<p>‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ ಎಷ್ಟ್ ಸೊನ್ನೆ ಬರತೈತಿ ಹೇಳು ನೋಡಾಮು’ ಎಂದು ಬೆಕ್ಕಣ್ಣ ಸವಾಲು ಎಸೆದಾಗ ನಿಜಕ್ಕೂ ನಾನು ಹಾರಿಬಿದ್ದೆ.</p><p>ಎಣಿಸತೊಡಗಿದೆ, ಹತ್ತೂ ಬೆರಳುಗಳು ಸಾಲಲಿಲ್ಲ. ಎಷ್ಟು ಸೊನ್ನೆ ಎಂದು ಮೆತ್ತಗೆ ಚಾಟ್ಜಿಪಿಟಿಗೆ ಕೇಳಿದೆ. ಚಾಟ್ಜಿಪಿಟಿ ಕ್ಷಣಾರ್ಧದಲ್ಲಿ ಹೇಳಿತು, ‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ 12 ಸೊನ್ನೆಗಳು’ ಎಂದು.</p><p>‘ಲೆಕ್ಕ ಮಾಡೂದು ಕಲಿ’ ಎಂದು ತಲೆ ಮೇಲೆ ಮೊಟಕಿದ ಬೆಕ್ಕಣ್ಣ ‘ನೋಡು, ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿಗೂ ಹೆಚ್ಚು ಹಣ ಬಂದೈತಂತೆ. ಮಹಾ ಕುಂಭಕ್ಕೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವೂ ಛಲೋ ಸಿಕ್ಕೈತಿ’ ಎಂದು ಹೊಗಳಿತು.</p><p>‘ಮಹಾ ಕುಂಭ ಆಯೋಜನೆ ಮಾಡಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ಖರ್ಚಾಗೈತಂತೆ. ಸುಮಾರು 50 ಕೋಟಿ ಜನ ಕುಂಭಮೇಳಕ್ಕೆ ಹೋಗ್ಯಾರೆ, ಗಂಗೆ ವಳಗೆ ಮುಳುಗು ಹಾಕ್ಯಾರೆ. ಈಗ ಗಂಗಮ್ಮನ ಒಡಲು ಸ್ವಚ್ಛಪಡಿಸಾಕೆ ಎಷ್ಟ್ ರೊಕ್ಕ ಖರ್ಚಾಗಬಹುದು?’ ಎಂದೆ.</p><p>‘ನೀ ಸುಮ್ ಸುಮ್ನೆ ಎಲ್ಲಾದ್ರಾಗೆ ಕೊಂಕು ತೆಗೀಬ್ಯಾಡ. ಆರ್ಥಿಕತೆಗೆ ರೊಕ್ಕ ಬಂದೈತಿ ಅಂದರೆ ಸರ್ಕಾರ ಮಾತ್ರವಲ್ಲ, ಸಣ್ಣ ಪುಟ್ಟ ವ್ಯಾಪಾರಿಗಳು, ಒಟ್ಟಾರೆ ಅಲ್ಲಿನ ಮಂದಿ ಆದಾಯ ಗಳಿಸ್ಯಾರೆ. ಎಲ್ಲರಿಗೂ ಲಕ್ಷ್ಮಿಕಟಾಕ್ಷ ಸಿಕ್ಕೈತಿ’ ಎಂದಿತು.</p><p>‘ಆದ್ರೂ ಗಂಗೆಯ ನೀರನ್ನು ಈಗ ಸ್ವಚ್ಛಪಡಿ ಸಲೇಬೇಕಲ್ಲ! ಅದಕ್ಕೆ ರೊಕ್ಕ ಬ್ಯಾಡೇನು? ಅಲ್ಲಿಯ ನೀರು ಸ್ನಾನಕ್ಕೂ ಯೋಗ್ಯ ಇಲ್ಲಂತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿನೇ ಹೇಳೈತಿ’ ಎಂದೆ.</p><p>‘ಕೊಳೆ ನೀರು ಹರಿದು ಹೋಗತೈತಿ... ಗಂಗೋತ್ರಿಯಿಂದ ಸ್ವಚ್ಛ ನೀರು ಬಂದು ಗಂಗೆಗೆ ಸೇರತಾನೆ ಇರತೈತಿ. ಹರಿಯೋ ನದಿಗಳು ತಮ್ಮಷ್ಟಕ್ಕೇ ಸ್ವಚ್ಛ ಆಗತಾವೆ’ ಎಂದು ಜೋರುದನಿಯಲ್ಲಿ ವಾದಿಸಿದ ಬೆಕ್ಕಣ್ಣ ನನ್ನ ಬಾಯಿ ಮುಚ್ಚಿಸಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ ಎಷ್ಟ್ ಸೊನ್ನೆ ಬರತೈತಿ ಹೇಳು ನೋಡಾಮು’ ಎಂದು ಬೆಕ್ಕಣ್ಣ ಸವಾಲು ಎಸೆದಾಗ ನಿಜಕ್ಕೂ ನಾನು ಹಾರಿಬಿದ್ದೆ.