‘ಪ್ರಶಸ್ತಿ ಯಾರ್ಯಾರಿಗೆ ಕೊಡಬಕು ಅಂತ ಬಸಣ್ಣ, ಸುನೀಲಣ್ಣನಿಗೆ ನಾನು ಮಾರ್ಗಸೂಚಿ ಕೊಡ್ತಾ ಇವ್ನಿ. ದುಂದುಗಾರಿಕೆ ಮಾಡ್ತಿರೋ ಬಿಡಿಎಗೆ ‘ಅಶಿಸ್ತಾವಧಾನಿ’ ಪ್ರಶಸ್ತಿ, ಗುಂಡಿಗಳ ನಡಂತರದೇಲಿ ಆ ಒಂದು, ಆ ಎರಡು ಅಂತ ರೋಡು ಹುಡಿಕ್ಕ್ಯಂದು ನಡೆಯಂಗೆ ಮಾಡಿರೋ ಬಿಬಿಎಂಪಿಗೆ ‘ಗುಂಡಿ ಗಾರುಡಿಗ’ ಪ್ರಶಸ್ತಿ, ವಿದ್ಯುತ್ ನಿಗಮಗಳ ಕಳ್ಳಾಟಕ್ಕೆ ‘ವಿದ್ಯುತ್ ವಿಕ್ರಮ’ ಪ್ರಶಸ್ತಿ, ಕೇಂದ್ರ ಸರ್ಕಾರಕ್ಕೆ ‘ಇಂಧನ ವಿಶಾರದ’ ಪ್ರಶಸ್ತಿ ಕೊಡಬೇಕಾಯ್ತದೆ’ ಅಂದ್ರು ತುರೇಮಣೆ.