<p>ಹನಮ್ಯಾ ಅಯೋಧ್ಯೆಯ ಓಣ್ಯಾಗ ಕಣ್ ಕಣ್ ಬಿಟ್ಕೊಂಡ್ ಹೊಂಟಿದ್ದ.</p>.<p>‘ಏಯ್ ರಾಸ್ತಾ ಛೋಡೋ’ ಅಂತ ಖಾಕಿ ತೊಟಗೊಂಡ ಪೇದೆಗಳು ಹನಮ್ಯಾ ಬೀಳೂಹಂಗ್ ದೂಡಿ ಸಾಲಾಗಿ ನಿಂತ್ರು.</p>.<p>ಒಂದ್ ಬಿಳಿ ರಥದಾಗ ಕಾವಿ ಅಂಗಿ ತೊಟ್ಟ ಮನಷ್ಯಾ ಕೈಮುಕ್ಕೊಂತ ಹೊಂಟಿದ್ದಾ! ಅಕಳಂಕ ಸೀತಾರಮಣ ಶ್ರೀ ರಾಮಚಂದ್ರನ ರಾಮರಾಜ್ಯಾದೊಳಗ ಈ ಕಾವಿ ಮನಷ್ಯಾ ಯಾಂವೋ ತಿಳಿಧಂಗಾತು ಹನಮ್ಯಾಗ.</p>.<p>ಇಡೀ ಅಯೋಧ್ಯಾ ಮಿಲಿಟರಿ ಕ್ಯಾಂಪಿನಂಗ ಕಾಣ್ತಿತ್ತು. ಎಲ್ಲಿ ನೋಡಿದ್ರೂ ಖಾಕಿ ಸಮವಸ್ತ್ರ ತೊಟಗೊಂಡ ಮಂದಿ. ಹನಮ್ಯಾ ಹೆದರಕೊಂತ ಒಬ್ಬಾಂವನ ಕೇಳಿದ.</p>.<p>‘ಇದ ಅಯೋಧ್ಯಾ ಹೌದಲ್ರೀ…’</p>.<p>‘ಹೌದಲೇ… ಮತ್ಯಾವೂರಂತ ತಿಳದೀ? ನೋಡಲಿಲ್ಲ ನಮ್ಮ ಸಿಯೆಮ್ಮ ಸಾಯೇಬ್ರನ್ನ…’</p>.<p>ಹನಮ್ಯಾ- ‘ಹೂಂ ರಿ…ಅದss ಬಿಳೇ ರಥದಾಗ ಹೋದರಲ್ರೀ’– ಅಂದ.</p>.<p>‘ರಥಾ ಅಲ್ಲಲೇ ಎಬರೇಶಿ… ಅಂಬಾಸೆಡರ್ ಕಾರು. ಅವರು ಈ ರಾಜ್ಯದ ಮುಖ್ಯಮಂತ್ರಿ...’</p>.<p>‘ಮುಖ್ಯಮಂತ್ರಿ ಸುಮಂತ ಸತ್ತೋದರೇನ್ರಿ’</p>.<p>‘ಯಾ ಸುಮಂತಲೇ! ತಲಿ ಕೆಟ್ತೇನ’.</p>.<p>ಹನಮ್ಯಾ ತಲಿಕೆರಕೊಂತ ‘ರಾಜಾ ಶ್ರೀ ರಾಮಚಂದ್ರ ಅಯೋಧ್ಯಾದಾಗ ಇಲ್ಲೇನ್ರೀ?’</p>.<p>‘ನೀ ಯಾವೂರಾಂವಲೇ... ಯಾ ಯುಗದಾಗ ಅದೀ ನೀನು. ಈ ಭ್ಹೂಮಿ ಆಕಾಸ ಎಲ್ಲಾ ರಾಮಂದss! ಇವತ್ತಿಂದ ಫೈಜಾಬಾದ್ ಹೆಸರು ‘ಅಯೋಧ್ಯಾ’ ಆತು. ರಾಮನ ಏರ್ಪೋರ್ಟ್ ಮತ್ತ ಅವರಪ್ಪ, ದಶರಥನ ಹೆಸರಿಲೇ ಒಂದ್ ಮೆಡಿಕಲ್ ಕಾಲೇಜೂ ಆಕ್ಕೇತಿ’.