<p>‘ಏನ್ ಮಂಜಮ್ಮ, ಬಸವ ಜಯಂತಿ, ಅಕ್ಷಯ ತೃತೀಯ ಹೆಂಗಾತು? ಚಿನ್ನ ಗಿನ್ನ ಖರೀದಿ ಮಾಡಿದ್ಯೋ ಹೆಂಗೆ?’ ಗುಡ್ಡೆ ಕೇಳಿದ.</p><p>‘ಉಳ್ಳವರು ಚಿನ್ನ ಖರೀದಿಸುವರು, ನಾನೇನು ಮಾಡಲಿ ಬಡವಳಯ್ಯಾ...’ ಎಂದಳು ಮಂಜಮ್ಮ.</p><p>‘ಅಲೆಲೆ, ವಚನ ಹೇಳಾಕೂ ಬರುತ್ತೆ ನಿಂಗೆ’ ದುಬ್ಬೀರ ನಕ್ಕ.</p><p>‘ವಚನ ಹೇಳೋರು ಊರು ತುಂಬಾ ಅದಾರೆ ಬಿಡ್ರಪ್ಪ, ಅದ್ರಲ್ಲೂ ರಾಜಕಾರಣಿಗಳು ಎತ್ತಿದ ಕೈ. ಕಳಬೇಡ ಅಂತಾರೆ, ಕದೀತಾರೆ. ಹುಸಿಯ ನುಡಿಯಲು ಬೇಡ ಅಂತಾರೆ, ಬಾಯಿ ಬಿಟ್ರೆ ಬರೀ ಸುಳ್ಳೇ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತಾರೆ, ಕೆಟ್ಟಾ ಕೊಳಕ ಮಾತಾಡ್ತಾರೆ’ ಮಂಜಮ್ಮಗೆ ಕೋಪ.</p><p>‘ಅದ್ರಲ್ಲೂ ಇವತ್ತೇಳಿದ್ದನ್ನ ನಾಳೆ ಹಂಗೆ ಹೇಳೇ ಇಲ್ಲ ಅಂತಾರೆ ಮಂಜಮ್ಮ, ಟೀವೀಲಿ ಬಂತಲ್ಲ ಅಂದ್ರೆ, ಅವರು ತಿರುಚಿ ಹಾಕಿದಾರೆ ಅಂತಾರೆ’ ತೆಪರೇಸಿಯೂ ಆಕ್ಷೇಪಿಸಿದ.</p><p>‘ಇನ್ನೂ ತೆಲಿ ಕೆಟ್ರೆ ‘ನಾನು ನಾನೇ ಅಲ್ಲ’ ಅಂದುಬಿಡ್ತಾರೆ ಹುಷಾರು’ ಗುಡ್ಡೆ ನಕ್ಕ.</p><p>‘ಅಲ್ಲ, ಅಕ್ಷಯ ತೃತೀಯದ ದಿನ ಚಿನ್ನ ತಗಂಡ್ರೆ ಅದು ಡಬಲ್ ಆಗುತ್ತಂತೆ ಹೌದಾ?’ ದುಬ್ಬೀರ ಕೇಳಿದ.</p><p>‘ಚಿನ್ನ ಒಂದೇನಾ ಅಥ್ವ ಏನ್ ತಗಂಡ್ರೂ ಡಬಲ್ ಆಗುತ್ತಾ?’ ಕೊಟ್ರೇಶಿ ಕೊಕ್ಕೆ.</p><p>‘ಲೇಯ್ ತಗಡು, ಡಬ್ಬಲ್ ತ್ರಿಬ್ಬಲ್ ಆಗಾಕೆ ಅದು ರಾಜಕಾರಣಿಗಳ ಆಸ್ತಿ ಅಲ್ಲ, ಏನೋ ಒಂದು ನಂಬಿಕೆ ಅಷ್ಟೆ’ ತೆಪರೇಸಿ ಹೇಳಿದ.</p><p>‘ಏನು, ತಗಡಾ? ನುಡಿದರೆ ಮುತ್ತಿನ ಹಾರ ಅಷ್ಟೇ ಅಲ್ಲ, ಹೆಂಗಿರಬೇಕು ಗೊತ್ತಾ?’</p><p>‘ಹೆಂಗಿರಬೇಕು?’</p><p>‘ನುಡಿದರೆ ಚಿನ್ನದ ತೂಕದಂತಿರಬೇಕು. ನುಡಿದರೆ ‘ಏಯ್, ಯಾವನೋ ಅಲ್ಲಿ, ಬಾರಯ್ಯ ಇಲ್ಲಿ’ ಎನ್ನದಂತಿರಬೇಕು. ನುಡಿದರೆ ಯೂ ಟರ್ನ್ ಹೊಡೆಯದಂತಿರಬೇಕು. ನುಡಿದರೆ ವಿರೋಧ ಪಕ್ಷದವರೂ ಮೆಚ್ಚಿ ಅಹುದಹುದೆನುವಂತಿರಬೇಕು... ಹೆಂಗೆ?’ ಎಂದ ಕೊಟ್ರೇಶಿ.</p><p>‘ಬೊಂಬಾಟ್ ಕೊಟ್ರ, ಇವತ್ತು ನಿಂಗೆ ಡಬಲ್ ಚಾ!’ ಎಂದ ಗುಡ್ಡೆ. ಎಲ್ಲರೂ ‘ಹೋ...’