<p>ರೆಸಾರ್ಟ್ನಲ್ಲಿ ರೆಬೆಲ್ ನಾಯಕರು ಸಭೆ ಸೇರಿದ್ದರು. ನ್ಯೂಸ್ ಚಾನೆಲ್ ಕ್ಯಾಮೆರಾ, ವರದಿಗಾರರ ಕಣ್ಣು ರೆಸಾರ್ಟ್ ಸುತ್ತುವರಿದಿದ್ದವು.</p><p>ಸಭೆ ಮುಗಿಸಿ ನಾಯಕರು ಹೊರಬಂದರು. ‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ಭಿನ್ನಮತೀಯರು ರೆಸಾರ್ಟ್ನಲ್ಲಿ ಕೂಡುವುದು ಸಾಮಾಜಿಕ ಸಮಸ್ಯೆನಾ ಸಾರ್?’ ವರದಿಗಾರರ ಪ್ರಶ್ನೆ. ‘ನಾವು ಪಕ್ಷನಿಷ್ಠರು, ಭಿನ್ನಮತೀಯರಲ್ಲ...’ ನಾಯಕರೊಬ್ಬರು ರೇಗಿದರು.</p><p>‘ಹೌದು ಭಿನ್ನಮತೀಯರಲ್ಲ, ತಿನ್ನೊಮತೀಯರು, ಊಟ ಮಾಡಲು ಸೇರಿದ್ದೆವು... ಹಹ್ಹಹ್ಹಾ’ ಮತ್ತೊಬ್ಬರು ತೇಗಿದರು.</p><p>‘ಊಟಗೋಷ್ಠಿಗೆ ರೆಸಾರ್ಟೇ ಯಾಕೆ?’</p><p>‘ಹೊಂಗೆ ಮರದ ಕೆಳಗೆ ಸಭೆ ಮಾಡಲಾಗುತ್ತೇನ್ರಿ?’ ಸಿಟ್ಟಾದ ಇನ್ನೊಬ್ಬರು, ‘ಸಭೆ ನಡೆಸಲು ಊಟ, ಕುರ್ಚಿ ವ್ಯವಸ್ಥೆ ಇರಬೇಕಲ್ವಾ?’ ಅಂದರು.</p><p>‘ಸಭೆಯ ಮೆನು ಏನೇನಿತ್ತು ಸಾರ್?’</p><p>‘ರುಚಿಕರ ಊಟ, ಹಿತಕರ ಚರ್ಚೆ ಇತ್ತು’.</p><p>‘ದಕ್ಷಿಣ ಪಾದಯಾತ್ರೆಗೆ ಪರ್ಯಾಯವಾದ ನಿಮ್ಮ ಉತ್ತರ ಪಾದಯಾತ್ರೆ ಎಲ್ಲಿಗೆ ಬಂತು?’</p><p>‘ರಿಹರ್ಸಲ್ ಮಾಡ್ತಿದ್ದೀವಿ. ನಮ್ಮಲ್ಲಿ ಕೆಲವರು ದಿನಕ್ಕೆ ಏಳೆಂಟು ಕಿ.ಮೀ. ನಡೆಯುತ್ತಾ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ’.</p><p>‘ಅವರು ದಕ್ಷಿಣ ದಿಕ್ಕಿನಲ್ಲಿ, ನೀವು ಉತ್ತರ ದಿಕ್ಕಿನಲ್ಲಿ ನಡೆದರೆ ಪಕ್ಷದ ಶಿಸ್ತು ದಿಕ್ಕು ತಪ್ಪು<br>ವುದಿಲ್ಲವೇ?’</p><p>‘ಇಲ್ಲ, ದಿಕ್ಕು ತಪ್ಪಿರುವ ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಮ್ಮ ಪಾದಯಾತ್ರೆ. ಸರ್ಕಾರದ ಹಗರಣಗಳನ್ನು ಖಂಡಿಸಿ, ಪ್ರವಾಹ, ಡ್ಯಾಂ ಡ್ಯಾಮೇಜ್ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ನಡಿಗೆ ಹೋರಾಟ ಮಾಡ್ತೀವಿ’.</p><p>‘ನಿಮ್ಮ ಡ್ಯಾಮೇಜ್ ರಿಪೇರಿ ಮಾಡಿಕೊಳ್ಳಲು ಪಾದಯಾತ್ರೆಯ ದಾರಿ ಹಿಡಿದಿದ್ದೀರಿ ಅಂತ ನಿಮ್ಮವರೇ ಹೇಳ್ತಿದ್ದಾರೆ’.</p><p>‘ಅವರಿಗೆ ಕೇರ್ ಮಾಡಲ್ಲ, ಪಾದಯಾತ್ರೆ ಮಾಡ್ತೇವೆ. ಹೈಕಮಾಂಡ್ ತೋರಿಸುವ ದಾರಿಯಲ್ಲಿ ಸಾಗುತ್ತೇವೆ’.</p><p>‘ಅದು ಪಾದಯಾತ್ರೆಗೆ ದಾರಿ ತೋರಿಸುತ್ತಾ?’</p><p>‘ತೋರಿಸುವುದು ಬೇಡ, ಪಾದಯಾತ್ರೆಗೆ ರಹದಾರಿ ನೀಡಿಬಿಟ್ಟರೆ ಸಾಕು...’ ಎಂದು ಹೇಳಿ ನಾಯಕರು ಕಾರು ಹತ್ತಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೆಸಾರ್ಟ್ನಲ್ಲಿ ರೆಬೆಲ್ ನಾಯಕರು ಸಭೆ ಸೇರಿದ್ದರು. ನ್ಯೂಸ್ ಚಾನೆಲ್ ಕ್ಯಾಮೆರಾ, ವರದಿಗಾರರ ಕಣ್ಣು ರೆಸಾರ್ಟ್ ಸುತ್ತುವರಿದಿದ್ದವು.</p><p>ಸಭೆ ಮುಗಿಸಿ ನಾಯಕರು ಹೊರಬಂದರು. ‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ಭಿನ್ನಮತೀಯರು ರೆಸಾರ್ಟ್ನಲ್ಲಿ ಕೂಡುವುದು ಸಾಮಾಜಿಕ ಸಮಸ್ಯೆನಾ ಸಾರ್?’ ವರದಿಗಾರರ ಪ್ರಶ್ನೆ. ‘ನಾವು ಪಕ್ಷನಿಷ್ಠರು, ಭಿನ್ನಮತೀಯರಲ್ಲ...’ ನಾಯಕರೊಬ್ಬರು ರೇಗಿದರು.</p><p>‘ಹೌದು ಭಿನ್ನಮತೀಯರಲ್ಲ, ತಿನ್ನೊಮತೀಯರು, ಊಟ ಮಾಡಲು ಸೇರಿದ್ದೆವು... ಹಹ್ಹಹ್ಹಾ’ ಮತ್ತೊಬ್ಬರು ತೇಗಿದರು.</p><p>‘ಊಟಗೋಷ್ಠಿಗೆ ರೆಸಾರ್ಟೇ ಯಾಕೆ?’</p><p>‘ಹೊಂಗೆ ಮರದ ಕೆಳಗೆ ಸಭೆ ಮಾಡಲಾಗುತ್ತೇನ್ರಿ?’ ಸಿಟ್ಟಾದ ಇನ್ನೊಬ್ಬರು, ‘ಸಭೆ ನಡೆಸಲು ಊಟ, ಕುರ್ಚಿ ವ್ಯವಸ್ಥೆ ಇರಬೇಕಲ್ವಾ?’ ಅಂದರು.</p><p>‘ಸಭೆಯ ಮೆನು ಏನೇನಿತ್ತು ಸಾರ್?’</p><p>‘ರುಚಿಕರ ಊಟ, ಹಿತಕರ ಚರ್ಚೆ ಇತ್ತು’.</p><p>‘ದಕ್ಷಿಣ ಪಾದಯಾತ್ರೆಗೆ ಪರ್ಯಾಯವಾದ ನಿಮ್ಮ ಉತ್ತರ ಪಾದಯಾತ್ರೆ ಎಲ್ಲಿಗೆ ಬಂತು?’</p><p>‘ರಿಹರ್ಸಲ್ ಮಾಡ್ತಿದ್ದೀವಿ. ನಮ್ಮಲ್ಲಿ ಕೆಲವರು ದಿನಕ್ಕೆ ಏಳೆಂಟು ಕಿ.ಮೀ. ನಡೆಯುತ್ತಾ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ’.</p><p>‘ಅವರು ದಕ್ಷಿಣ ದಿಕ್ಕಿನಲ್ಲಿ, ನೀವು ಉತ್ತರ ದಿಕ್ಕಿನಲ್ಲಿ ನಡೆದರೆ ಪಕ್ಷದ ಶಿಸ್ತು ದಿಕ್ಕು ತಪ್ಪು<br>ವುದಿಲ್ಲವೇ?’</p><p>‘ಇಲ್ಲ, ದಿಕ್ಕು ತಪ್ಪಿರುವ ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಮ್ಮ ಪಾದಯಾತ್ರೆ. ಸರ್ಕಾರದ ಹಗರಣಗಳನ್ನು ಖಂಡಿಸಿ, ಪ್ರವಾಹ, ಡ್ಯಾಂ ಡ್ಯಾಮೇಜ್ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ನಡಿಗೆ ಹೋರಾಟ ಮಾಡ್ತೀವಿ’.</p><p>‘ನಿಮ್ಮ ಡ್ಯಾಮೇಜ್ ರಿಪೇರಿ ಮಾಡಿಕೊಳ್ಳಲು ಪಾದಯಾತ್ರೆಯ ದಾರಿ ಹಿಡಿದಿದ್ದೀರಿ ಅಂತ ನಿಮ್ಮವರೇ ಹೇಳ್ತಿದ್ದಾರೆ’.</p><p>‘ಅವರಿಗೆ ಕೇರ್ ಮಾಡಲ್ಲ, ಪಾದಯಾತ್ರೆ ಮಾಡ್ತೇವೆ. ಹೈಕಮಾಂಡ್ ತೋರಿಸುವ ದಾರಿಯಲ್ಲಿ ಸಾಗುತ್ತೇವೆ’.</p><p>‘ಅದು ಪಾದಯಾತ್ರೆಗೆ ದಾರಿ ತೋರಿಸುತ್ತಾ?’</p><p>‘ತೋರಿಸುವುದು ಬೇಡ, ಪಾದಯಾತ್ರೆಗೆ ರಹದಾರಿ ನೀಡಿಬಿಟ್ಟರೆ ಸಾಕು...’ ಎಂದು ಹೇಳಿ ನಾಯಕರು ಕಾರು ಹತ್ತಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>