಯಂದಿರು ಸಲ್ಲಿಸಿರುವ ಅರ್ಜಿಯ ಆಧಾರ ದಲ್ಲಿ ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ಸ್ಪಷ್ಟ ಆದೇಶದಿಂದ ಯುಜಿಸಿ ಈಗಿನ ಪರಿಷ್ಕರಣೆ ನಡೆಸಿದೆ. </p><p>ಹಾಗೆ ನೋಡಿದರೆ, ನ್ಯಾಯಮೂರ್ತಿ (ಈಗಿನ ಮುಖ್ಯ ನ್ಯಾಯಮೂರ್ತಿ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲಾ ಬಾಗ್ಚಿ ಅವರ ಪೀಠವು ‘ದೂರು ಪರಿಹಾರ ಸಮಿತಿ’ಯೊಂದನ್ನು ರೂಪಿಸಬೇಕು ಎಂದು 2025ರ ಸೆ. 15ರಂದು ಆದೇಶ ನೀಡಿತ್ತು. ಸಮಿತಿಯಲ್ಲಿ ಶೇ 50ರಷ್ಟು ಸದಸ್ಯರು ಎಸ್ಸಿ/ಎಸ್ಟಿ ಅಥವಾ ಒಬಿಸಿ ಸಮುದಾಯ ದವರಾಗಿಬೇಕು, ಅಧ್ಯಕ್ಷರು ಇದೇ ಸಮುದಾಯ ದವರು ಆಗಿರಬೇಕು ಎಂದೂ ಹೇಳಿತ್ತು. ನಾಲ್ಕು ತಿಂಗಳ ಬಳಿಕ ಅದೇ ಪೀಠವು ವ್ಯಕ್ತಪಡಿಸಿದ ದಿಗಿಲು ವಿಚಿತ್ರ ಅನ್ನಿಸುತ್ತದೆ. ಸಾಮಾನ್ಯ ವರ್ಗದವರ ವಿರುದ್ಧವಾದುದು ಅಥವಾ ಕ್ರೂರವಾದುದು ಹೊಸ ನಿಯಮ ದಲ್ಲಿ ಎಳ್ಳಷ್ಟೂ ಇರಲಿಲ್ಲ. ಗೌತಮ್ ಭಾಟಿಯಾ ಅವರು ಗುರುತಿಸಿರುವಂತೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬಹುಕಾಲದಿಂದ ಹೊಂದಿದ್ದ ನಿಲುವಿಗೆ ಅನುಗುಣವಾಗಿ ಈಗಿನ ತಡೆ ಆದೇಶ ಇಲ್ಲ. </p><p>ಇದೊಂದು ರಾಜಕೀಯ ಸಂಘರ್ಷ ಮತ್ತು ಅದನ್ನು ನಾವು ಎದುರಿಸೋಣ. ಒಂದು ಕಾಲದಲ್ಲಿ ಸಾಮಾಜಿಕ, ಸೈದ್ಧಾಂತಿಕ ಮತ್ತು ರಾಜಕೀಯ ಎನಿಸಿದ್ದ ವಿಚಾರ ಇದು; ಅನುಷ್ಠಾನದ ಸಾಧ್ಯತೆ ಇಲ್ಲದ ನಿಯಮದ ಕುರಿತ ಪ್ರಹಸನದಂತಹ ವಿವಾದದ ಹಿಂದೆ ನಾವು ಅಡಗಿಕೊಳ್ಳುವುದೇ ಇಲ್ಲಿನ ಮುಖ್ಯ ತೊಡಕು. ತನ್ನ ಮುಖ್ಯ ಮತಬ್ಯಾಂಕ್ ‘ಪ್ರಬಲ ಜಾತಿ’ ಹಿಂದೂಗಳ ಜೊತೆಗೆ ಹಿಂದೂ ಸಮಾಜದ ಇತರ ಜಾತಿಗಳ ನಡುವೆಯೂ ಪ್ರವೇಶಿಸಿ ಗೆಲುವಿನ ಸಾಮಾಜಿಕ ಸಮೀಕರಣವೊಂದನ್ನು ಬಿಜೆಪಿ ಕಟ್ಟಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ, ಹಿಂದೂ ಸಮಾಜದ ‘ದುರ್ಬಲ’ ಜಾತಿಗಳ ‘ಜಾತಿ ಗಣತಿ’ಯೂ ಸೇರಿ ಎಲ್ಲ ಬೇಡಿಕೆಗಳ ಈಡೇರಿಕೆಗೆ ಬೇಕಾದುದನ್ನು ಮಾಡಬೇಕಿದೆ. