ಅಷ್ಟೊತ್ತಿಗೆ ಬಸ್ಯಾ, ಎದ್ರ ಬೈತಾರ ಅಂದ್ಕೊಂಡು ಕುತಗೊಂಡೇ ಮೇವಿನ ಸುದ್ದಿ ತಗ್ದ.ಮತ್ತ ಮಿನಿಸ್ಟರು ಗರಂ ಆದ್ರು. ‘ಏನಂತ ತಿಳ್ಕಂಡಿ ನನ್ನ? ಕುತಗೊಂಡು ಮಾತಾಡ್ತೀಯಾ? ಅಷ್ಟ ಸೊಕ್ಕ ನಿನಗ?’ ಅಂತಾ ಕೆಂಡಾಮಂಡಲ ಆದ್ರು. ‘ಇವ್ನ ಹೆಸ್ರ ಬರ್ಕರ್ರಿ. ಆಮ್ಯಾಲ ವಿಚ್ಯಾರ್ಸನ’ ಅಂದು, ‘ಮತ್ತೇನು ಐತಿ ಕೇಳ್ರಿ’ ಅಂದು ನೀರು ಕುಡದ್ರು.