‘ಅಲ್ಲಾ ಮನ್ನೆ ಬಿಜೆಪಿಯೋರು ಎಲೆಕ್ಸನ್ನಿಗೆ ಮೊದಲೇ ರೋಡ್ಮ್ಯಾಪ್ ಮಾಡ್ತೀವಿ ಅಂದಿ ದ್ರಲ್ಲೋ. ಈ ರೋಡುಗಳನ್ನೂ ಬೆಕ್ಕಟ್ಟೆ ಬೆಳ್ಳಗೆ ವೈಟ್ ಟಾಪಿಂಗ್ ಮಾಡ್ತರೇನೋ ಬುಡು’ ಅಂತು ಯಂಟಪ್ಪಣ್ಣ.
‘ಅಣೈ ಇದು ಮಂತ್ರಿ, ಬಿಬಿಎಂಪಿ, ಜಲ ಮಂಡಲಿ, ಕೆಇಬಿ ಶಾಮೀಲಾತಿಗಳ ಪ್ರಸಾದ! ಕಂತ್ರಾಟುಗಾರರು ನಲವತ್ತು ಪರ್ಸೆಂಟು ಕೊಟ್ಟು ಇನ್ನೇನು ಕೆಲಸ ಮಾಡ್ಯಾರು?’ ತುರೇಮಣೆಗೆ ಮತ್ತೆ ಬೇಜಾರಾಯ್ತು.