<p>ಸಂಪುಟ ಛದ್ಮವ್ಯೂಹದಲ್ಲಿ ಸಿಲುಕಿದ ರಾಜಾ ಹುಲಿ ವಿಧಾನಸೌಧದ ಕುರಿಕ್ಷೇತ್ರದಲ್ಲಿ ಶಸ್ತ್ರ ಕೆಳಗಿಟ್ಟು ‘ಕುರ್ಚಿ ಉಳಿಸಿಕೊಳ್ಳಲು ನನ್ನ ಮಿತ್ರ ಮಂಡಲಿಯ ವಿರುದ್ಧವೇ ಕತ್ತಿ ಎತ್ತಲಾರೆ ದೇವಾ. ಅಧಿಕಾರಕ್ಕಾಗಿ ನನ್ನ ಜನವನ್ನೇ ಹಣಿಯುವುದು ಪಾಪವಲ್ಲವೇ?’ ಅಂತ ವಿಷಾದ ಯೋಗದಲ್ಲಿ ಕಣ್ಣೀರ್ಗರೆದು ಕೂತನು.</p>.<p>‘ಸ್ವಾರ್ಥ ರಾಜಕೀಯದಲ್ಲಿ ಮಿತ್ರ-ಶತ್ರು, ನೆಂಟ-ಭಂಟ ಎಲ್ಲರೂ ಒಂದೇ. ಮೋದಿ ಮಹರ್ಷಿಗಳ ರೀತಿ ಮೂಗಿಗೆ ತುಪ್ಪ ಹಚ್ಚುವ ಶಾಣಕ್ಯ ತಂತ್ರವನ್ನು ನೋಡಿ ಕಲಿ. ನೀನು ಸ್ಥಿತಪ್ರಜ್ಞನಾಗಿ ನಿನ್ನ ಕರ್ಮವನ್ನು ಮಾಡು, ಫಲಾಫಲಗಳನ್ನು ನನಗೆ ಬಿಡು’ ಎಂದ ಹುಲಿಯ ಹತಾಶೆ ಮತ್ತು ಖಿನ್ನತೆಗಳನ್ನು ನೋಡಿದ ಭಗವಂತ.</p>.<p>‘ರಾಜಕೀಯ ಬದುಕಿನಲ್ಲಿ ಸುಖ-ದುಃಖಗಳಿಗೆ ಕಾರಣವೇನು ಗೋವಿಂದ? ತಂತ್ರ-ಕುತಂತ್ರಗಳು ಏಕಾಗುತ್ತವೆ?’ ರಾಜಾಹುಲಿ ಪ್ರಶ್ನಿಸಿದನು.</p>.<p>‘ನೋಡು ಹುಲಿಯೇ, ರಾಜಕೀಯ ಬದುಕಿ ನಲ್ಲಿ ಸೃಷ್ಟಿ, ಸ್ಥಿತಿ, ಲಯ ಶ್ರದ್ಧಾತ್ರಯಗಳು ನಿರಂತರವು. ಪ್ರಜೆಗಳ ಚೀರ್ತನೆಯನ್ನು ಮರೆತು ನೀನು ಇಲ್ಲಿ ನಿಮಿತ್ತ ಮಾತ್ರ ಎನ್ನುವುದನ್ನು ತಿಳಿ. ಕುರ್ಚಿಯೇ ರಾಜಕೀಯದ ಆತ್ಮ. ಕುರ್ಚಿ ಸಂಸ್ಥಾಪನಾರ್ಥಾಯ ದುಷ್ಕೃತಾಂ ಸಂಭವಾಮಿ ಯುಗೇಯುಗೇ!’</p>.<p>‘ಭಗವಂತ, ನನಗೆ ರಾಜಕೀಯ ವಿಶ್ವರೂಪ ದರ್ಶನ ಮಾಡಿಸು’ ರಾಜಾಹುಲಿ ಉವಾಚ.</p>.