<p><strong>ಇಂದಿರಾ ಕೊಲೆಗೆ ಸಂಚು? ಲೋಕಸಭೆಯಲ್ಲಿ ಚಕಮಕಿ</strong></p>.<p>ನವದೆಹಲಿ, ಡಿ. 20– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಕೊಲೆ ಮಾಡಲು ಒಳಸಂಚು ನಡೆಯುತ್ತಿದೆಯೆಂಬ ಪತ್ರಿಕಾ ವರದಿ ಬಗ್ಗೆ ಇಂದು ಲೋಕಸಭೆಯಲ್ಲಿ ಗಲಭೆ, ಗೊಂದಲವುಂಟಾಯಿತು.</p>.<p>ಶ್ರೀಮತಿ ಗಾಂಧಿಯವರನ್ನು ಕೊಲೆ ಮಾಡಿಸಲು ಪಿತೂರಿ ನಡೆಯುತ್ತಿದೆಯೆಂಬ ವರದಿಯನ್ನು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಧಿಕಾರಾರೂಢ ಕಾಂಗ್ರೆಸ್ಸಿನ ಅಮರಸಿಂಗ್ ಸೈಗಾಲ್ ಅವರು ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಕೇಳಿದರು. ಇದು ತುಂಬ ಅಪಾಯಕಾರಿ ಮತ್ತು ಕಳವಳವನ್ನುಂಟು ಮಾಡುವ ವರದಿ ಎಂದು ನುಡಿದ ಸೈಗಾಲ್ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಪಿತೂರಿಯಲ್ಲಿ ಸೇರಿಕೊಂಡಿದೆಯೆಂದು ಆಪಾದಿಸಿದರು.</p>.<p><strong>ತನಗಿಂತ ಹಿರಿಯರಿಲ್ಲವೆಂಬ ಇಂದಿರಾ ಮನೋಭಾವದ ಖಂಡನೆ</strong></p>.<p>ಕಾಂಗ್ರೆಸ್ನಗರ, ಡಿ. 20– ‘ತನಗಿಂತ ಹಿರಿಯರಿಲ್ಲ’ ಎಂಬ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಭಾವನೆಯನ್ನು ಶ್ರೀ ನಿಜಲಿಂಗಪ್ಪನವರು ಖಂಡಿಸುತ್ತ, ತಮ್ಮ ಗುಂಪಿನ ಕಾಂಗ್ರೆಸ್ಸಿಗರ ಪೂರ್ಣಾಧಿವೇಶನವನ್ನು ಇಂದು ಇಲ್ಲಿ ಉದ್ಘಾಟಿಸಿದರು.</p>.<p>‘ಇಂದಿರಾ ಗಾಂಧಿಯವರು ಕಾಂಗ್ರೆಸ್ ನಾಯಕತ್ವವನ್ನು ಯಜಮಾನರ ಗುಂಪೆಂದು ಖಂಡಿಸಿದರು. ಆದರೆ ನಾವು ಕಾಂಗ್ರೆಸ್ಸಿನ ಸೇವಕರು ಮಾತ್ರ. ಪ್ರಧಾನಿಯವರು ಹಿರಿಯ ಯಜಮಾನರಾಗಬೇಕೆಂಬ ಅಪೇಕ್ಷೆಯಿಂದ ನಮ್ಮನ್ನು ಈ ರೀತಿ ಆರೋಪಿಸಿದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದಿರಾ ಕೊಲೆಗೆ ಸಂಚು? ಲೋಕಸಭೆಯಲ್ಲಿ ಚಕಮಕಿ</strong></p>.<p>ನವದೆಹಲಿ, ಡಿ. 20– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಕೊಲೆ ಮಾಡಲು ಒಳಸಂಚು ನಡೆಯುತ್ತಿದೆಯೆಂಬ ಪತ್ರಿಕಾ ವರದಿ ಬಗ್ಗೆ ಇಂದು ಲೋಕಸಭೆಯಲ್ಲಿ ಗಲಭೆ, ಗೊಂದಲವುಂಟಾಯಿತು.</p>.<p>ಶ್ರೀಮತಿ ಗಾಂಧಿಯವರನ್ನು ಕೊಲೆ ಮಾಡಿಸಲು ಪಿತೂರಿ ನಡೆಯುತ್ತಿದೆಯೆಂಬ ವರದಿಯನ್ನು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಧಿಕಾರಾರೂಢ ಕಾಂಗ್ರೆಸ್ಸಿನ ಅಮರಸಿಂಗ್ ಸೈಗಾಲ್ ಅವರು ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಕೇಳಿದರು. ಇದು ತುಂಬ ಅಪಾಯಕಾರಿ ಮತ್ತು ಕಳವಳವನ್ನುಂಟು ಮಾಡುವ ವರದಿ ಎಂದು ನುಡಿದ ಸೈಗಾಲ್ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಪಿತೂರಿಯಲ್ಲಿ ಸೇರಿಕೊಂಡಿದೆಯೆಂದು ಆಪಾದಿಸಿದರು.</p>.<p><strong>ತನಗಿಂತ ಹಿರಿಯರಿಲ್ಲವೆಂಬ ಇಂದಿರಾ ಮನೋಭಾವದ ಖಂಡನೆ</strong></p>.<p>ಕಾಂಗ್ರೆಸ್ನಗರ, ಡಿ. 20– ‘ತನಗಿಂತ ಹಿರಿಯರಿಲ್ಲ’ ಎಂಬ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಭಾವನೆಯನ್ನು ಶ್ರೀ ನಿಜಲಿಂಗಪ್ಪನವರು ಖಂಡಿಸುತ್ತ, ತಮ್ಮ ಗುಂಪಿನ ಕಾಂಗ್ರೆಸ್ಸಿಗರ ಪೂರ್ಣಾಧಿವೇಶನವನ್ನು ಇಂದು ಇಲ್ಲಿ ಉದ್ಘಾಟಿಸಿದರು.</p>.<p>‘ಇಂದಿರಾ ಗಾಂಧಿಯವರು ಕಾಂಗ್ರೆಸ್ ನಾಯಕತ್ವವನ್ನು ಯಜಮಾನರ ಗುಂಪೆಂದು ಖಂಡಿಸಿದರು. ಆದರೆ ನಾವು ಕಾಂಗ್ರೆಸ್ಸಿನ ಸೇವಕರು ಮಾತ್ರ. ಪ್ರಧಾನಿಯವರು ಹಿರಿಯ ಯಜಮಾನರಾಗಬೇಕೆಂಬ ಅಪೇಕ್ಷೆಯಿಂದ ನಮ್ಮನ್ನು ಈ ರೀತಿ ಆರೋಪಿಸಿದರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>