<p>‘ಎಲೆಕ್ಷನ್ ಟೈಮ್ನಲ್ಲಿ ರಾಜಕೀಯ ಪಕ್ಷಗಳು ಹೆಲ್ತ್ ಕ್ಯಾಂಪ್ ನಡೆಸಿ ತಮ್ಮ ನಾಯಕರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ಕೊಡಬೇಕು ಕಣ್ರೀ...’ ಎಂದಳು ಸುಮಿ.</p>.<p>‘ಹೌದು, ಪಾದಯಾತ್ರೆ, ಜಾಥಾ, ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡಿ, ಘೋಷಣೆ ಕೂಗಿ ನಾಯಕರು ದಣಿಯುತ್ತಾರೆ. ಕಾರ್ಯ ಒತ್ತಡದಲ್ಲಿ ಏರುಪೇರಾಗುವ ಅವರ ಬಿ.ಪಿ, ಶುಗರ್, ಖದರ್, ಬೆವರನ್ನು ತಪಾಸಣೆ ಮಾಡಿ ತಹಬಂದಿಗೆ ತರಬೇಕಾಗುತ್ತದೆ’ ಎಂದ ಶಂಕ್ರಿ.</p>.<p>‘ಸಾಲದಕ್ಕೆ, ಮಾಧ್ಯಮದವರು ತಲೆಬಿಸಿಯಾಗುವ ಪ್ರಶ್ನೆ ಕೇಳಿ ಕೆಣಕಿ ನಾಯಕರನ್ನು ಕೆರಳಿಸುತ್ತಾರೆ, ಅಲ್ಲದೆ, ಹೈಕಮಾಂಡ್ ನೀಡುವ ಟಾರ್ಗೆಟ್, ಕೋ-ಕಮಾಂಡ್ಗಳು ಕೊಡುವ ಟಾರ್ಚರ್ ನಾಯಕರನ್ನು ಕಾಡಿ ಕಂಗೆಡಿಸುತ್ತವೆ’.</p>.<p>‘ರಾಜ್ಯ ಪ್ರವಾಸ ಕಾಲದಲ್ಲಿ ಕಾವೇರಿ, ತುಂಗಭದ್ರೆ, ಕೃಷ್ಣೆ, ಕಪಿಲೆ, ನರ್ಮದೆ, ನೇತ್ರಾವತಿ ನದಿಗಳ ನೀರಿನ ಮಿನರಲ್ ವಾಟರ್, ಒಗ್ಗದ ಊಟ ಸೇವನೆ, ಹೊಸ ಜಾಗದ ವಾಸ್ತವ್ಯ ಇವೆಲ್ಲವೂ ನಾಯಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು’.</p>.<p>‘ಅಷ್ಟೆ ಅಲ್ಲಾರೀ, ಶತ್ರುಗಳನ್ನು ಗೆಲ್ಲುವ ಗುರಿ, ಹಿತಶತ್ರುಗಳು ಗಿಲ್ಲುವ ಉರಿ ತಾಳದೆ ತಾಳ್ಮೆ ಕೆಟ್ಟು ನಾಯಕರ ತಲೆಕೆಡಬಹುದು. ನಾಯಕ ತಾನು ಕೆಡುವುದಲ್ಲದೆ ಪಕ್ಷವನ್ನೂ ಕೆಡಿಸುತ್ತಾನೆ ಎಂಬ ಆಪಾದನೆಯೂ ಬರಬಹುದು’.</p>.<p>‘ತಮ್ಮ ನಾಯಕರ ಸೇವೆ ಕೊಂಡಾಡುವ, ವಿಪಕ್ಷದವರ ಲೋಪಗಳನ್ನು ಚೆಂಡಾಡುವ ಉದ್ವೇಗದ ಭಾಷಣ ಮಾಡುವಾಗ ನಾಯಕರ ನಾಲಿಗೆ-ಮೆದುಳು ನಡುವಿನ ಸಂಪರ್ಕ ಕಡಿತಗೊಳ್ಳಬಹುದು. ಪ್ರತಿಪಕ್ಷದವರನ್ನು ಬೈಯ್ಯುವ ಭರದಲ್ಲಿ ಮೆದುಳು ತಾನೊಂದನ್ನು ಬೈಯ್ಯಲು ಹೇಳಿದರೆ, ನಾಲಿಗೆ ಇನ್ನೊಂದನ್ನು ಬೈಯ್ದು ಆಭಾಸ ಮಾಡಬಹುದು’.</p>.<p>‘ಪರಿಸ್ಥಿತಿ ಕುತ್ತಿಗೆಗೆ ಬಂದಾಗ, ಉದ್ದೇಶ ಪೂರ್ವಕವಾಗಿ ಬೈದಿಲ್ಲ ಎಂದು ತಿಪ್ಪೆ ಸಾರಿಸ ಬೇಕಾಗುತ್ತದೆ. ಇಂತಹ ಅನಾರೋಗ್ಯಗಳ ನಿವಾರಣೆಗೆ ನಾಯಕರಿಗೆ ನಾಲಿಗೆ ನಿಗ್ರಹ ಚಿಕಿತ್ಸೆ ನೀಡಿ ಪಕ್ಷದ ಆರೋಗ್ಯ ಕಾಪಾಡಿಕೊಳ್ಳಬೇಕು ಅಲ್ವೇನ್ರೀ?’