ಸುಂಡಿಲಿಯು 20 ಲಕ್ಷ ಕೋಟಿಯ ನಿರ್ಮಲಕ್ಕನ ಪ್ಯಾಕೇಜಿನ ಸುದ್ದಿಯನ್ನು ಓದುತ್ತ, ಬಾಹ್ಯಾಕಾಶ, ಗಣಿಗಾರಿಕೆ, ವಿಮಾನಯಾನ ಎಂದೆಲ್ಲ ಬಣ್ಣಿಸಿ, ‘ಸರ್ಕಾರದ ಯೋಜನೆಗಳಿರೋದೆ ಕೆಲವು ಪ್ರಭಾವಿಗಳ ಅನುಕೂಲಕ್ಕೆ. ವಲಸೆ ಕೆಲಸಗಾರರಿಗೆ ರಸ್ತೆ ಮೇಲೆ ಬಸ್ ವ್ಯವಸ್ಥೆ ಸರಿಯಾಗಿ ಮಾಡದಿದ್ದರೇನಂತೆ, ಕೆಲವರಿಗೆ ಬಾಹ್ಯಾಕಾಶಕ್ಕೆ ಏಣಿ ಹಾಕಿಕೊಡಬೇಕು. ಗಣಿ ಕೆಲಸಗಾರರ ಬಾಯಿಗೆ ಮಣ್ಣು ಬಿದ್ರೇನಂತೆ, ಗಣಿಗಾರಿಕೆ ನಡೆಸೋವ್ರಿಗೆ ಹೂಹಾಸಿಗೆ ಹಾಸಬೇಕು. ಕೊರೊನಾ ಮಾರಿಜಾತ್ರೆಯಲ್ಲಿ ಉಂಡು ತೇಗಿದವನೇ ಜಾಣ!’ ಎಂದು ಕೊಂಕು ನಗೆ ಬೀರಿತು.