<p>‘ಕೇಳು ರಾಜಾಹುಲಿ, ರಾಜಕೀಯ ಕ್ಷೇತ್ರದಲ್ಲಿ ವಯಸ್ಸು, ದುಡ್ಡು, ಅಧಿಕಾರ ಎಂಬ ಮೂರು ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಮೂರು ಅಂಶಗಳನ್ನೂ ಒಮ್ಮೆಗೇ ಹೊಂದಿದ್ದವನಿಗೆ ಉತ್ತರೋತ್ತರ ಶ್ರೇಯಸ್ಸು ಲಭಿಸುತ್ತದೆ. ರಾಜಕೀಯ ಪ್ರವೇಶದ ಪ್ರಥಮ ಹಂತದಲ್ಲಿ ವಯಸ್ಸು-ದುಡ್ಡು ಇರುತ್ತವೆ, ಅಧಿಕಾರವಿರುವುದಿಲ್ಲ. ಎರಡನೇ ಹಂತದಲ್ಲಿ ವಯಸ್ಸು-ಅಧಿಕಾರ ಇರುತ್ತವೆ, ದುಡ್ಡಿರುವುದಿಲ್ಲ. ಮೂರನೇ ಹಾಗೂ ಕೊನೆಯ ಹಂತದಲ್ಲಿ ದುಡ್ಡು-ಅಧಿಕಾರ ಇರುತ್ತವೆ, ಅವನ್ನು ಅನುಭವಿಸುವ ವಯಸ್ಸಿರುವುದಿಲ್ಲ. ಎರಡನೇ ಹಂತದಲ್ಲಿ, ನಿನ್ನ ಹಿತ ಶತ್ರುಗಳಿದ್ದಾರೆ. ನೀನು ಮೂರನೇ ಹಂತದಲ್ಲಿದ್ದೀಯೆ. ಈಗ ಹೂಡು ಬಾಣವನ್ನು!’ ಎಂದ ಪರಮಾತ್ಮನ ಮಾತಿನಂತೆ ರಾಜಾಹುಲಿಯು ಕೆಂಡಹಾಸದಿಂದ ಬಾಣ ಹೂಡಿದುದನ್ನು ನೋಡಿದ ಶತ್ರು ಪಡೆಗಳು ಪೇರಿವಾದ್ಯ ಬಾರಿಸಿಕೊಂಡು ಪಲಾಯನಗೈದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಪುಟ ಛದ್ಮವ್ಯೂಹದಲ್ಲಿ ಸಿಲುಕಿದ ರಾಜಾ ಹುಲಿ ವಿಧಾನಸೌಧದ ಕುರಿಕ್ಷೇತ್ರದಲ್ಲಿ ಶಸ್ತ್ರ ಕೆಳಗಿಟ್ಟು ‘ಕುರ್ಚಿ ಉಳಿಸಿಕೊಳ್ಳಲು ನನ್ನ ಮಿತ್ರ ಮಂಡಲಿಯ ವಿರುದ್ಧವೇ ಕತ್ತಿ ಎತ್ತಲಾರೆ ದೇವಾ. ಅಧಿಕಾರಕ್ಕಾಗಿ ನನ್ನ ಜನವನ್ನೇ ಹಣಿಯುವುದು ಪಾಪವಲ್ಲವೇ?’ ಅಂತ ವಿಷಾದ ಯೋಗದಲ್ಲಿ ಕಣ್ಣೀರ್ಗರೆದು ಕೂತನು.</p>.<p>‘ಸ್ವಾರ್ಥ ರಾಜಕೀಯದಲ್ಲಿ ಮಿತ್ರ-ಶತ್ರು, ನೆಂಟ-ಭಂಟ ಎಲ್ಲರೂ ಒಂದೇ. ಮೋದಿ ಮಹರ್ಷಿಗಳ ರೀತಿ ಮೂಗಿಗೆ ತುಪ್ಪ ಹಚ್ಚುವ ಶಾಣಕ್ಯ ತಂತ್ರವನ್ನು ನೋಡಿ ಕಲಿ. ನೀನು ಸ್ಥಿತಪ್ರಜ್ಞನಾಗಿ ನಿನ್ನ ಕರ್ಮವನ್ನು ಮಾಡು, ಫಲಾಫಲಗಳನ್ನು ನನಗೆ ಬಿಡು’ ಎಂದ ಹುಲಿಯ ಹತಾಶೆ ಮತ್ತು ಖಿನ್ನತೆಗಳನ್ನು ನೋಡಿದ ಭಗವಂತ.</p>.