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಏನ್ ಮಂಜಮ್ಮ, ಬಸವ ಜಯಂತಿ, ಅಕ್ಷಯ ತೃತೀಯ ಹೆಂಗಾತು? ಚಿನ್ನ ಗಿನ್ನ ಖರೀದಿ ಮಾಡಿದ್ಯೋ ಹೆಂಗೆ?’ ಗುಡ್ಡೆ ಕೇಳಿದ.</p><p>‘ಉಳ್ಳವರು ಚಿನ್ನ ಖರೀದಿಸುವರು, ನಾನೇನು ಮಾಡಲಿ ಬಡವಳಯ್ಯಾ...’ ಎಂದಳು ಮಂಜಮ್ಮ.</p><p>‘ಅಲೆಲೆ, ವಚನ ಹೇಳಾಕೂ ಬರುತ್ತೆ ನಿಂಗೆ’ ದುಬ್ಬೀರ ನಕ್ಕ.</p><p>‘ವಚನ ಹೇಳೋರು ಊರು ತುಂಬಾ ಅದಾರೆ ಬಿಡ್ರಪ್ಪ, ಅದ್ರಲ್ಲೂ ರಾಜಕಾರಣಿಗಳು ಎತ್ತಿದ ಕೈ. ಕಳಬೇಡ ಅಂತಾರೆ, ಕದೀತಾರೆ. ಹುಸಿಯ ನುಡಿಯಲು ಬೇಡ ಅಂತಾರೆ, ಬಾಯಿ ಬಿಟ್ರೆ ಬರೀ ಸುಳ್ಳೇ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತಾರೆ, ಕೆಟ್ಟಾ ಕೊಳಕ ಮಾತಾಡ್ತಾರೆ’ ಮಂಜಮ್ಮಗೆ ಕೋಪ.</p><p>‘ಅದ್ರಲ್ಲೂ ಇವತ್ತೇಳಿದ್ದನ್ನ ನಾಳೆ ಹಂಗೆ ಹೇಳೇ ಇಲ್ಲ ಅಂತಾರೆ ಮಂಜಮ್ಮ, ಟೀವೀಲಿ ಬಂತಲ್ಲ ಅಂದ್ರೆ, ಅವರು ತಿರುಚಿ ಹಾಕಿದಾರೆ ಅಂತಾರೆ’ ತೆಪರೇಸಿಯೂ ಆಕ್ಷೇಪಿಸಿದ.</p><p>‘ಇನ್ನೂ ತೆಲಿ ಕೆಟ್ರೆ ‘ನಾನು ನಾನೇ ಅಲ್ಲ’ ಅಂದುಬಿಡ್ತಾರೆ ಹುಷಾರು’ ಗುಡ್ಡೆ ನಕ್ಕ.</p><p>‘ಅಲ್ಲ, ಅಕ್ಷಯ ತೃತೀಯದ ದಿನ ಚಿನ್ನ ತಗಂಡ್ರೆ ಅದು ಡಬಲ್ ಆಗುತ್ತಂತೆ ಹೌದಾ?’ ದುಬ್ಬೀರ ಕೇಳಿದ.</p><p>‘ಚಿನ್ನ ಒಂದೇನಾ ಅಥ್ವ ಏನ್ ತಗಂಡ್ರೂ ಡಬಲ್ ಆಗುತ್ತಾ?’ ಕೊಟ್ರೇಶಿ ಕೊಕ್ಕೆ.</p><p>‘ಲೇಯ್ ತಗಡು, ಡಬ್ಬಲ್ ತ್ರಿಬ್ಬಲ್ ಆಗಾಕೆ ಅದು ರಾಜಕಾರಣಿಗಳ ಆಸ್ತಿ ಅಲ್ಲ, ಏನೋ ಒಂದು ನಂಬಿಕೆ ಅಷ್ಟೆ’ ತೆಪರೇಸಿ ಹೇಳಿದ.</p><p>‘ಏನು, ತಗಡಾ? ನುಡಿದರೆ ಮುತ್ತಿನ ಹಾರ ಅಷ್ಟೇ ಅಲ್ಲ, ಹೆಂಗಿರಬೇಕು ಗೊತ್ತಾ?’</p><p>‘ಹೆಂಗಿರಬೇಕು?’</p><p>‘ನುಡಿದರೆ ಚಿನ್ನದ ತೂಕದಂತಿರಬೇಕು. ನುಡಿದರೆ ‘ಏಯ್, ಯಾವನೋ ಅಲ್ಲಿ, ಬಾರಯ್ಯ ಇಲ್ಲಿ’ ಎನ್ನದಂತಿರಬೇಕು. ನುಡಿದರೆ ಯೂ ಟರ್ನ್ ಹೊಡೆಯದಂತಿರಬೇಕು. ನುಡಿದರೆ ವಿರೋಧ ಪಕ್ಷದವರೂ ಮೆಚ್ಚಿ ಅಹುದಹುದೆನುವಂತಿರಬೇಕು... ಹೆಂಗೆ?’ ಎಂದ ಕೊಟ್ರೇಶಿ.</p><p>‘ಬೊಂಬಾಟ್ ಕೊಟ್ರ, ಇವತ್ತು ನಿಂಗೆ ಡಬಲ್ ಚಾ!’ ಎಂದ ಗುಡ್ಡೆ. ಎಲ್ಲರೂ ‘ಹೋ...’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>