<p>ಮಳೆ ಅವಾಂತರದಲ್ಲಿ ಜನ ನೆಂದು ನೊಂದಿದ್ದರು. ಸಂತ್ರಸ್ತರ ಸಂಕಟ ಆಲಿಸಲು ಬಂದ ಶಾಸಕರು, ಹಾನಿಯ ಪರಿಹಾರಕ್ಕೆ ಸರ್ಕಾರದಿಂದ ‘ಮಳೆ ಬಿಲ್ಲು’ ಕೊಡಿಸುವ ಭರವಸೆ ನೀಡಿದರು.</p>.<p>‘ಸಾರ್, ಮನೆಗೆ ಮಳೆನೀರು ನುಗ್ಗಿ ಫಜೀತಿಯಾಗಿದೆ...’ ಜನ ದುಃಖ ಹೇಳಿಕೊಂಡರು.</p>.<p>‘ನಾವು ಸಪ್ಲೈ ಮಾಡೊ ನೀರಿಗೆ ವಾಟರ್ ಟ್ಯಾಕ್ಸ್ ಕಟ್ಟಬೇಕು, ಮಳೆನೀರು ಬಂದರೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ’ ಎಂದು ಜೋಕ್ ಮಾಡಿದ ಶಾಸಕರು, ‘ತಗ್ಗಿನಲ್ಲಿ ಮನೆ ಕಟ್ಟಿಕೊಂಡರೆ ನೀರು ನುಗ್ಗದೇ ಇರುತ್ತೇನ್ರೀ?’ ಎಂದರು.</p>.<p>ಈ ವೇಳೆ ಶಾಸಕರು ರಸ್ತೆ ಗುಂಡಿ ಮುಚ್ಚುವ, ಚರಂಡಿ ಕ್ಲೀನ್ ಮಾಡುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.</p>.<p>‘ಉಯ್ಯೋ ಮಳೆಯಲ್ಲಿ ಗುಂಡಿ ಮುಚ್ಚಿದರೆ ಬಾಳಿಕೆ ಬರುತ್ತಾ?’ ಜನ ಕೇಳಿದರು.</p>.<p>‘ಇಂಜಿನಿಯರ್ಗಳಿಗಿಂಥ ಹೆಚ್ಚಿನ ಜ್ಞಾನ ಐತೇನ್ರೀ ನಿಮಗೆ?’ ಸಣ್ಣದಾಗಿ ರೇಗಿ ದೊಡ್ಡದಾಗಿ ನಕ್ಕರು. ‘ಗುಂಡಿ ಮುಚ್ಚುವ ಕಾಮಗಾರಿ ಬಿಲ್ ಅನ್ನು ಬೇಗ ಕೊಡುಸ್ತೀನಿ’ ಅಂದಾಗ ಎಂಜಿನಿಯರ್, ಗುತ್ತಿಗೆದಾರರು ಆನಂದವಾಗಿ ನಕ್ಕರು.</p>.<p>‘ಮರದ ಕೊಂಬೆ ಬಿದ್ದು ಕಾರು ಜಖಂ ಆಗಿದೆ. ಕಾಂಪೌಂಡ್ ಕುಸಿದಿದೆ. ಸರ್ಕಾರದಿಂದ ಪರಿಹಾರ ಕೊಡಿಸಿ’ ಮಲ್ಲೇಶಿಯ ಮನವಿ.</p>.<p>‘ಕಾರನ್ನು ಶೆಡ್ನಲ್ಲಿ ನಿಲ್ಲಿಸಬೇಕು, ರಸ್ತೆಯಲ್ಲಿ ನಿಲ್ಲಿಸಿದ್ದು ನಿಮ್ಮ ತಪ್ಪು’.</p>.<p>‘ಡಬಲ್ ಬೆಡ್ರೂಂ ಸೈಜಿನ ಶೆಡ್ ಜಾಗದಲ್ಲಿ ಸಿಂಗಲ್ ಬೆಡ್ ರೂಂ ಕಟ್ಟಿ ಬಾಡಿಗೆಗೆ ಕೊಟ್ಟಿದ್ದೇನೆ ಸಾರ್...’</p>.<p>‘ಮಳೆಯಲ್ಲಿ ನೆಂದ ಮಗಳಿಗೆ ಜ್ವರ ಬಂದಿದೆ. ಕೆಸರಿನಲ್ಲಿ ಜಾರಿಬಿದ್ದು ಹೆಂಡ್ತಿ ಸೊಂಟ ಮುರಿದುಕೊಂಡಿದ್ದಾಳೆ. ಸರ್ಕಾರದಿಂದ ಚಿಕಿತ್ಸೆ ಬಾಬ್ತಿನ ‘ಮಳೆ ಬಿಲ್ಲು’ ಕೊಡಿಸಿ ಸಾರ್’ ಮೂರ್ತಿ ಕೇಳ್ಕೊಂಡ.</p>.<p>‘ಮನೆ ಸೋರಿದರೆ, ಹೆಂಡ್ತಿ ಜಾರಿದರೆ ಸರ್ಕಾರ ರಿಪೇರಿ ಖರ್ಚು ಕೊಡಲ್ಲ...’ ಎಂದು ರೇಗುತ್ತಾ ಶಾಸಕರು ಕಾರು ಹತ್ತಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಳೆ ಅವಾಂತರದಲ್ಲಿ ಜನ ನೆಂದು ನೊಂದಿದ್ದರು. ಸಂತ್ರಸ್ತರ ಸಂಕಟ ಆಲಿಸಲು ಬಂದ ಶಾಸಕರು, ಹಾನಿಯ ಪರಿಹಾರಕ್ಕೆ ಸರ್ಕಾರದಿಂದ ‘ಮಳೆ ಬಿಲ್ಲು’ ಕೊಡಿಸುವ ಭರವಸೆ ನೀಡಿದರು.</p>.<p>‘ಸಾರ್, ಮನೆಗೆ ಮಳೆನೀರು ನುಗ್ಗಿ ಫಜೀತಿಯಾಗಿದೆ...’ ಜನ ದುಃಖ ಹೇಳಿಕೊಂಡರು.</p>.<p>‘ನಾವು ಸಪ್ಲೈ ಮಾಡೊ ನೀರಿಗೆ ವಾಟರ್ ಟ್ಯಾಕ್ಸ್ ಕಟ್ಟಬೇಕು, ಮಳೆನೀರು ಬಂದರೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ’ ಎಂದು ಜೋಕ್ ಮಾಡಿದ ಶಾಸಕರು, ‘ತಗ್ಗಿನಲ್ಲಿ ಮನೆ ಕಟ್ಟಿಕೊಂಡರೆ ನೀರು ನುಗ್ಗದೇ ಇರುತ್ತೇನ್ರೀ?’ ಎಂದರು.</p>.<p>ಈ ವೇಳೆ ಶಾಸಕರು ರಸ್ತೆ ಗುಂಡಿ ಮುಚ್ಚುವ, ಚರಂಡಿ ಕ್ಲೀನ್ ಮಾಡುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.</p>.<p>‘ಉಯ್ಯೋ ಮಳೆಯಲ್ಲಿ ಗುಂಡಿ ಮುಚ್ಚಿದರೆ ಬಾಳಿಕೆ ಬರುತ್ತಾ?’ ಜನ ಕೇಳಿದರು.</p>.<p>‘ಇಂಜಿನಿಯರ್ಗಳಿಗಿಂಥ ಹೆಚ್ಚಿನ ಜ್ಞಾನ ಐತೇನ್ರೀ ನಿಮಗೆ?’ ಸಣ್ಣದಾಗಿ ರೇಗಿ ದೊಡ್ಡದಾಗಿ ನಕ್ಕರು. ‘ಗುಂಡಿ ಮುಚ್ಚುವ ಕಾಮಗಾರಿ ಬಿಲ್ ಅನ್ನು ಬೇಗ ಕೊಡುಸ್ತೀನಿ’ ಅಂದಾಗ ಎಂಜಿನಿಯರ್, ಗುತ್ತಿಗೆದಾರರು ಆನಂದವಾಗಿ ನಕ್ಕರು.</p>.<p>‘ಮರದ ಕೊಂಬೆ ಬಿದ್ದು ಕಾರು ಜಖಂ ಆಗಿದೆ. ಕಾಂಪೌಂಡ್ ಕುಸಿದಿದೆ. ಸರ್ಕಾರದಿಂದ ಪರಿಹಾರ ಕೊಡಿಸಿ’ ಮಲ್ಲೇಶಿಯ ಮನವಿ.</p>.<p>‘ಕಾರನ್ನು ಶೆಡ್ನಲ್ಲಿ ನಿಲ್ಲಿಸಬೇಕು, ರಸ್ತೆಯಲ್ಲಿ ನಿಲ್ಲಿಸಿದ್ದು ನಿಮ್ಮ ತಪ್ಪು’.</p>.<p>‘ಡಬಲ್ ಬೆಡ್ರೂಂ ಸೈಜಿನ ಶೆಡ್ ಜಾಗದಲ್ಲಿ ಸಿಂಗಲ್ ಬೆಡ್ ರೂಂ ಕಟ್ಟಿ ಬಾಡಿಗೆಗೆ ಕೊಟ್ಟಿದ್ದೇನೆ ಸಾರ್...’</p>.<p>‘ಮಳೆಯಲ್ಲಿ ನೆಂದ ಮಗಳಿಗೆ ಜ್ವರ ಬಂದಿದೆ. ಕೆಸರಿನಲ್ಲಿ ಜಾರಿಬಿದ್ದು ಹೆಂಡ್ತಿ ಸೊಂಟ ಮುರಿದುಕೊಂಡಿದ್ದಾಳೆ. ಸರ್ಕಾರದಿಂದ ಚಿಕಿತ್ಸೆ ಬಾಬ್ತಿನ ‘ಮಳೆ ಬಿಲ್ಲು’ ಕೊಡಿಸಿ ಸಾರ್’ ಮೂರ್ತಿ ಕೇಳ್ಕೊಂಡ.</p>.<p>‘ಮನೆ ಸೋರಿದರೆ, ಹೆಂಡ್ತಿ ಜಾರಿದರೆ ಸರ್ಕಾರ ರಿಪೇರಿ ಖರ್ಚು ಕೊಡಲ್ಲ...’ ಎಂದು ರೇಗುತ್ತಾ ಶಾಸಕರು ಕಾರು ಹತ್ತಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>