</p>.<p>‘ಮತ್ತ ಅಷ್ಟೊಕೊಂದ ಕಲ್ಲು ಇಟ್ಟಂಗಿ ಬಿದ್ದಾವಲ್ರೀ, ಭೂಕಂಪ ಗಿಕಂಪ ಬಂದಿತ್ತೇನರಿ? ಊರ ತುಂಬ ಕಲ್ಲು... ಮಣ್ಣು… ಹಂಚಿಪಿಲ್ಲಿ ಕಸಾನ ತುಂಬೇತಿ...’</p>.<p>‘ಇಟ್ಟಂಗಿ ಮತ್ತ ಕಲ್ಲು ರಾಮ ಮಂದಿರ ನಿರ್ಮಾಣಕ್ಕ. ಮತ್ತ ಇದು ಕಸಾ ಅಲ್ಲ, ದೀಪಾವಳಿ ದಿನ ಉರಿದು ಮುರದು ಬುಕಣಿ<br />ಯಾದ ಎಡ್ಡ ಲಕ್ಷ ಮಣ್ಣಿನ ಪಣತಿಗೊಳು’ ಅಂತ ಒಂದ್ ಕುಂಡಿ ಮ್ಯಾಲ ಬಾರಿಸಿಯೇ ಬಿಟ್ಟ…</p>.<p>ಮೈಮ್ಯಾಲ ನೀರ್ ಸುರವಿಧಂಗ ಆಗಿ ಹನಮ್ಯಾ ಚೀರಿಕೊಂಡ… ಅಯ್ಯಯ್ಯಪ್ಪೋ…!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹನಮ್ಯಾ ಅಯೋಧ್ಯೆಯ ಓಣ್ಯಾಗ ಕಣ್ ಕಣ್ ಬಿಟ್ಕೊಂಡ್ ಹೊಂಟಿದ್ದ.</p>.<p>‘ಏಯ್ ರಾಸ್ತಾ ಛೋಡೋ’ ಅಂತ ಖಾಕಿ ತೊಟಗೊಂಡ ಪೇದೆಗಳು ಹನಮ್ಯಾ ಬೀಳೂಹಂಗ್ ದೂಡಿ ಸಾಲಾಗಿ ನಿಂತ್ರು.</p>.<p>ಒಂದ್ ಬಿಳಿ ರಥದಾಗ ಕಾವಿ ಅಂಗಿ ತೊಟ್ಟ ಮನಷ್ಯಾ ಕೈಮುಕ್ಕೊಂತ ಹೊಂಟಿದ್ದಾ! ಅಕಳಂಕ ಸೀತಾರಮಣ ಶ್ರೀ ರಾಮಚಂದ್ರನ ರಾಮರಾಜ್ಯಾದೊಳಗ ಈ ಕಾವಿ ಮನಷ್ಯಾ ಯಾಂವೋ ತಿಳಿಧಂಗಾತು ಹನಮ್ಯಾಗ.</p>.<p>ಇಡೀ ಅಯೋಧ್ಯಾ ಮಿಲಿಟರಿ ಕ್ಯಾಂಪಿನಂಗ ಕಾಣ್ತಿತ್ತು. ಎಲ್ಲಿ ನೋಡಿದ್ರೂ ಖಾಕಿ ಸಮವಸ್ತ್ರ ತೊಟಗೊಂಡ ಮಂದಿ. ಹನಮ್ಯಾ ಹೆದರಕೊಂತ ಒಬ್ಬಾಂವನ ಕೇಳಿದ.</p>.<p>‘ಇದ ಅಯೋಧ್ಯಾ ಹೌದಲ್ರೀ…’</p>.