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಕೊಡಬೇಕಾದ ಬೆಲೆ ಎಂಬ ಕಾರಣಕ್ಕೆ ಬಿಜೆಪಿಯ ಮುಖ್ಯ ಮತಬ್ಯಾಂಕ್ ಈ ಎಲ್ಲ ರಿಯಾಯಿತಿಗಳನ್ನು ಈವರೆಗೆ ಸಹಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಪ್ರಾಬಲ್ಯ ಮತ್ತು ಸೈದ್ಧಾಂತಿಕ ಅಭಿಯಾನವು ಇಂತಹ ರಿಯಾಯಿತಿ ಇನ್ನು ಅಗತ್ಯ ಇಲ್ಲ ಎಂದು ‘ಪ್ರಬಲ ಜಾತಿ’ಗಳ ಮುಖ್ಯ ಮತಬ್ಯಾಂಕ್ ನಂಬುವಂತೆ ಮಾಡಿದೆ. ಏನೇ ಆದರೂ ಒಬಿಸಿ ಸಮುದಾಯಗಳವರು ತಾವು ಎಲ್ಲಿ ರೇಖೆ ಎಳೆಯು ತ್ತಾರೋ ಅಲ್ಲಿ ನಿಲ್ಲುತ್ತಾರೆ. ಬಿಜೆಪಿ ಮುಚ್ಚಿ ಇರಿಸಲು ಬಯಸುತ್ತಿದ್ದ ಬಿರುಕು ಈಗ ಬಯಲಾಗುತ್ತದೆ.</p><p>ಈ ಕುರಿತು ನಾವು ಸಂದೇಹಪಡುವುದೇನೂ ಬೇಡ: ಸಂವಿಧಾನದ ಚಿಂತನೆಯಾದ ಸಾಮಾಜಿಕ ನ್ಯಾಯದ ಮೇಲೆ ತೆಳುವಾಗಿ ಮರೆಮಾಚಿ ದಾಳಿ ನಡೆಸಿರುವುದನ್ನು ನೋಡಿದ್ದೇವೆ. ಯುಜಿಸಿಯ ಸಮಾನತೆ ನಿಯಮಗಳು ಉದಾಹರಣೆಯಷ್ಟೆ. ಇಡೀ ಮೀಸಲಾತಿ ವ್ಯವಸ್ಥೆಯೇ ಅವರ ಗುರಿ. ಒಬಿಸಿಯು ಮುಂಚೂಣಿಗೆ ಬಂದಿರುವುದು ನಿಜವಾದ ಅಸಡ್ಡೆ ಸೃಷ್ಟಿ ಮಾಡಿದೆ. ಜಾತಿ ಗಣತಿ ತಕ್ಷಣದ ಸುಳಿವಾಗಿದೆ. ಇದು ಅಧಿಕಾರಕ್ಕಾಗಿ ಹೊಸದಾಗಿ ಆರಂಭ ಗೊಂಡ ಸಾಮಾಜಿಕ ಸಂಘರ್ಷ. ಪಿರಮಿಡ್ನ ಮೇಲ್ಭಾಗ ದಲ್ಲಿರುವವರು ತಮ್ಮ ಇರುವನ್ನು ಬಲವಾಗಿ ಘೋಷಿಸಿಕೊಂಡಿದ್ದಾರೆ. ಸಾಮಾಜಿಕ ಪಿರಮಿಡ್ನ ತಳದಲ್ಲಿ ಇರುವವರು ಈಗ ಸ್ಪಂದಿಸಬೇಕಿದೆ. ಈ ಸಂಘರ್ಷವು ನಮ್ಮ ಗಣರಾಜ್ಯದ ವಿಧಿಯನ್ನು ನಿರ್ಣಯಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>