‘ಮೊನ್ನೆ ಶಾಸಕರೊಬ್ಬರು ಅಲವತ್ತು ಕೊಂಡಾರ, ಟೋಲ್ನಾಗೆ ನಮಗೆ ನಿಂದ್ರಿಸಿ ಐಡಿ ಕೇಳಿ ಅವಮಾನಿಸ್ತಾರ. ನಾವೇನು ಶ್ರೀಸಾಮಾನ್ಯರೇನು ಐಡಿಪೈಡಿ ಎಲ್ಲ ತೋರಿಸಿಗೋತ ನಿಂದರಾಕೆ, ನಮಗೆ ಪ್ರತ್ಯೇಕ ಪಥವೇ ಬೇಕು ಅಂತ. ಬರೋಬ್ಬರಿ ಹೇಳ್ಯಾರ. ಟೋಲ್ಗೇಟಿನಾಗೆ ಮಾತ್ರವಲ್ಲ, ಜನಸೇವೆ ಮಾಡಾಕ ಟೊಂಕ ಕಟ್ಟಿ ನಿಂತೋರಿಗೆ ಎಲ್ಲಾ ಕಡಿಗಿ ಓಡಾಡಾಕೆ ಸ್ಪೆಶಲ್ ರಸ್ತೆ ಬೇಕು. ನೆಲದ ಮ್ಯಾಗೆ ವಿಶೇಷ ಪಥ ಮಾಡಿದ್ರ, ಎಲ್ಲಾ ಮಂದೀನೂ ಅದ್ರಾಗೆ ಎಮ್ಮಿ ಹಂಗ ನುಗ್ಗತಾರ. ಶಾಸಕರು, ಸಚಿವರು ಅಂದ್ರ ಕಿಮ್ಮತ್ತಿಲ್ಲೇನ್? ಅವರಿಗೆ ಅಡ್ಡಾಡಕಂತ ಈ ಎಲಿವೇಟೆಡ್ ಎಕ್ಸ್ಪ್ರೆಸ್ ಹೈವೇ ಯೋಜನೆ ತಯಾರು ಮಾಡೀನಿ’ ಉದ್ದಕ್ಕೆ ವಿವರಿಸುತ್ತಲೇ ಇತ್ತು.