‘ಕಾಪಿ ಚೆನ್ನಾಗಿತ್ತೇನೋ?’ ಅಂದೆ ನಾನು. ‘ಕಾಪಿಗೆ ನಂದಿನಿ ಹಾಲೋ, ಇಲ್ಲಾ ನಾಟಿ ಹಸಿಂದಾ?’ ಅಂತಂದ್ರು. ‘ನಂದಿನಿ ಹಾಲೇ ಹಾಕವ್ವ’ ಅಂದೋ. ‘ಯಣ್ಣ ಸಕ್ಕರೆ ಹಾಕ್ಲಾ, ಮಂಡೇದ ಬೆಲ್ಲ ಹಾಕ್ಲಾ’ ಅಂತ ಕೇಳಿದ್ರು. ‘ನಮಗೇನು ಸಕ್ಕರೆ ಕಾಯಿಲೆ ಇಲ್ಲ. ಕಾಪಿ ಬ್ಯಾಡಿ ಬಸ್ಸಿಗೆ ಲೇಟಾತದೆ. ಒಂದ್ಲೋಟ ನೀರು ಕೊಡಿ ಸಾಕು’ ಅಂದುದ್ಕೆ ‘ನೀವು ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಯಾವ ನೀರು ಕುಡದೀರಿ ತುರೇಮಣೆಣ್ಣ, ಹಿಮಾಲಯದ ಮಿನರಲ್ ವಾಟರ್ ಕೊಡನಾ, ಕೆಂಗೇರಿ ಪೆಸಲ್ ವಾಟರ್ ಆತದ’ ಅಂದ್ರು.