‘ನೋಡ್ಲಾ, ಕಾಸಿಲ್ದೆ ಕಂಗೆಟ್ಟಿರೋ ಸರ್ಕಾರ ಆದಾಯ ಜಾಸ್ತಿ ಮಾಡಿಕ್ಯಬಕು ಅಂದ್ರೆ ಲೋಪ ಸೇವಾ ಆಯೋಗದೇಲಿ ಉಂಡೆದ್ದೋದೋರು, ಐದು ವರ್ಸದೇಲಿ ರೋಡಿಗೆ 20,000 ಕೋಟಿ ತಿಂದು ತೇಗಿದೋರು, ಇಲಾಖೆಗಳನ್ನು ಮಾರಿ ಮಸಾಲೆದೋಸೆ ತಿಂದೋರು, ಬೆಂಗಳೂರು ಪಾಲಾಕ್ಯಂಡಿರೋ ಬಿಬಿಎಂಪಿ, ಬಿಡಿಎ ಉಂಡಾಡಿಗಳು, ರಾಜಕೀಯದ ಸ್ವಯಂಜೂ ವಿಧಾನಸೌಧ, ವಿಕಾಸಸೌಧದೇಲಿ ಇರೋ ಕೇಡು ಪ್ರಾಣಿಗಳ ತೋರಿಸಿ ಸಫಾರಿ ಮಾಡ್ತೀವಿ ಅಂದ್ರೆ ಜನ ಅಡ್ವಾನ್ಸ್ಡ್ ಬುಕಿಂಗ್ ಮಾಡಿಕ್ಯಂದು ಬತ್ತರೆ!’ ಅಂದ್ರು.