ಕೇಂದ್ರದ ‘ಗಡಿ ಸೂತ್ರ’ದ ಬಗ್ಗೆಎಂ.ಪಿ.ಗಳ ಜೊತೆ ಚರ್ಚೆ
ನವದೆಹಲಿ, ಆ.18– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾತುಕತೆಗಾಗಿ ನಾಳೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಲಿರುವ ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತಮ್ಮ ರಾಜ್ಯದಸಂಸತ್ ಸದಸ್ಯರೊಡನೆ ಇಂದು ಸಂಜೆ ಸಮಾಲೋಚನೆ ನಡೆಸಿದರು. ಜನಮತ ಸಂಗ್ರಹ, ತ್ರಿಸದಸ್ಯ ನ್ಯಾಯಮಂಡಲಿ ರಚನೆಯು ಕೇಂದ್ರದ ಆಲೋಚನೆಯಲ್ಲಿರುವ ಕೆಲವು ಸೂತ್ರಗಳು.