</p><p>ಎಣಿಸತೊಡಗಿದೆ, ಹತ್ತೂ ಬೆರಳುಗಳು ಸಾಲಲಿಲ್ಲ. ಎಷ್ಟು ಸೊನ್ನೆ ಎಂದು ಮೆತ್ತಗೆ ಚಾಟ್ಜಿಪಿಟಿಗೆ ಕೇಳಿದೆ. ಚಾಟ್ಜಿಪಿಟಿ ಕ್ಷಣಾರ್ಧದಲ್ಲಿ ಹೇಳಿತು, ‘ಮೂರು ಲಕ್ಷ ಕೋಟಿ ರೂಪಾಯಿ ಅಂದರೆ 3ರ ಮುಂದೆ 12 ಸೊನ್ನೆಗಳು’ ಎಂದು.</p><p>‘ಲೆಕ್ಕ ಮಾಡೂದು ಕಲಿ’ ಎಂದು ತಲೆ ಮೇಲೆ ಮೊಟಕಿದ ಬೆಕ್ಕಣ್ಣ ‘ನೋಡು, ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿಗೂ ಹೆಚ್ಚು ಹಣ ಬಂದೈತಂತೆ. ಮಹಾ ಕುಂಭಕ್ಕೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವೂ ಛಲೋ ಸಿಕ್ಕೈತಿ’ ಎಂದು ಹೊಗಳಿತು.</p><p>‘ಮಹಾ ಕುಂಭ ಆಯೋಜನೆ ಮಾಡಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ಖರ್ಚಾಗೈತಂತೆ. ಸುಮಾರು 50 ಕೋಟಿ ಜನ ಕುಂಭಮೇಳಕ್ಕೆ ಹೋಗ್ಯಾರೆ, ಗಂಗೆ ವಳಗೆ ಮುಳುಗು ಹಾಕ್ಯಾರೆ. ಈಗ ಗಂಗಮ್ಮನ ಒಡಲು ಸ್ವಚ್ಛಪಡಿಸಾಕೆ ಎಷ್ಟ್ ರೊಕ್ಕ ಖರ್ಚಾಗಬಹುದು?’ ಎಂದೆ.</p><p>‘ನೀ ಸುಮ್ ಸುಮ್ನೆ ಎಲ್ಲಾದ್ರಾಗೆ ಕೊಂಕು ತೆಗೀಬ್ಯಾಡ. ಆರ್ಥಿಕತೆಗೆ ರೊಕ್ಕ ಬಂದೈತಿ ಅಂದರೆ ಸರ್ಕಾರ ಮಾತ್ರವಲ್ಲ, ಸಣ್ಣ ಪುಟ್ಟ ವ್ಯಾಪಾರಿಗಳು, ಒಟ್ಟಾರೆ ಅಲ್ಲಿನ ಮಂದಿ ಆದಾಯ ಗಳಿಸ್ಯಾರೆ. ಎಲ್ಲರಿಗೂ ಲಕ್ಷ್ಮಿಕಟಾಕ್ಷ ಸಿಕ್ಕೈತಿ’ ಎಂದಿತು.</p><p>‘ಆದ್ರೂ ಗಂಗೆಯ ನೀರನ್ನು ಈಗ ಸ್ವಚ್ಛಪಡಿ ಸಲೇಬೇಕಲ್ಲ! ಅದಕ್ಕೆ ರೊಕ್ಕ ಬ್ಯಾಡೇನು? ಅಲ್ಲಿಯ ನೀರು ಸ್ನಾನಕ್ಕೂ ಯೋಗ್ಯ ಇಲ್ಲಂತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿನೇ ಹೇಳೈತಿ’ ಎಂದೆ.</p><p>‘ಕೊಳೆ ನೀರು ಹರಿದು ಹೋಗತೈತಿ... ಗಂಗೋತ್ರಿಯಿಂದ ಸ್ವಚ್ಛ ನೀರು ಬಂದು ಗಂಗೆಗೆ ಸೇರತಾನೆ ಇರತೈತಿ. ಹರಿಯೋ ನದಿಗಳು ತಮ್ಮಷ್ಟಕ್ಕೇ ಸ್ವಚ್ಛ ಆಗತಾವೆ’ ಎಂದು ಜೋರುದನಿಯಲ್ಲಿ ವಾದಿಸಿದ ಬೆಕ್ಕಣ್ಣ ನನ್ನ ಬಾಯಿ ಮುಚ್ಚಿಸಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>