ವಿಧಾನಸೌಧಕ್ಕೆ ಜೋಡೆತ್ತುಗಳು ಮೆರವಣಿಗೆ ಹೋಗಿ ಬಂದ ಮೇಲೆ ಸಂಜೆ ಎತ್ತುಗಳೆಲ್ಲ ಸಭೆ ಸೇರಿದ್ದವು. ಮಾಜಿ ಮುಖ್ಯಮಂತ್ರಿ, ಭಾವಿ ಮುಖ್ಯಮಂತ್ರಿ, ಹಾಲಿ ಶಾಸಕರುಗಳನ್ನೆಲ್ಲ ಹೊತ್ತ ಜೋಡೆತ್ತುಗಳಿಗೆ ಅಭಿನಂದನೆಯ ಸುರಿಮಳೆಯೇ ಆಯಿತು. ‘ಅಂತೂ ನೀವೂ ವಿಧಾನಸೌಧದ ಮೆಟ್ಟಿಲು ಹತ್ತಿ ಬಂದ್ರಿ...’ ಮುದಿ ಎತ್ತೊಂದು ವ್ಯಂಗ್ಯವಾಡಿತು.
‘ಯಾಕೆ? ಎಂತೆಂಥೋರೋ ಹತ್ತಿದಾರಂತೆ, ನಾವು ಹತ್ತಬಾರದಾ?’ ಜೋಡೆತ್ತುಗಳಿಗೆ ಸಿಟ್ಟು ಬಂತು. ‘ಅದೇ, ಅದೇ ನಾನು ಹೇಳಿದ್ದು... ಎಂತೆಂಥೋರೋ ಹತ್ತಿರುವ ಅಲ್ಲಿಗೆ ನಮ್ಮಂಥ ಕಾಯಕ ಜೀವಿಗಳು, ಪ್ರಾಮಾಣಿಕರು ಹೋಗಬಾರದಿತ್ತು ಅಂತ...’ ಮುದಿ ಎತ್ತು ಮಾತು ತಿರುಗಿಸಿತು.