ಚಟ್ನಿಹಳ್ಳಿ ಐನೋರ ಹೋಟೆಲ್ನಲ್ಲಿ ಟೀ ಸೇವನೆಗೆ ಸೇರಿದ್ದ ಊರ ಹುಡುಗರ ಹಳಸಲು ಮುಖ ನೋಡಿ ತಿಮ್ಮಜ್ಜನ ಕರುಳು ಚುರ್ ಅಂದಿತು.
‘ಮದ್ವೆ ಆಗಲು ಹೆಣ್ಣು ಸಿಗ್ತಿಲ್ಲ ಅಂತ ಕುಂದಗೋಳದ ರೈತ ಯುವಕರು ತಹಶೀಲ್ದಾರರ ಬಳಿ ಗೋಳು ತೋಡಿಕೊಂಡಿದ್ದಾರೆ ಕಣ್ರೋ...’ ಎಂದು ಪೇಪರ್ ಓದಿ ಹೇಳಿದ ತಿಮ್ಮಜ್ಜ, ‘ಅನ್ನದಾತರ ಮನೆ ತುಂಬಿ ಅವರ ಬಾಳು ಬಂಗಾರ ಮಾಡಿ ಅಂತ ಸರ್ಕಾರ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಅಂದ.