‘ನೋಡಾ... ನೀವು ಬ್ಯಾರೆಬ್ಯಾರೆ ದೇವರಿಗೆ ತಪ್ಪು ಕಾಣಿಕೆ ಒಪ್ಪಿಸತೀರಿ, ದುಡ್ಡು, ಬಂಗಾರ ವಜ್ರದ ಆಭರಣಗಳನ್ನು ಒಪ್ಪಿಸತೀರಿ. ಈಗ ಮಾಡಿರೋ ತಪ್ಪು ಮನ್ನಿಸಿ, ಮುಂದೆ ಇನ್ನೂ ದೊಡ್ಡ ತಪ್ಪು ಮಾಡಾಕೆ ಒಪ್ಪಿಗೆ ಕೇಳಿದಂತೆ ಹೌದಿಲ್ಲೋ. ಹಂಗೇ ಉದ್ದಿಮೆದಾರರು ರಾಜಕೀಯ ಪಕ್ಷಗಳಿಗೆ ಕಪ್ಪಕಾಣಿಕೆ ಒಪ್ಪಿಸಿ, ಹಳೆ ತಪ್ಪುಗಳ ತೊಳಕಂಡು, ಹೊಸ ತಪ್ಪು ಮಾಡಾಕೆ ಸಿದ್ಧರಾಗತಾರೆ. ಅದ್ರಾಗೇನು ತಪ್ಪೈತಿ?’ ಬೆಕ್ಕಣ್ಣ ಕಪ್ಪಕಾಣಿಕೆಯ ಹೊಸ ವಾದ ಮಂಡಿಸಿತು.