<p>‘ರಾಜಕೀಯ ಬದುಕಿನಲ್ಲಿ ಸುಖ-ದುಃಖಗಳಿಗೆ ಕಾರಣವೇನು ಗೋವಿಂದ? ತಂತ್ರ-ಕುತಂತ್ರಗಳು ಏಕಾಗುತ್ತವೆ?’ ರಾಜಾಹುಲಿ ಪ್ರಶ್ನಿಸಿದನು.</p>.<p>‘ನೋಡು ಹುಲಿಯೇ, ರಾಜಕೀಯ ಬದುಕಿ ನಲ್ಲಿ ಸೃಷ್ಟಿ, ಸ್ಥಿತಿ, ಲಯ ಶ್ರದ್ಧಾತ್ರಯಗಳು ನಿರಂತರವು. ಪ್ರಜೆಗಳ ಚೀರ್ತನೆಯನ್ನು ಮರೆತು ನೀನು ಇಲ್ಲಿ ನಿಮಿತ್ತ ಮಾತ್ರ ಎನ್ನುವುದನ್ನು ತಿಳಿ. ಕುರ್ಚಿಯೇ ರಾಜಕೀಯದ ಆತ್ಮ. ಕುರ್ಚಿ ಸಂಸ್ಥಾಪನಾರ್ಥಾಯ ದುಷ್ಕೃತಾಂ ಸಂಭವಾಮಿ ಯುಗೇಯುಗೇ!’</p>.<p>‘ಭಗವಂತ, ನನಗೆ ರಾಜಕೀಯ ವಿಶ್ವರೂಪ ದರ್ಶನ ಮಾಡಿಸು’ ರಾಜಾಹುಲಿ ಉವಾಚ.</p>.<p>‘ಕೇಳು ರಾಜಾಹುಲಿ, ರಾಜಕೀಯ ಕ್ಷೇತ್ರದಲ್ಲಿ ವಯಸ್ಸು, ದುಡ್ಡು, ಅಧಿಕಾರ ಎಂಬ ಮೂರು ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಮೂರು ಅಂಶಗಳನ್ನೂ ಒಮ್ಮೆಗೇ ಹೊಂದಿದ್ದವನಿಗೆ ಉತ್ತರೋತ್ತರ ಶ್ರೇಯಸ್ಸು ಲಭಿಸುತ್ತದೆ. ರಾಜಕೀಯ ಪ್ರವೇಶದ ಪ್ರಥಮ ಹಂತದಲ್ಲಿ ವಯಸ್ಸು-ದುಡ್ಡು ಇರುತ್ತವೆ, ಅಧಿಕಾರವಿರುವುದಿಲ್ಲ. ಎರಡನೇ ಹಂತದಲ್ಲಿ ವಯಸ್ಸು-ಅಧಿಕಾರ ಇರುತ್ತವೆ, ದುಡ್ಡಿರುವುದಿಲ್ಲ. ಮೂರನೇ ಹಾಗೂ ಕೊನೆಯ ಹಂತದಲ್ಲಿ ದುಡ್ಡು-ಅಧಿಕಾರ ಇರುತ್ತವೆ, ಅವನ್ನು ಅನುಭವಿಸುವ ವಯಸ್ಸಿರುವುದಿಲ್ಲ. ಎರಡನೇ ಹಂತದಲ್ಲಿ, ನಿನ್ನ ಹಿತ ಶತ್ರುಗಳಿದ್ದಾರೆ. ನೀನು ಮೂರನೇ ಹಂತದಲ್ಲಿದ್ದೀಯೆ. ಈಗ ಹೂಡು ಬಾಣವನ್ನು!’ ಎಂದ ಪರಮಾತ್ಮನ ಮಾತಿನಂತೆ ರಾಜಾಹುಲಿಯು ಕೆಂಡಹಾಸದಿಂದ ಬಾಣ ಹೂಡಿದುದನ್ನು ನೋಡಿದ ಶತ್ರು ಪಡೆಗಳು ಪೇರಿವಾದ್ಯ ಬಾರಿಸಿಕೊಂಡು ಪಲಾಯನಗೈದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>