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಲೆಕ್ಷನ್ ಟೈಮ್ನಲ್ಲಿ ರಾಜಕೀಯ ಪಕ್ಷಗಳು ಹೆಲ್ತ್ ಕ್ಯಾಂಪ್ ನಡೆಸಿ ತಮ್ಮ ನಾಯಕರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ಕೊಡಬೇಕು ಕಣ್ರೀ...’ ಎಂದಳು ಸುಮಿ.</p>.<p>‘ಹೌದು, ಪಾದಯಾತ್ರೆ, ಜಾಥಾ, ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡಿ, ಘೋಷಣೆ ಕೂಗಿ ನಾಯಕರು ದಣಿಯುತ್ತಾರೆ. ಕಾರ್ಯ ಒತ್ತಡದಲ್ಲಿ ಏರುಪೇರಾಗುವ ಅವರ ಬಿ.ಪಿ, ಶುಗರ್, ಖದರ್, ಬೆವರನ್ನು ತಪಾಸಣೆ ಮಾಡಿ ತಹಬಂದಿಗೆ ತರಬೇಕಾಗುತ್ತದೆ’ ಎಂದ ಶಂಕ್ರಿ.</p>.<p>‘ಸಾಲದಕ್ಕೆ, ಮಾಧ್ಯಮದವರು ತಲೆಬಿಸಿಯಾಗುವ ಪ್ರಶ್ನೆ ಕೇಳಿ ಕೆಣಕಿ ನಾಯಕರನ್ನು ಕೆರಳಿಸುತ್ತಾರೆ, ಅಲ್ಲದೆ, ಹೈಕಮಾಂಡ್ ನೀಡುವ ಟಾರ್ಗೆಟ್, ಕೋ-ಕಮಾಂಡ್ಗಳು ಕೊಡುವ ಟಾರ್ಚರ್ ನಾಯಕರನ್ನು ಕಾಡಿ ಕಂಗೆಡಿಸುತ್ತವೆ’.</p>.<p>‘ರಾಜ್ಯ ಪ್ರವಾಸ ಕಾಲದಲ್ಲಿ ಕಾವೇರಿ, ತುಂಗಭದ್ರೆ, ಕೃಷ್ಣೆ, ಕಪಿಲೆ, ನರ್ಮದೆ, ನೇತ್ರಾವತಿ ನದಿಗಳ ನೀರಿನ ಮಿನರಲ್ ವಾಟರ್, ಒಗ್ಗದ ಊಟ ಸೇವನೆ, ಹೊಸ ಜಾಗದ ವಾಸ್ತವ್ಯ ಇವೆಲ್ಲವೂ ನಾಯಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು’.</p>.<p>‘ಅಷ್ಟೆ ಅಲ್ಲಾರೀ, ಶತ್ರುಗಳನ್ನು ಗೆಲ್ಲುವ ಗುರಿ, ಹಿತಶತ್ರುಗಳು ಗಿಲ್ಲುವ ಉರಿ ತಾಳದೆ ತಾಳ್ಮೆ ಕೆಟ್ಟು ನಾಯಕರ ತಲೆಕೆಡಬಹುದು. ನಾಯಕ ತಾನು ಕೆಡುವುದಲ್ಲದೆ ಪಕ್ಷವನ್ನೂ ಕೆಡಿಸುತ್ತಾನೆ ಎಂಬ ಆಪಾದನೆಯೂ ಬರಬಹುದು’.</p>.<p>‘ತಮ್ಮ ನಾಯಕರ ಸೇವೆ ಕೊಂಡಾಡುವ, ವಿಪಕ್ಷದವರ ಲೋಪಗಳನ್ನು ಚೆಂಡಾಡುವ ಉದ್ವೇಗದ ಭಾಷಣ ಮಾಡುವಾಗ ನಾಯಕರ ನಾಲಿಗೆ-ಮೆದುಳು ನಡುವಿನ ಸಂಪರ್ಕ ಕಡಿತಗೊಳ್ಳಬಹುದು. ಪ್ರತಿಪಕ್ಷದವರನ್ನು ಬೈಯ್ಯುವ ಭರದಲ್ಲಿ ಮೆದುಳು ತಾನೊಂದನ್ನು ಬೈಯ್ಯಲು ಹೇಳಿದರೆ, ನಾಲಿಗೆ ಇನ್ನೊಂದನ್ನು ಬೈಯ್ದು ಆಭಾಸ ಮಾಡಬಹುದು’.</p>.<p>‘ಪರಿಸ್ಥಿತಿ ಕುತ್ತಿಗೆಗೆ ಬಂದಾಗ, ಉದ್ದೇಶ ಪೂರ್ವಕವಾಗಿ ಬೈದಿಲ್ಲ ಎಂದು ತಿಪ್ಪೆ ಸಾರಿಸ ಬೇಕಾಗುತ್ತದೆ. ಇಂತಹ ಅನಾರೋಗ್ಯಗಳ ನಿವಾರಣೆಗೆ ನಾಯಕರಿಗೆ ನಾಲಿಗೆ ನಿಗ್ರಹ ಚಿಕಿತ್ಸೆ ನೀಡಿ ಪಕ್ಷದ ಆರೋಗ್ಯ ಕಾಪಾಡಿಕೊಳ್ಳಬೇಕು ಅಲ್ವೇನ್ರೀ?’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>