‘ಇದೇನು ಕಂಡ್ರಿ ಸಾ, ರಾಜಕಾಲುವೆ ಹೂಳೆತ್ತಕ್ಕೆ ಅಂತ್ಲೇ ಪಾಲಿಕೆ ಐನೂರು ಕೋಟಿ ಖರ್ಚು ಮಾಡ್ಯದಂತೆ!’ ಅಂತಂದ ಚಂದ್ರು.
‘ರಸ್ತೇಲಿ ಹೂಳೆತ್ತಿದ್ಕೆ ಗುಂಡಿ ಆಗ್ಯದೆ ಕಪ್ಪಾ. ಮಳೆ ನಿಂತ ಮ್ಯಾಲೆ ಸೈತಾನ್ ಮಿಶೀನ್ ತಂದು ಎಲ್ಲ ಗುಂಡಿ ಮುಚ್ತೀವಿ ಅಂತ ಓಳು ಬುಡ್ತಲೇ ಬಂದವ್ರಲ್ಲ’ ಯಂಟಪ್ಪಣ್ಣ ಬಾಯ ಮ್ಯಾಲೆ ಬೆಳ್ಳು ಮಡಗಿತು.
‘ಹ್ಞೂಂಕನೇಳ್ಲಾ, ಹಿಂದೆ ಒಬ್ಬರು ಪಾಲಿಕೇಲಿ ಇನ್ನೂರು ಕೋಟಿ ರೂಪಾಯಿ ಹೂಳೆತ್ತಿ ಹೊಂಟೋದ್ರು. ಮಣ್ಣು ಎಲ್ಲೋತೋ ಗೊತ್ತಿಲ್ಲ! ಹೂಳೆತ್ತೋ ಕೆಲಸ ಅಂದ್ರೆ ‘ನಾನು ಮೊದಲು’ ಅಂತ ಕ್ಯೂ ನಿಂತುಗತ್ತರಂತೆ ಪಾಲಿಕೆ ಜನ’ ತುರೇಮಣೆ ಬಾಣ ಬುಟ್ಟರು.
‘ಇವುರ ತಲೆ ಒಳಗೇ ಹೂಳು ತುಂಬ್ಯದೆ’ ಅಂತು ಯಂಟಪ್ಪಣ್ಣ.
‘ಈಗ ಹೂಳೆತ್ತೋ ಸರದಿ ಮುಂದುವರೆಸಿರೋ ಚೋರಾಗ್ರಣಿಗಳಿಗೆ ಏನಂತೀರಾ ಸಾ?’ ಕೇಳಿದೆ.