<p>ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಪ್ರತ್ಯೇಕ ಕಾರ್ಪೊರೇಷನ್</p>.<p><strong>ಬೆಂಗಳೂರು, ಜುಲೈ 8–</strong> ರಾಜ್ಯದಲ್ಲಿ ತತ್ಕ್ಷಣ ವಿದ್ಯುತ್ ಉತ್ಪತ್ತಿ ಯೋಜನೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ವಿದ್ಯುತ್ ಕಾರ್ಪೊರೇಷನ್ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ನಿರ್ಧರಿಸಿತು.</p>.<p>‘ಮೈಸೂರು ವಿದ್ಯುತ್ ಕಾರ್ಪೊರೇಷನ್’ ಎಂದು ಹೆಸರು ಪಡೆಯುವ ಈ ಮಂಡಳಿ, ಕಾಳಿ ನದಿ ವಿದ್ಯುತ್ ಯೋಜನೆಯ ಪ್ರಥಮ ಘಟ್ಟದ ಕಾರ್ಯವನ್ನು ಕೈಗೊಳ್ಳುವುದು.</p>.<p>22.5 ಕೋಟಿ ರೂಪಾಯಿ ಖರ್ಚಿನ ಪ್ರಥಮ ಘಟ್ಟದ ಕಾರ್ಯ 71ರಲ್ಲಿ ಆರಂಭವಾಗಿ 73–74ರ ಹೊತ್ತಿಗೆ ಮುಗಿದು, ಎರಡು ಜನರೇಟರುಗಳಿಂದ 3.24 ಮೆಗಾವಾಟ್ನಷ್ಟು ವಿದ್ಯುತ್<br />ಉತ್ಪತ್ತಿಯಾಗುವುದು.</p>.<p><strong>ಪ್ರವಾಸೋದ್ಯಮ ಕಾರ್ಪೊರೇಷನ್ ರಚನೆಗೆ ನಿರ್ಧಾರ</strong></p>.<p><strong>ಬೆಂಗಳೂರು, ಜುಲೈ 8– </strong>ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಕಾರ್ಪೊರೇ ಷನ್ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ಆರಂಭದಲ್ಲಿ ಈ ಸಂಸ್ಥೆಯ ಬಂಡವಾಳ 1 ಕೋಟಿ ರೂಪಾಯಿ.</p>.<p>ಕಾರ್ಪೊರೇಷನ್ ತನ್ನ ಚಟುವಟಿಕೆಗಳ ಬಗ್ಗೆ ವಿವರಗಳನ್ನು ಸಿದ್ಧಪಡಿಸಿದ ನಂತರ ಹೆಚ್ಚು ಬಂಡವಾಳ ಒದಗಿಸುವ ಪ್ರಶ್ನೆಯನ್ನು ಸರ್ಕಾರ ಪರಿಶೀಲಿಸುವು ದೆಂದು ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಪ್ರತ್ಯೇಕ ಕಾರ್ಪೊರೇಷನ್</p>.<p><strong>ಬೆಂಗಳೂರು, ಜುಲೈ 8–</strong> ರಾಜ್ಯದಲ್ಲಿ ತತ್ಕ್ಷಣ ವಿದ್ಯುತ್ ಉತ್ಪತ್ತಿ ಯೋಜನೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ವಿದ್ಯುತ್ ಕಾರ್ಪೊರೇಷನ್ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ನಿರ್ಧರಿಸಿತು.</p>.<p>‘ಮೈಸೂರು ವಿದ್ಯುತ್ ಕಾರ್ಪೊರೇಷನ್’ ಎಂದು ಹೆಸರು ಪಡೆಯುವ ಈ ಮಂಡಳಿ, ಕಾಳಿ ನದಿ ವಿದ್ಯುತ್ ಯೋಜನೆಯ ಪ್ರಥಮ ಘಟ್ಟದ ಕಾರ್ಯವನ್ನು ಕೈಗೊಳ್ಳುವುದು.</p>.<p>22.5 ಕೋಟಿ ರೂಪಾಯಿ ಖರ್ಚಿನ ಪ್ರಥಮ ಘಟ್ಟದ ಕಾರ್ಯ 71ರಲ್ಲಿ ಆರಂಭವಾಗಿ 73–74ರ ಹೊತ್ತಿಗೆ ಮುಗಿದು, ಎರಡು ಜನರೇಟರುಗಳಿಂದ 3.24 ಮೆಗಾವಾಟ್ನಷ್ಟು ವಿದ್ಯುತ್<br />ಉತ್ಪತ್ತಿಯಾಗುವುದು.</p>.<p><strong>ಪ್ರವಾಸೋದ್ಯಮ ಕಾರ್ಪೊರೇಷನ್ ರಚನೆಗೆ ನಿರ್ಧಾರ</strong></p>.<p><strong>ಬೆಂಗಳೂರು, ಜುಲೈ 8– </strong>ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಕಾರ್ಪೊರೇ ಷನ್ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ಆರಂಭದಲ್ಲಿ ಈ ಸಂಸ್ಥೆಯ ಬಂಡವಾಳ 1 ಕೋಟಿ ರೂಪಾಯಿ.</p>.<p>ಕಾರ್ಪೊರೇಷನ್ ತನ್ನ ಚಟುವಟಿಕೆಗಳ ಬಗ್ಗೆ ವಿವರಗಳನ್ನು ಸಿದ್ಧಪಡಿಸಿದ ನಂತರ ಹೆಚ್ಚು ಬಂಡವಾಳ ಒದಗಿಸುವ ಪ್ರಶ್ನೆಯನ್ನು ಸರ್ಕಾರ ಪರಿಶೀಲಿಸುವು ದೆಂದು ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>