<p>‘ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ’ ತಾತಾ, ಇಲಿ ಕಂಡೇಟಿಗೆ ಬೆಕ್ಕು ಹಿಡಿಯಕ್ಕೋಗದು ಬೆಕ್ಕಿನ ಚಾಲು ಅಲ್ಲವಾ?’ ಅಂದ ತುರೇಮಣೆ ಮೊಮ್ಮಗ ತಾತನ ಮುಖ ಕಂಡೇಟಿಗೆ.</p>.<p>‘ಹ್ಞೂಂ ಕನಪ್ಪ, ಇವಾಗಿನ ಬೆಕ್ಕುಗಳು ಕಾಸು, ಸೈಟು ಕಂಡೇಟಿಗೆ ಎಪ್ಪೆಸ್ ಮಾಡಿಬುಡ್ತವೆ. ಅದುಕ್ಕೆ ರೋಡಾದ ರೋಡೆಲ್ಲಾ ಸ್ವಿಮ್ಮಿಂಗ್ ಪೂಲ್ ಆಗ್ಯದೆ! ಈ ಕಳ್ಳ ಬೆಕ್ಕುಗಳು ಪರ್ಸೆಂಟೇಜು ಅಂದ್ರೆ ಪ್ರಾಣ ಬುಡ್ತವೆ. ಈಗ ವಿಧಾನಸೌಧ, ಸರ್ಕಾರಿ ಕಚೇರಿಗಳಲ್ಲಿ ಬಂದು ತುಂಬೋಗ್ಯವೆ ಮಗ’ ಅಂದ್ರು ತುರೇಮಣೆ.</p>.<p>‘ಇದೇನ್ಸಾ ಈ ಥರ ಪಾಠ ಹೇಳಿಕೊಡ್ತಿದ್ದರಿ ಮಗೀಗೆ. ಬೆಕ್ಕಣ್ಣ ಬಂದು ಬೋದಾನು ಹುಸಾರು’ ಅಂತಂದೆ.</p>.<p>‘ಬಿಡಿಎ ಬದಲಿ ಸೈಟು ಮಂಜೂರಿ, ಕಂಟ್ರಾಕ್ಟರ್ ತಾವು ಕೋಟಿ-ಕೋಟಿ ಪರ್ಸೆಂಟೇಜ್ ದುಡ್ಡು, ದಾಖಲೆಗಳನ್ನೇ ತಿದ್ದೋ ಅಕ್ರಮದ ಬೆಕ್ಕುಗಳ ಕಥೆ ಕನೋ ಇದು!’ ತುರೇಮಣೆ ವಿವರಿಸಿದರು.</p>.<p>‘ಕೋರ್ಟು ಬ್ಯಾಡಾ ಕಣ್ರೋ ಅಂತ ಗಿಣಿಗೇಳಿದಂಗೆ ಹೇಳಿದ್ರೂವೆ ಮುಖಂಡರಿಗೆ ಬಿಡಿಎ ಅಡವಾದ ಜಾಗದಲ್ಲಿ ಬದಲಿ ಸೈಟುಗಳು ಕೊಟ್ಟದೆ. ಕೋರ್ಟು ಬೇಜಾರಾಗಗಂಟಾ ಬೈದು ಸುಮ್ಮಗಾಯ್ತದೆ ಅಂತ ಇವರು ಆಡಿದ್ದೇ ಆಟಾಗ್ಯದೆ. ಒಂದಿಬ್ಬರನ್ನ ಜೈಲಿಗಾಕಿದರೆ ಸರೋದದೇನೋ’ ಅಂತು ಯಂಟಪ್ಪಣ್ಣ.</p>.<p>‘ಅಣೈ, ಮುಖಂಡರು, ಅಧಿಕಾರಿಗಳ ಬುದ್ಧಿಗೆ ಲ್ಯಾಂಡುರೋಗದ ವೈರಸ್ ಅಮರಿಕ್ಯಂಡಿರತದೆ. ಮೊದಲು ಸುಮಾರಾದ ಸೈಟು ಕೊಡದು ಆಮೇಲೆ ಕೋಟಿ-ಕೋಟಿ ಸೈಟಿಗೆ ಬದಲಾವಣೆ. ಪಾಪದ ಸಾಲುಮರದ ತಿಮ್ಮಕ್ಕನಿಗೆ ಸೈಟು ಕೊಡಕ್ಕೆ ವರ್ಸ ಹತ್ತಾಯ್ತು. ಮುಖಂಡರು ದುಡಿದು ದಣಿದಿರತರೆ ಅಂತ ಕೂಡಲೇ ಸೈಟು ಕೊಡ್ತರೆ’ ಅಂತ ತುರೇಮಣೆ ತಾರಮ್ಮಯ್ಯ ಆಡಿದರು.</p>.<p>‘ಬುಡಿ ಸಾ, ಬದಲಿ ಜಾಗ, ಅಕ್ರಮ ಮಂಜೂರಿಗಳೆಲ್ಲಾ ಪೂಜೆಯಾದ ಮ್ಯಾಲೆ ಕೊಡೋ ಚರುಪಿದ್ದಂಗೆ. ಅವಾಗ ಕರೆದು ಕರೆದು ಹಂಚಿದ್ರಂತೆ. ಚರುಪು ದೇವರ ಪ್ರಸಾದ ಸಾ!’ ಅಂದುದ್ಕೆ ಎಲ್ಲಾ ನನಗೆ ತಾರಮಾರ ಬೋದು ಹೊಂಟೋದ್ರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ’ ತಾತಾ, ಇಲಿ ಕಂಡೇಟಿಗೆ ಬೆಕ್ಕು ಹಿಡಿಯಕ್ಕೋಗದು ಬೆಕ್ಕಿನ ಚಾಲು ಅಲ್ಲವಾ?’ ಅಂದ ತುರೇಮಣೆ ಮೊಮ್ಮಗ ತಾತನ ಮುಖ ಕಂಡೇಟಿಗೆ.</p>.<p>‘ಹ್ಞೂಂ ಕನಪ್ಪ, ಇವಾಗಿನ ಬೆಕ್ಕುಗಳು ಕಾಸು, ಸೈಟು ಕಂಡೇಟಿಗೆ ಎಪ್ಪೆಸ್ ಮಾಡಿಬುಡ್ತವೆ. ಅದುಕ್ಕೆ ರೋಡಾದ ರೋಡೆಲ್ಲಾ ಸ್ವಿಮ್ಮಿಂಗ್ ಪೂಲ್ ಆಗ್ಯದೆ! ಈ ಕಳ್ಳ ಬೆಕ್ಕುಗಳು ಪರ್ಸೆಂಟೇಜು ಅಂದ್ರೆ ಪ್ರಾಣ ಬುಡ್ತವೆ. ಈಗ ವಿಧಾನಸೌಧ, ಸರ್ಕಾರಿ ಕಚೇರಿಗಳಲ್ಲಿ ಬಂದು ತುಂಬೋಗ್ಯವೆ ಮಗ’ ಅಂದ್ರು ತುರೇಮಣೆ.</p>.<p>‘ಇದೇನ್ಸಾ ಈ ಥರ ಪಾಠ ಹೇಳಿಕೊಡ್ತಿದ್ದರಿ ಮಗೀಗೆ. ಬೆಕ್ಕಣ್ಣ ಬಂದು ಬೋದಾನು ಹುಸಾರು’ ಅಂತಂದೆ.</p>.<p>‘ಬಿಡಿಎ ಬದಲಿ ಸೈಟು ಮಂಜೂರಿ, ಕಂಟ್ರಾಕ್ಟರ್ ತಾವು ಕೋಟಿ-ಕೋಟಿ ಪರ್ಸೆಂಟೇಜ್ ದುಡ್ಡು, ದಾಖಲೆಗಳನ್ನೇ ತಿದ್ದೋ ಅಕ್ರಮದ ಬೆಕ್ಕುಗಳ ಕಥೆ ಕನೋ ಇದು!’ ತುರೇಮಣೆ ವಿವರಿಸಿದರು.</p>.<p>‘ಕೋರ್ಟು ಬ್ಯಾಡಾ ಕಣ್ರೋ ಅಂತ ಗಿಣಿಗೇಳಿದಂಗೆ ಹೇಳಿದ್ರೂವೆ ಮುಖಂಡರಿಗೆ ಬಿಡಿಎ ಅಡವಾದ ಜಾಗದಲ್ಲಿ ಬದಲಿ ಸೈಟುಗಳು ಕೊಟ್ಟದೆ. ಕೋರ್ಟು ಬೇಜಾರಾಗಗಂಟಾ ಬೈದು ಸುಮ್ಮಗಾಯ್ತದೆ ಅಂತ ಇವರು ಆಡಿದ್ದೇ ಆಟಾಗ್ಯದೆ. ಒಂದಿಬ್ಬರನ್ನ ಜೈಲಿಗಾಕಿದರೆ ಸರೋದದೇನೋ’ ಅಂತು ಯಂಟಪ್ಪಣ್ಣ.</p>.<p>‘ಅಣೈ, ಮುಖಂಡರು, ಅಧಿಕಾರಿಗಳ ಬುದ್ಧಿಗೆ ಲ್ಯಾಂಡುರೋಗದ ವೈರಸ್ ಅಮರಿಕ್ಯಂಡಿರತದೆ. ಮೊದಲು ಸುಮಾರಾದ ಸೈಟು ಕೊಡದು ಆಮೇಲೆ ಕೋಟಿ-ಕೋಟಿ ಸೈಟಿಗೆ ಬದಲಾವಣೆ. ಪಾಪದ ಸಾಲುಮರದ ತಿಮ್ಮಕ್ಕನಿಗೆ ಸೈಟು ಕೊಡಕ್ಕೆ ವರ್ಸ ಹತ್ತಾಯ್ತು. ಮುಖಂಡರು ದುಡಿದು ದಣಿದಿರತರೆ ಅಂತ ಕೂಡಲೇ ಸೈಟು ಕೊಡ್ತರೆ’ ಅಂತ ತುರೇಮಣೆ ತಾರಮ್ಮಯ್ಯ ಆಡಿದರು.</p>.<p>‘ಬುಡಿ ಸಾ, ಬದಲಿ ಜಾಗ, ಅಕ್ರಮ ಮಂಜೂರಿಗಳೆಲ್ಲಾ ಪೂಜೆಯಾದ ಮ್ಯಾಲೆ ಕೊಡೋ ಚರುಪಿದ್ದಂಗೆ. ಅವಾಗ ಕರೆದು ಕರೆದು ಹಂಚಿದ್ರಂತೆ. ಚರುಪು ದೇವರ ಪ್ರಸಾದ ಸಾ!’ ಅಂದುದ್ಕೆ ಎಲ್ಲಾ ನನಗೆ ತಾರಮಾರ ಬೋದು ಹೊಂಟೋದ್ರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>