‘ಪಾರ್ಟಿಯ ಒಳಗೆ ಇದ್ದುಕ್ಯಂದು, ಅಧಿಕಾರ ಸಿಕ್ಕಲಿಲ್ಲ ಅಂತ ಸಿಟುಗಂದು ಬೋದಾಡಿದ್ರೆ ಅದು ಭಿನ್ನಮತ, ಬಂಡಾಯ. ಅವರ ಯೇಗ್ತೇಗೆ ತಕ್ಕಂಗೆ ಕಾಸು-ಕರೇಮಣಿ ಇಸುಗಂದು ‘ವರಿಷ್ಠರ ಮಾತಿಗೆ ತಲೆಬಾಗಿದ್ದೇನೆ’ ಅಂತ ಸಬೂಬು ಹೇಳಕ್ಕುಲ್ವಾ! ಇದೇ ರಾಜಕೀಯದ ಬೆಂಬಲ ಬೆಲೆ. ಮತದಾರರ ಹೆಸರೇಳಿಕ್ಯಂದು ಪಕ್ಷ ಬುಟ್ಟು ಹೋಗುವಾಗ, ಪಕ್ಷಕ್ಕೆ ಬಂದಾಗ ಈಥರ ಒಳ್ಳೆ ಬೆಂಬಲ ಬೆಲೆ ಸಿಕ್ಕಿರತದೆ’ ತುರೇಮಣೆ ವಿವರ ಕೊಟ್ರು.