‘ಯಾಕಾಗಲ್ಲ, ಅವರೇನು ಕಿಸಿದಿರದು ವಸಿನಾ! ಪರ್ಸೆಂಟೇಜು ತಗಂಡು ದಿಮ್ಮಗಿರೋ ರಾಜಕಾರಣಿಗೆ ಶೇಕಡಾವೀರ ಅಂತ ಕರೀಬೌದಲ್ವೇನಣೈ? ಮಕ್ಕಳು ಓದೋ ಪುಸ್ತಕವ ಉದ್ಗ್ರಂಥ ಮಾಡ್ತೀವಿ ಅಂತ ಹೊಂಟಿರೋರ್ನ ಪಠ್ಯಾವತಾರಿ ಅನ್ನದೆಲೆ ಇನ್ನೇನಂದಾರು? ಕಂಡಾಬಟ್ಟೆ ಟ್ರಾನ್ಸ್ಫರ್ ಮಾಡಿಸಿ ಕಾಸು ಗಿಬರಿರೋನು ವರ್ಗನಿಧಿನೇ ಅಲ್ಲುವೇ? ಸ್ಟೇಜು ಮ್ಯಾಲೆ ಕುತಗಂಡು ತೂಕಡಿಸೋನು ಮೂಢನಿದ್ರಾ ಪ್ರವೀಣ! ಯಾವಾಗಲೂ ಟೀಕೆ ಮಾಡಿಕ್ಯಂಡಿರೋ ವಿರೋಧಪಕ್ಸದ ನಾಯಕ ಕುಟುಕು ಕಸ್ತೂರಿ, ಲಂಚವೇ ಜೀವನ ಅಂದುಕೊಂಡಿರೋ ಅಧಿಕಾರಿ ಕಿಲಾಡಿ ಕಾಸಯ್ಯ, ಎಲ್ಲಾ ಸಿನಿಮಾ ತೋಪಾದ್ರೂ ಇನ್ನೂ ಹೀರೊ ಪಾತ್ರನೇ ಬೇಕು ಅನ್ನೋನು ಬೋರಿಂಗ್ ಸ್ಟಾರ್! ಕಳ್ಳ ವೋಟು ಹಾಕಿಸ್ಕಂಡು ಗೆದ್ದು ಶಾಸಕನಾದೋನು ಮುದ್ರಾರಾಕ್ಷಸ, ಅಧಿಕಾರ ಪಡೆಯಕ್ಕೆ ಮಾಟ-ಮಂತ್ರ ಮಾಡಿಸೋನು ಮಂತ್ರ ಪಿಶಾಚಿ! ಸಾಕಾ ಇನ್ನೂ ಬೇಕಾ?’ ಅಂತಂದರು.