<p>‘ಹೌದಲೇ… ಮತ್ಯಾವೂರಂತ ತಿಳದೀ? ನೋಡಲಿಲ್ಲ ನಮ್ಮ ಸಿಯೆಮ್ಮ ಸಾಯೇಬ್ರನ್ನ…’</p>.<p>ಹನಮ್ಯಾ- ‘ಹೂಂ ರಿ…ಅದss ಬಿಳೇ ರಥದಾಗ ಹೋದರಲ್ರೀ’– ಅಂದ.</p>.<p>‘ರಥಾ ಅಲ್ಲಲೇ ಎಬರೇಶಿ… ಅಂಬಾಸೆಡರ್ ಕಾರು. ಅವರು ಈ ರಾಜ್ಯದ ಮುಖ್ಯಮಂತ್ರಿ...’</p>.<p>‘ಮುಖ್ಯಮಂತ್ರಿ ಸುಮಂತ ಸತ್ತೋದರೇನ್ರಿ’</p>.<p>‘ಯಾ ಸುಮಂತಲೇ! ತಲಿ ಕೆಟ್ತೇನ’.</p>.<p>ಹನಮ್ಯಾ ತಲಿಕೆರಕೊಂತ ‘ರಾಜಾ ಶ್ರೀ ರಾಮಚಂದ್ರ ಅಯೋಧ್ಯಾದಾಗ ಇಲ್ಲೇನ್ರೀ?’</p>.<p>‘ನೀ ಯಾವೂರಾಂವಲೇ... ಯಾ ಯುಗದಾಗ ಅದೀ ನೀನು. ಈ ಭ್ಹೂಮಿ ಆಕಾಸ ಎಲ್ಲಾ ರಾಮಂದss! ಇವತ್ತಿಂದ ಫೈಜಾಬಾದ್ ಹೆಸರು ‘ಅಯೋಧ್ಯಾ’ ಆತು. ರಾಮನ ಏರ್ಪೋರ್ಟ್ ಮತ್ತ ಅವರಪ್ಪ, ದಶರಥನ ಹೆಸರಿಲೇ ಒಂದ್ ಮೆಡಿಕಲ್ ಕಾಲೇಜೂ ಆಕ್ಕೇತಿ’.</p>.<p>‘ಮತ್ತ ಅಷ್ಟೊಕೊಂದ ಕಲ್ಲು ಇಟ್ಟಂಗಿ ಬಿದ್ದಾವಲ್ರೀ, ಭೂಕಂಪ ಗಿಕಂಪ ಬಂದಿತ್ತೇನರಿ? ಊರ ತುಂಬ ಕಲ್ಲು... ಮಣ್ಣು… ಹಂಚಿಪಿಲ್ಲಿ ಕಸಾನ ತುಂಬೇತಿ...’</p>.<p>‘ಇಟ್ಟಂಗಿ ಮತ್ತ ಕಲ್ಲು ರಾಮ ಮಂದಿರ ನಿರ್ಮಾಣಕ್ಕ. ಮತ್ತ ಇದು ಕಸಾ ಅಲ್ಲ, ದೀಪಾವಳಿ ದಿನ ಉರಿದು ಮುರದು ಬುಕಣಿ<br />ಯಾದ ಎಡ್ಡ ಲಕ್ಷ ಮಣ್ಣಿನ ಪಣತಿಗೊಳು’ ಅಂತ ಒಂದ್ ಕುಂಡಿ ಮ್ಯಾಲ ಬಾರಿಸಿಯೇ ಬಿಟ್ಟ…</p>.<p>ಮೈಮ್ಯಾಲ ನೀರ್ ಸುರವಿಧಂಗ ಆಗಿ ಹನಮ್ಯಾ ಚೀರಿಕೊಂಡ… ಅಯ್ಯಯ್ಯಪ್ಪೋ…!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>